ಕಾಳಿಂಗ ಕಾಳಗ

Author : ರವಿ ಬೆಳಗೆರೆ

Pages 82

₹ 125.00




Published by: ಭಾವನಾ ಪ್ರಕಾಶನ
Address: ನಂ. 2, 80 ಫೀಟ್ ರಸ್ತೆ, ಕದಿರೇನಹಳ್ಳಿ ಪೆಟ್ರೋಲ್ ಪಂಪ್ ಹತ್ತಿರ, ಬನಶಂಕರಿ 2ನೇ ಹಂತ ಬೆಂಗಳೂರು-560070
Phone: 080- 2679 0804

Synopsys

ಹರಪನಹಳ್ಳಿಯ ದರೋಡೆಕೋರರ ನಡುವೆ ನಡೆದ ಸ್ವಾರಸ್ಯಕರವಾದ ಘಟನೆಗಳನ್ನು ರೋಚಕವಾಗಿ ವಿವರಿಸಿದಂತಹ ಪುಸ್ತಕವಿದು. ತಮ್ಮ ಸಾಂಪ್ರದಾಯಿಕ ವಿವರಣೆಯ ಶೈಲಿಯನ್ನು ರವಿಬೆಳಗೆರೆಯವರು ಇಲ್ಲಿ ಕೂಡ ಮುಂದುವರೆಸಿದ್ದಾರೆ. ವಸ್ತು ವಿಷಯವನ್ನು ರೋಚಕವಾಗಿ ವಿವರಿಸಿ ಪುಸ್ತಕವನ್ನು ಒಂದೇ ಬಾರಿಗೆ ಓದಿ ಮುಗಿಸುವಂತೆ ನಿರೂಪಿಸಿದ್ದಾರೆ ಲೇಖಕರು. ದರೋಡೆಕೋರರ ನಡುವೆ ನಡೆದ ಗುಂಡಿನ ದಾಳಿ, ಆ ದಾಳಿಯಿಂದಾಗಿ ತಾವು ಜೀವನದಲ್ಲಿ ಅನುಭವಿಸಿದ ಸಂಕಷ್ಟಗಳು ಮತ್ತು ಅವರಿಗೆ ಬೆನ್ನುಲುಬಾಗಿ ನಿಂತ ವ್ಯಕ್ತಿಗಳ ಕುರಿತಾದ ವಿಸ್ತೃತ ವಿವರಣೆ ಈ ಪುಸ್ತಕದಲ್ಲಿ ನೀಡಲಾಗಿದೆ. ಈ ಪುಸ್ತಕವನ್ನು ರವಿ ಬೆಳಗೆರೆಯವರು ರೇವಣಸಿದ್ಧಯ್ಯನವರ ಜೊತೆಗೂಡಿ ಬರೆದಿದ್ದಾರೆ. ವೃತ್ತಿಯಿಂದ ವಕೀಲರಾಗಿರುವ ರೇವಣ ಸಿದ್ಧಯ್ಯನವರು ಯಾವ ರೀತಿ ಕೋರ್ಟಿನಲ್ಲಿ ಈ ಕೇಸ್‍ನ್ನು ಗೆದ್ದರು ಎಂಬ ಕುರಿತು ಅವರೇ ತಮ್ಮ ಪದಗಳಲ್ಲಿ ವಿವರಿಸಿದ್ದಾರೆ. ರವಿ ಬೆಳಗೆರೆಯವರ ವೃತ್ತಿ ಜೀವನದಲ್ಲಿ ಇರುವ ವೈಯಕ್ತಿಕ ದ್ವೇಷದ ಪ್ರತೀಕಾರವನ್ನು ತೀರಿಸಲು ಅವರ ವೈರಿಗಳು ಯಾವ ರೀತಿ ಸಂಚು ಮಾಡಿದ್ದರು ಎಂಬ ಕುರಿತು ಕೂಡ ಈ ಪುಸ್ತಕ ಮಾಹಿತಿ ನೀಡುತ್ತದೆ. ಅತ್ಯಂತ ಕುತೂಹಲಕಾರಿಯಾಗಿ ಈ ಪುಸ್ತಕ ಮೂಡಿ ಬಂದಿದೆ.

About the Author

ರವಿ ಬೆಳಗೆರೆ
(15 March 1958 - 13 November 2020)

ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...

READ MORE

Related Books