ಕಳಸಾ-ಬಂಡೂರಿ ನೀರಿಗಾಗಿ ಹಾಹಾಕಾರ ಮತ್ತು ನೀಚ ರಾಜಕಾರಣ

Author : ಸಿರಿಮನೆ ನಾಗರಾಜ್

Pages 50

₹ 25.00




Year of Publication: 2015
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 94802 86844

Synopsys

ರೈತರಿಗೆ ಸಂಬಂಧಿಸಿದ, ನೀರಿಗೆ ಸಂಬಂಧಿಸಿದ ಹೋರಾಟಗಳ ಸಾಮಾಜಿಕ, ರಾಜಕೀಯ ಆಯಾಮಗಳು ಜನರಿಗೆ ಗೊತ್ತಿರುವುದೇ ಇಲ್ಲ. ಉತ್ತರ ಕರ್ನಾಟಕದ ಜನರ ಹೋರಾಟಗಳು ದಕ್ಷಿಣ ಕರ್ನಾಟಕದವರಿಗೆ ಅರ್ಥವಾಗುವುದಿಲ್ಲ. 'ಕಳಸಾ ಬಂಡೂರಿ ಹೋರಾಟ' ಪ್ರತಿದಿನ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತವೆಯೇ ಹೊರತು, ನಗರ ಪ್ರದೇಶದ ಜನರಿಗೆ ಈ ಹೋರಾಟದ ಆಳ-ಅಗಲ ಈಗಲೂ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಳಸಾ ಬಂಡೂರಿಯ ಜನರ ನೀರಿನ ಹಾಹಾಕಾರ ಮತ್ತು ಅದರ ಹಿಂದಿರುವ ನೀಚ ರಾಜಕಾರಣವನ್ನು ಪರಿಚಯಿಸುವ ಪುಟ್ಟ ಕೃತಿಯನ್ನು ಸಿರಿಮನೆ ನಾಗರಾಜ್ ಸಂಯೋಜಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಳಸಾ ಬಂಡೂರಿ ರೈತರ ಹೋರಾಟಕ್ಕೆ ಸಿನೆಮಾ ನಟರೂ ಕೈ ಜೋಡಿಸಿದ್ದಾರೆ. ಈ ಮೂಲಕ ಹೋರಾಟವನ್ನು ಹೆಚ್ಚು ಜನಪ್ರಿಯಗೊಳಿಸಿದ್ದಾರೆ. ನಗರವೂ ಅವರ ಹೋರಾಟದಲ್ಲಿ ಕೈ ಜೋಡಿಸಿತು. ಈ ಹಿನ್ನೆಲೆಯಲ್ಲಿ ಹೋರಾಟ ಅತ್ಯಂತ ಕುತೂಹಲವನ್ನು ಕೆರಳಿಸಿದೆ. ಸಮಾನತೆಗಾಗಿ ಜನಾಂದೋಲನವು ಕಳಸಾ ಬಂಡೂರಿ ಹೋರಾಟದ ಕುರಿತಂತೆ ನಡೆಸಿದ ಅಧ್ಯಯನದ ಅಕ್ಷರ ರೂಪವೇ ಈ ಕೃತಿ.

About the Author

ಸಿರಿಮನೆ ನಾಗರಾಜ್
(23 July 1952)

ಪ್ರಗತಿಪರ ಚಿಂತಕ, ಹೋರಾಟಗಾರ, ಪತ್ರಕರ್ತ ಸಿರಿಮನೆ ನಾಗರಾಜು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸಿರಿಮನೆಯವರು. ಕೊಪ್ಪದಲ್ಲಿ ಮುಂಜಾವು ಪತ್ರಿಕೆಯನ್ನು ನಡೆಸುತ್ತಿದ್ದ ಇವರು ಪ್ರಗತಿಪರ ಎಡಪಂಥೀಯ ವಿಚಾರಧಾರೆಗಳಿಂದ ಸ್ಫೂರ್ತಿ ಪಡೆದಿದ್ದರು.  ಕುದುರೆಮುಖ ಉಳಿಸಿ, ಪಶ್ಚಿಮ ಘಟ್ಟ ಉಳಿಸಿ ಮುಂತಾದ ಪರಿಸರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದವರು. ಪ್ರಸ್ತುತ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಮುಂದಾಳತ್ವದಲ್ಲಿರುವ ಇವರು ದಲಿತ, ದಮನಿತ, ಬಡ ಜನರಿಗೆ ಭೂಮಿ ಮತ್ತು ವಸತಿ ಕೊಡಿಸುವ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ.  ...

READ MORE

Related Books