ಕನಕದಾಸ ಅಂಬಿಗರ ಚೌಡಯ್ಯ

Author : ಯಣ್ಣೆಕಟ್ಟೆ ಚಿಕ್ಕಣ್ಣ

Pages 120

₹ 60.00




Year of Publication: 2017
Published by: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ
Address: ಪ್ರಕಾಶಕರು: ಆಯುಕ್ತರು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಬ್ಯಾಡಗಿ ತಾಲ್ಲೂಕು, ಹಾವೇರಿ ಜಿಲ್ಲೆ
Phone: 08375-289388

Synopsys

`ಕನಕದಾಸ ಅಂಬಿಗರ ಚೌಡಯ್ಯ' ಚಿಕ್ಕಣ್ಣ ಯಣೆಕಟ್ಟೆ ಅವರ ಕೃತಿಯಾಗಿದೆ. ಕನ್ನಡ ಹರಿದಾಸ ಪರಂಪರೆಯಲ್ಲಿ ಕನಕದಾಸರ ಹೆಸರು ಬಹುವಿಶಿಷ್ಟವಾದುದು. 'ಕನಕ' ಎಂಬ ಪದವನ್ನು ಯಾವಕಡೆಯಿಂದ ಓದಿದರೂ ಅದು ಕನಕ ಎಂದೇ ಅರ್ಥವನ್ನು ಕೊಡುತ್ತದೆ. ಹಾಗೇ ಕನಕದಾಸರು ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ಸ್ಥಿರತೆಯನ್ನು ಹೊಂದಿದವರು. ಅದು ಅವರ ಸಾಹಿತ್ಯದಲ್ಲಿರುವ ಸತ್ವವನ್ನು ಎತ್ತಿತೋರಿಸುತ್ತದೆ. ಅವರ ಸಾಹಿತ್ಯದಲ್ಲಿನ ವಿಚಾರಧಾರೆಗಳು ಆಧ್ಯಾತ್ಮ, ವೈಚಾರಿಕ, ಸಾಮಾಜಿಕ ಕಳಕಳಿಯನ್ನು ಹೊಂದಿರುವಂತವು. ಅವರ ಸಾಹಿತ್ಯ ಕುರಿತು ಹಿಂದೆಯೇ ಹಲವು ಚರ್ಚೆಗಳು ನಡೆಯಬೇಕಾಗಿತ್ತು. ಆದರೆ ಹಲವು ಅಡೆತಡೆಗಳಿಂದ ವಿಳಂಬವಾಗಿಯಾದರೂ ಹಲವು ಆಯಾಮಗಳಲ್ಲಿ ಚರ್ಚೆಯಾಗುತ್ತಿರುವುದು ಸಂತೋಷತಂದಿದೆ. ಕನಕದಾಸರು ಯಾವುದೇಒಂದು ಜಾತಿ, ಮತ, ಪಂಥ ಪ್ರದೇಶಕ್ಕೆ ಸೀಮಿತವಾದವರಲ್ಲ. ಅವರು ವಿಶ್ವದ ಒಳಿತನ್ನು ಬಯಸಿ ಜೀವಪರ ನಿಲುವು ತಾಳಿ ದಾರ್ಶನಿಕರೆನಿಸಿಕೊಂಡಿದ್ದಾರೆ. ಆದ್ದರಿಂದ ಜಾಗತಿಕ ಮಟ್ಟಕ್ಕೆ ಅವರ ವಿಚಾರಧಾರೆಗಳನ್ನು ಹೊತ್ತೊಯ್ಯಬೇಕಾದ ಅನಿವಾರ್ಯತೆ ಇದೆ. ಆ ಹಿನ್ನೆಲೆಯಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶ್ರೀ ಹೊರಪೇಟೆ ಮಲ್ಲೇಶಪ್ಪನವರು ಪ್ರಾಧಿಕಾರದಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಜಂಗಮ-ಸ್ಥಾವರ ಎರಡೂ ನಿಟ್ಟಿನಲ್ಲಿ ಕಾರ್ಯಮಾಡುತ್ತಿರುವುದು ಹೆಮ್ಮೆ ತಂದಿದೆ.

About the Author

ಯಣ್ಣೆಕಟ್ಟೆ ಚಿಕ್ಕಣ್ಣ

ಡಾ. ಯಣ್ಣೆಕಟ್ಟೆ ಚಿಕ್ಕಣ್ಣ ಜಾನಪದ ಮತ್ತು ಮಾನವ ಶಾಸ್ತ್ರೀಯ ಅಧ್ಯಯನದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಇವರು ಪ್ರಸ್ತುತ ಶಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಸಂಶೋಧನಾ ಮಾರ್ಗದರ್ಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಬುಡಕಟ್ಟು ಸಂಸ್ಕೃತಿ ಅಧ್ಯಯನಕ್ಕೆ ಇವರ ಕೊಡುಗೆ ಅನನ್ಯವಾದುದು. - ವೀರಜುಂಜಪ್ಪ ಸಮಗ್ರ ಕಥಾವಳಿ, ಚಿತ್ರದೇವರ ಕಾವ್ಯ ಈ ಮೊದಲಾದ ಮಹತ್ವದ ಬುಡಕಟ್ಟು ಕಾವ್ಯಗಳನ್ನು ಪ್ರಕಟಿಸಿದ್ದಾರೆ. ಗಡಿನಾಡ ಜಾನಪದ, ತುರುಗೋಳ್ ಜಾನಪದ, ಜಾನಪದ ಸಂಪನ್ನರು, ತುಮಕೂರು ಜಿಲ್ಲೆ ಜಾನಪದೀಯ ನೆಲೆಗಳು ಇವರ ಪ್ರಮುಖ ಸಂಶೋಧನಾ ಕೃತಿಗಳು. 'ಹಿಮ ತಬ್ಬಿದ ನೇಪಾಳ ಕೃತಿಯೂ ಸೇರಿದಂತೆ 'ಬಂಡಿ ...

READ MORE

Related Books