ಕಂಪಿನ ಕರೆ

Author : ಗೌರೀಶ ಕಾಯ್ಕಿಣಿ

Pages 172

₹ 60.00




Year of Publication: 2011
Published by: ಪ್ರಸಾರಾಂಗ, ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌
Address: ಸಾಧನಕೇರಿ, ಧಾರವಾಡ-8

Synopsys

ಬೇಂದ್ರೆ - ಗೌರೀಶರ ಸ್ನೇಹ-ಸಂಪರ್ಕ ೪೦ ವರ್ಷಗಳಷ್ಟು ಹಳೆಯದು. ಆಗಾಗ ವರಕವಿಯನ್ನು, ಅವರ ಸಾಹಿತ್ಯವನ್ನು ರಸಿಕನಾಗಿ ಪರಿಚಯಿಸುವ ಬರೆಹಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದರು. ಗೌರೀಶ ಕೈಕಿಣಿಯವರ “ಕಂಪಿನಕರೆ' ಬೇಂದ್ರೆ ಕಾವ್ಯದ ಗಂಭೀರ, ವೈವಿಧ್ಯ ಮತ್ತು ವಿಸ್ತಾರ ಅಧ್ಯಯನದ ಕೃತಿಯಾಗಿದ್ದು ಇದರಲ್ಲಿನ 19 ಅಭ್ಯಾಸಪೂರ್ಣ ಲೇಖನಗಳನ್ನು ಒಂದು ವಿಶಿಷ್ಟ ಧ್ಯಾನಕ್ರಮದಲ್ಲಿ ಬರೆದಿದ್ದಾರೆ. ಗೌರೀಶರಿಗೆ ಸಂತೃಪ್ತಿ ತಂದ ಬರವಣಿಗೆ ಇದು. ಬೇಂದ್ರೆ ಗೌರೀಶರ ನಿಡುಗಾಲದ ಒಡನಾಟ ಹಾಗೂ ಬಾಂಧವ್ಯಕ್ಕೆ ಇದು ಸಾಹಿತ್ಯ ಸ್ಮಾರಕ.

About the Author

ಗೌರೀಶ ಕಾಯ್ಕಿಣಿ
(12 September 1912 - 14 November 2002)

ಸಾಹಿತಿ ಗೌರೀಶ್‌ ಕಾಯ್ಕಿಣಿ ಅವರು 1912 ಸೆಪ್ಟೆಂಬರ್‌ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು.  ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು.  ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು.  ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ...

READ MORE

Related Books