ಕಲೆಯಲ್ಲಿ ಮಾನವತಾವಾದ

Author : ಎಚ್.ಎಸ್. ರಾಘವೇಂದ್ರರಾವ್

Pages 58

₹ 50.00




Year of Publication: 2004
Published by: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು- 560002

Synopsys

ಡಾ. ಸ್ವೆತಾಸ್ಲೋವ್ ರೋರಿಕ್ ಅವರ ಹ್ಯೂಮ್ಯಾನಿಸಂ ಇನ್ ಆರ್ಟ್ ಕೃತಿಯ ಕನ್ನಡ ರೂಪಾಂತರ ‘ಕಲೆಯಲ್ಲಿ ಮಾನವತಾವಾದ’. ಡಾ. ಎಚ್.ಎಸ್. ರಾಘವೇಂದ್ರ ರಾವ್ ಅವರು ಕನ್ನಡೀಕರಿಸಿದ್ದಾರೆ. ಈ ಪುಸ್ತಕದ ವಸ್ತುವಾಗಿರುವ ಮಾನವತಾವಾದವು, ಮೂಲಭೂತವಾಗಿ ಬಹಳ ವಿಶಾಲವಾದ, ಮನಸೆಳೆಯುವ ವಿಷಯ. ಆದರ ಕೆಲವೇ ಪದಗಳಲ್ಲಿ ಸೂತ್ರರೂಪದಲ್ಲಿ ನಿರ್ವಚಿಸಲು ಸಾಧ್ಯ. ಯಾವುದೇ ಮಾನವೀಯ ಅಭಿವ್ಯಕ್ತಿಯ ಕೇಂದ್ರದಲ್ಲಿ ಮನುಷ್ಯನ ಪ್ರತಿಷ್ಠಾಪನೆಯಾದಾಗ ಮಾನವತಾದವು ಉದಯವಾಗುತ್ತದೆ ಅಥವಾ ಇಡೀ ವಿಶ್ವ ಮತ್ತು ಮನುಷ್ಯನ ಉನ್ನತ ಭಾವನೆಗಳ ಸಮಗ್ರ ವರ್ಣಪಟಲವು ಆಧ್ಯಾತ್ಮಿಕ ಪ್ರಚೋದನೆಗಳಿಗೆ ಅನುಗುಣವಾಗಿ ಮಿಡಿಯತೊಡಗುತ್ತದೆ. ಕಲಾವಿದನ ಎಲ್ಲ ಅಭೀಪ್ಸೆಗಳೂ ಆ ಕಡೆಗೆ ಕೇಂದ್ರೀಕೃತವಾಗುತ್ತವೆ. ಆಗ ಮನುಷ್ಯನೇ ಕಲಾವಿದನ ಮೂಲಭೂತ ಕಾಳಜಿಯಾಗಿ ಬಿಡುತ್ತಾನೆ. ಈ ಎಲ್ಲ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳನ್ನು ಈ ಕೃತಿ ಓದುಗರ ಮುಂದಿಡುತ್ತದೆ.

About the Author

ಎಚ್.ಎಸ್. ರಾಘವೇಂದ್ರರಾವ್
(01 August 1948)

ಮೂಲತಃ ಚಿತ್ರದುರ್ಗದವರಾದ ರಾಘವೇಂದ್ರರಾವ್ ಅವರು (ಜನನ 1948) ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು ನಿವೃತ್ತರಾದವರು. ಕುವೆಂಪು, ಬೇಂದ್ರೆ, ಪು.ತಿ.ನ. ಅವರ ಕಾವ್ಯ ಕುರಿತು ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಅವರು ಕೆಲಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಹಂಪಿಯಲ್ಲಿ ಕರ್ನಾಟಕ ವಿಶ್ವಕೋಶದ ಸಂಪಾದಕರಾಗಿದ್ದ ರಾಘವೇಂದ್ರರಾವ್ ಅವರ ವಿಮರ್ಶಾ ಕೃತಿಗಳು ‘ವಿಶ್ಲೇಷಣೆ’, ‘ನಿಲುವು’, ‘ಹುಡುಕಾಟ’, ‘ಪ್ರಗತಿಶೀಲತೆ, ‘ಹಾಡೆ ಹಾದಿಯ ತೋರಿತು’. ‘ಬಾಲ ಮೇಧಾವಿ’ ಎಂಬ ಜರ್ಮನ್ ಕತೆಗಳ ಅನುವಾದ ಸಂಕಲನ ಹಾಗೂ ‘ಜನಗಣಮನ’ ಎಂಬ ಲವಲವಿಕೆಯ ಪ್ರವಾಸ ಕಥನ ಪ್ರಕಟಿಸಿದ್ದಾರೆ. ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾಗಿರುವ ...

READ MORE

Related Books