ಕನಸಿಗೊಂದು ಕಣ್ಣು

Author : ಶೂದ್ರ ಶ್ರೀನಿವಾಸ್

Pages 176

₹ 80.00




Year of Publication: 2011
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ , ಜೆ . ಸಿ . ರಸ್ತೆ , ಬೆಂಗಳೂರು -560002
Phone: 080-22107704

Synopsys

ಅನುಪಮಾ , ಬೆಸಗರಹಳ್ಳಿ ರಾಮಣ್ಣ , ಕೆ . ವಿ . ಸುಬ್ಬಣ್ಣ , ದೇವರಾಜು ಅರಸು , ಕೃಷ್ಣ ಆಲನಹಳ್ಳಿ , ಸಿದ್ಧಲಿಂಗಯ್ಯ , ರಾಮಕೃಷ್ಣ ಹೆಗಡೆ , ಕಿ . ರಂ . ನಾಗರಾಜ್ , ಪ್ರೊ . ಎಂ . ಡಿ . ನಂಜುಂಡಸ್ವಾ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಪ್ರಮುಖ ವ್ಯಕ್ತಿಗಳ ವ್ಯಕ್ತಿ ಚಿತ್ರವನ್ನು ಲೇಖಕ ಶೂದ್ರ ಶ್ರೀನಿವಾಸ್ ರು ಈ ಕೃತಿಯಲ್ಲಿ ವಿವರಿಸಿದ್ದಾರೆ . ದೇಶ , ಕಾಲವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಆಯಾ ಸಂದರ್ಭದಲ್ಲಿ ಬದುಕಿದ ಆದರ್ಶಪ್ರಾಯ ವೈವಿಧ್ಯಮಯ ಜೀವನಗಳನ್ನು ನಾವು ಅಧ್ಯಯನ ಮಾಡವುದು ಉಪಯುಕ್ತವಾಗಿದೆ ಮತ್ತು ಅನಿವಾರ್ಯವು ಕೂಡ . ಆ ನಿಟ್ಟಿನಿಂದ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ಮತ್ತು ರಾಜಕೀಯ ಇತಿಹಾಸವನ್ನು ಸಮೃದ್ಧಗೊಳಿಸಿದವರ ವ್ಯಕ್ತಿ ಚಿತ್ರಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ .

About the Author

ಶೂದ್ರ ಶ್ರೀನಿವಾಸ್

ಸೂಕ್ಷ್ಮ ಸಂವೇದನೆಯ ಕವಿ ಶೂದ್ರ ಶ್ರೀನಿವಾಸ್ ಅವರು ಹುಟ್ಟಿದ್ದು  ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕು ಮುತ್ತಾನಲ್ಲೂರು ಗ್ರಾಮದಲ್ಲಿ. ಈಗ ಬೆಂಗಳೂರು ವಾಸಿ. 1973ರಲ್ಲಿ ಶೂದ್ರ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿ ಅನೇಕ ವರ್ಷಗಳ ಕಾಲ ನಡೆಸಿದರು. 1996ರಲ್ಲಿ ಸಲ್ಲಾಪ ವಾರಪತ್ರಿಕೆ ಪ್ರಾರಂಭಿಸಿ ಒಂದು ವರ್ಷ ನಡೆಸಿದರು. 2002ರಲ್ಲಿ 'ನೆಲದ ಮಾತು' ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಶೂದ್ರ ಶ್ರೀನಿವಾಸ ಸಮಾಜವಾದಿ ರಾಜಕೀಯ ಚಿಂತನೆಯ ವ್ಯಕ್ತಿ. ಅವರು 1975-76ರಲ್ಲಿ 'ತುರ್ತು ಪರಿಸ್ಥಿತಿ'ಯಲ್ಲಿ ಎರಡು ಬಾರಿ ಬಂಧನ ಮತ್ತು ಸೆರೆಮನೆ ವಾಸ ಕಂಡವರು. 1976ರಲ್ಲಿ ಕೇರಳದ ಕೊಚ್ಚಿನ್‌ನಲ್ಲಿ ನಡೆದ ರಾಷ್ಟ್ರೀಯ ತುರ್ತು ...

READ MORE

Awards & Recognitions

Related Books