ಕಂಬಾರರ ಕಾವ್ಯ

Author : ಟಿ.ಪಿ. ಅಶೋಕ

Pages 164

₹ 60.00




Year of Publication: 1994
Published by: ಕರ್ನಾಟಕ ಸಂಘ ಪುತ್ತೂರು

Synopsys

ಬೇಂದ್ರೆ ಕಾವ್ಯದೊಂದಿಗೆ ಹೋಲಿಸಿಯೂ ಬೇಂದ್ರೆ ಮತ್ತು ಕಂಬಾರರ ನಡುವಣ ವ್ಯತ್ಯಾಸಗಳು, ಭಾಷಾ ಸಮೃದ್ಧಿ ಮತ್ತು ಅದರ ಸೃಜನಶೀಲ ಬಳಕೆಯ ಮತ್ತು ನಿಯಂತ್ರಣದ ಪ್ರಶ್ನೆಗಳು; ಜಾನಪದದಿಂದ ಕಂಬಾರರು ತಮ್ಮ ಕವಿತೆಯ ವಸ್ತು-ಆಕೃತಿಗಳನ್ನು ಪಡೆದುಕೊಂಡ ಕ್ರಮ ಮತ್ತು ಅದರ ಪರಿಣಾಮಗಳು; ಕವಿತೆಯ ಜಾನಪದ ಆವರಣಕ್ಕೂ ಕವಿಯ ಆಧುನಿಕ ಪ್ರಜ್ಞೆಗಳಿಗೂ ಇರುವ ಸಂಬಂಧದ ಸ್ವರೂಪ ಜಾನಪದ ಕಥನಗಳನ್ನು ಹೋಲುವ ಕವನಗಳಿಗೂ, ಆಧುನಿಕ ಬದುಕಿನ ಬಗ್ಗೆ ಬರೆದ ಕವನಗಳಿಗೂ ಇರುವ ವ್ಯತ್ಯಾಸಗಳು; ಕಣ್ಮರೆಯಾಗುತ್ತಿರುವ ಒಂದು ಜೀವನಕ್ರಮದ ಬಗೆಗೆ ಮತ್ತು ಆಧುನಿಕ ಜೀವನಕ್ರಮಗಳ ಬಗೆಗೆ ಕವಿತೆಗಳಲ್ಲಿ ವ್ಯಕ್ತವಾಗುವ ಧೋರಣೆ- ಈ ಎಲ್ಲಾ ಮುಖ್ಯ ಸಂಗತಿಗಳನ್ನು ಕನ್ನಡ ವಿಮರ್ಶೆ ಸಾಕಷ್ಟು ಆಳವಾಗಿ ಚಿಂತಿಸಿದೆ....? ಕನ್ನಡದ ಬಹುಮುಖ್ಯ ಕವಿಗಳಲ್ಲಿ ಒಬ್ಬರಾದ ಡಾ| ಚಂದ್ರಶೇಖರ ಕಂಬಾರ ಅವರ ಕಾವ್ಯದ ಬಗ್ಗೆ ಈ ವರೆಗೆ ಪ್ರಕಟವಾದ ಎಲ್ಲ ಮುಖ್ಯ ವಿಮರ್ಶಾತ್ಮಕ ಬರಹಗಳನ್ನು ಪ್ರಸ್ತುತ ಈ ಸಂಪುಟದಲ್ಲಿ ಸಂಕಲಿಸಲಾಗಿದೆ.

About the Author

ಟಿ.ಪಿ. ಅಶೋಕ
(26 August 1955)

ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...

READ MORE

Related Books