ಕನಕದಾಸರ ವರಮೋಹನತರಂಗಿಣಿ ಸಂಪುಟ-2

Author : ಎಮ್.ಆರ್. ಸತ್ಯನಾರಾಯಣ್

Pages 1260

₹ 900.00




Year of Publication: 2018
Published by: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ
Address: ಕಾಗಿನೆಲೆ, ಬ್ಯಾಡಗಿ ತಾಲ್ಲೂಕು, ಹಾವೇರಿ ಜಿಲ್ಲೆ
Phone: 08375-289388

Synopsys

`ಕನಕದಾಸರ ವರಮೋಹನತರಂಗಿಣಿ ಸಂಪುಟ-2’ ವ್ಯಾಖ್ಯಾನ-ವಿಶ್ಲೇಷಣೆ ಕೃತಿಯು ಎಮ್.ಆರ್. ಸತ್ಯನಾರಾಯಣ್ ಅವರ ಸುಮಾರು 2799 ಸಾಂಗತ್ಯಪದಗಳ ಮಹಾನ್ ಕಾವ್ಯವಾಗಿದೆ. ವಿದ್ವಾಂಸರು ಹಾಗೂ ವಿಮರ್ಶಕರು ಇದುವರೆಗೆ ಮನಮೋಹಕವಾದ ಶೃಂಗಾರ ಕಾವ್ಯವೆಂದು ವರ್ಣಿಸಿ ವ್ಯಾಖ್ಯಾನಿಸಿದ ಕಾವ್ಯಶಿಲ್ಪ. ಕನಕರದು ಕಾವ್ಯಮೀಮಾಂಸೆಯಲ್ಲಿ ಅನೇಕ ಮೀಮಾಂಸಕರು ಹೇಳಿದ ದೈದವತ್ತ ಪ್ರತಿಭೆ. ಅದನ್ನು ಕನಕರು ತಮ್ಮ ಈ ಸುದೀರ್ಘ ಕಾವ್ಯಕೃತಿಯಲ್ಲಿ ಮತ್ತೆಮತ್ತೆ ನೆನಪಿಸಿಕೊಳ್ಳುತ್ತಾರೆ. ನೆನಪಿಸುತ್ತಾರೆ. ತಾವು ಕೇವಲ ಕೃತಿಯನ್ನು ಹೇಳಿದರೆಂದೂ ನಿಜಕ್ಕೂ ಕಾವ್ಯದ ಕರ್ತೃ ಕಾಗಿನೆಲೆಯೆ ಆದಿಕೇಶವನೆಂದೂ ಸ್ಪಷ್ಟಪಡಿಸುತ್ತಾರೆ. ತಾವು ವಡಿ, ಪ್ರಾಸ, ಗಣನೇಮ, ಛಂದಸ್ಸು, ವ್ಯಾಕರಣಾದಿಗಳನ್ನು ತಿಳಿಯದ ಮೂಢನೆಂದೂ, ತಾನೊಂದು ಗುಬ್ಬಿಯೆಂದೂ , ತಾನೊಂದು ಗೀಜಗವೆಂದೂ, ತಾವು ಕಟ್ಟಿದ ಈ ಗೂಡನ್ನು ಕೆಡಹುಬಾರದೆಂದೂ ವಿನಮ್ರಮೂರ್ತಿಯಾಗಿ ಕಾವ್ಯವನ್ನು ಆರಂಭಿಸುವ ಕನಕರು ಕೊನೆಯತನಕ ತಮ್ಮ ಕಾವ್ಯಪ್ರತಿಭೆಯ ತೆಪ್ಪದಲ್ಲಿ ಈ ತರಂಗಿಣಿಯನ್ನು ದಾಟಿದ್ದಾರೆ. ಈ ಕಾವ್ಯತರಂಗಿಣಿಯು ಅನೇಕರ ಪ್ರಕಾರ ಶೃಂಗಾರರಸಪೂರ್ಣ. ಆದರೆ ನಿಜಕ್ಕೂ ಇಲ್ಲಿ ಅಧ್ಯಾತ್ಮದ ಹರಿವಿದೆ.

About the Author

ಎಮ್.ಆರ್. ಸತ್ಯನಾರಾಯಣ್

ಲೇಖಕ ಎಮ್.ಆರ್. ಸತ್ಯನಾರಾಯಣ್ ಅವರು ಮೂಲತಃ ಶಿವಮೊಗ್ಗದವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರದಿಂದ ಕನಕದಾಸರ ಕುರಿತ ಮೂರು ಸಂಪುಟಗಳ ಸಂಶೋಧನೆಯನ್ನು ಮಾಡಿರುತ್ತಾರೆ. ಕೃತಿಗಳು: ಕನಕದಾಸರ ವರಮೋಹನತರಂಗಿಣಿ ಸಂಪುಟ-1, ಕನಕದಾಸರ ವರಮೋಹನತರಂಗಿಣಿ ಸಂಪುಟ-2, ಕನಕದಾಸರ ವರಮೋಹನತರಂಗಿಣಿ ಸಂಪುಟ-3 ...

READ MORE

Related Books