ಕಲ್ಯಾಣದೆಡೆಗೆ

Author : ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

Pages 248

₹ 200.00




Year of Publication: 2019
Published by: ಶಿವಕುಮಾರ ಕಲಾಸಂಘ
Address: ಸಾಣೇಹಳ್ಳಿ, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ

Synopsys

`ಕಲ್ಯಾಣದೆಡೆಗೆ' ಕೃತಿಯು ರಾಜ್ಯಾದಂತ ನಡೆದ `ಮತ್ತೆ ಕಲ್ಯಾಣ ಅಭಿಯಾನ'ದ ಸಭೆಗಳಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ನೀಡಿದ ಆಶೀರ್ವಚನದ ಸಂಗ್ರಹವಾಗಿದೆ. ಈ ಕೃತಿಯ ಬಗ್ಗೆ ಬರೆಯುತ್ತಾ ಎಸ್.ಜಿ. ಸಿದ್ಧರಾಮಯ್ಯನವರು ‘ದೇಶವ್ಯಾಪಿ ಹಬ್ಬಿದ  ಚಾತುರ್ವಣ್ಯ ವ್ಯವಸ್ಥೆಯನ್ನು ವಿರೋಧಿಸಿ ಹುಟ್ಟಿದ ಕಾಯಕ, ದಾಸೋಹ ತತ್ವದ ಧರ್ಮ ಶರಣ ಧರ್ಮ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಯುವ ಮನಸ್ಸುಗಳನ್ನು ಗುರಿಯಾಗಿಸಿಕೊಂಡು ಜನಜಾಗೃತಿಯನ್ನು ಒಳಗೊಳ್ಳುವ ವ್ಯಾಪ್ತಿಯಲ್ಲಿ ಇಡೀ ರಾಜ್ಯಾದ್ಯಾಂತ ಮತ್ತೆ ಕಲ್ಯಾಣದ ಆಂದೋಲನ ನಡೆಸಿದರು. ಈ ಸಂದರ್ಭದಲ್ಲಿ ಭಾಷೆ, ಶಿಕ್ಷಣ, ಧರ್ಮ, ಕೃಷಿ, ಉದ್ಯೋಗ, ರಾಜಕಾರಣ, ಜಾಗತೀಕರಣ ಹೀಗೆ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಸ್ವಾಮಿಗಳು ಮಾತನಾಡಿರುವ ಭಾಷಣ ಈ ಕೃತಿಯಲ್ಲಿದೆ’ ಎಂದಿದ್ದಾರೆ.

About the Author

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಪರಿಸರ ರಕ್ಷಣೆ, ಪುಸ್ತಕ ಪ್ರೇಮ, ಸಾಹಿತ್ಯ ಕೃಷಿ, ರಂಗಚಟುವಟಿಕೆ, ವೈಚಾರಿಕ ಮುನ್ನೋಟಗಳಂತಹ ನಿರಂತರ ಆಸಕ್ತಿಯನ್ನು ಆಧ್ಯಾತ್ಮದ ಆಳದಲ್ಲಿ ಆಲೋಚಿಸುವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ಅವರು, 1951 ಸೆಪ್ಟಂಬರ್‌ 04 ರಂದು ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕು ಹೆಡಿಯಾಲ ಗ್ರಾಮದಲ್ಲಿ ಜನಿಸಿದರು. ತಂದೆ ನಾಗಯ್ಯ, ತಾಯಿ ಶಿವನಮ್ಮ. ಕನ್ನಡದ ದಿನ ಪತ್ರಿಕೆಗಳಿಗೆ ಲೇಖನ ಬರೆಯುತ್ತಲೆ ಪ್ರಜಾವಾಣಿಯ ಬಾಳಬುತ್ತಿಯ ಅಂಕಣಕಾರರಾಗಿದ್ದರು. 2004ರ ಹೊಸದುರ್ಗದಲ್ಲಿ ನಡೆದ ‘ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ’ ಅಧ್ಯಕ್ಷತೆ ವಹಿಸಿದ್ದರು. ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ನಾಟಕೋತ್ಸವ ನಡೆಸಿದ್ದಾರೆ. 1998ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ‘ಗೌರವ ಫೆಲೋಷಿಪ್’, 2004ರಲ್ಲಿ ...

READ MORE

Related Books