ಕಾನೀನ

Author : ಕುವೆಂಪು (ಕೆ.ವಿ. ಪುಟ್ಟಪ್ಪ)

Pages 32

₹ 35.00




Year of Publication: 2004
Published by: ಉದಯರವಿ ಪ್ರಕಾಶನ
Address: 1354/1 ಕೃಷ್ಣಮೂರ್ತಿಪುರಂ, ಮೈಸೂರು 570004
Phone: 0821 2332971

Synopsys

1924ರಲ್ಲಿ ಮೊದಲ ಮುದ್ರಣವನ್ನು ಕಂಡಂತಹ ನಾಟಕ ಕಾನೀನ. ಕರ್ಣನ ವೃತ್ತಾಂತವನ್ನು ಕಥಾವಸ್ತುವನ್ನಾಗಿರಿ ಬರೆದಂತಹ ನಾಟಕವಿದು. ಐದು ದೃಶ್ಯಗಳನ್ನು ಒಳಗೊಂಡಿರುವ ಈ ನಾಟಕದ ಅಂತ್ಯದಲ್ಲಿ ಶ್ರೀ ಕೃಷ್ಣ ಮತ್ತು ಕರ್ಣ ಎಂಬ ಅಂಕ ಮತ್ತಷ್ಟು ವಿಶೇಷವಾಗಿ ಕಾಣುತ್ತದೆ. ಒಟ್ಟು ಹದಿನಾರು ಪಾತ್ರಗಳನ್ನು ಹೊಂದಿರುವ ಈ ನಾಟಕವು ಮಹಾಭಾರತದಲ್ಲಿ ದುರಂತ ನಾಯಕನೆಂದು ಬಣ್ಣಿಸಲ್ಪಡುವ ಕರ್ಣನ ಸಂಪೂರ್ಣ ಕಥೆಯನ್ನು ಓದುಗರೆದುರು ತೆರೆದಿಡುತ್ತದೆ. ಕರ್ಣನು ಕುಂತಿ ಪುತ್ರನಾಗಿ ಜನಿಸಿದ ಕಥೆಯನ್ನು ಸ್ವಾರಸ್ಯಕರವಾಗಿ ವರ್ಣಿಸಲಾಗಿದೆ. ಸೂರ್ಯ ದೇವನಿಂದ ವರವಾಗಿ ಪಡೆದ ಮಗುವನ್ನು ಕರ್ಣನೆಂದು ನಾಮಕರಣ ಮಾಡಿ ಸಂತೋಷ ಪಡುತ್ತಿರುವಾಗ ತನಗಾಗುವ ಅಪವಾದವನ್ನು ನೆನೆಸಿ ಮಗುವನ್ನು ಗಂಗಾಮಾತೆಯ ಮಡಿಲಿಗೊಪ್ಪಿಸುವ ಸನ್ನಿವೇಶ ರಸವತ್ತಾಗಿ ವರ್ಣಿಸಲಾಗಿದೆ. ಗಂಗೆಯಲ್ಲಿ ದೊರೆತ ಮಗುವನ್ನು ಮನೆಗೆ ಕೊಂಡುಹೋಗಿ ಪೋಷಿಸುವ ಸೂತ ಮತ್ತು ಆತನ ಪತ್ನಿಯ ಭಾವನೆಗಳನ್ನು ಅರ್ಥವತ್ತಾಗಿ ವಿವರಿಸಲಾಗಿದೆ. ಸೂತಪುತ್ರನೆಂದು ಅನಿಸಿಕೊಂಡ ಕರ್ಣನ ಜೀವನ ಯಾವರೀತಿ ಮುಂದುವರೆಯುತ್ತದೆ ಮತ್ತು ಅವನು ಯಾವ ರೀತಿ ಸಕಲವಿದ್ಯಾ ಪಾರಂಗತನಾಗಿ ದುರ್ಯೋಧನನಿಗೆ ಆಪ್ತನಾಗುತ್ತಾನೆನ್ನುವ ಕಥಾನಕವೂ ಸ್ವಾರಸ್ಯಕವಾಗಿ ಮೂಡಿ ಬಂದಿದೆ. ಕರ್ಣನ ಜೀವನದ ಸತ್ಯಾಸತ್ಯತೆಗಳ ಕುರಿತು ಬೆಳಕು ಚೆಲ್ಲುವಂತಹ ನಾಟಕವಿದು.

About the Author

ಕುವೆಂಪು (ಕೆ.ವಿ. ಪುಟ್ಟಪ್ಪ)
(29 December 1904 - 11 November 1994)

ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...

READ MORE

Related Books