ಕಣಿವೆಯಿಂದ ಶಿಖರಕ್ಕೆ

Author : ಯತಿರಾಜ್‍ ವೀರಾಂಬುಧಿ

Pages 191

₹ 175.00




Year of Publication: 2014
Published by: ನವಸಾಹಿತಿ ಪಬ್ಲಿಕೇಷನ್ಸ್
Address: ಏಳೂರು ರಸ್ತೆ, ರಾಮಮಂದಿರ ಹತ್ತಿರ, ವಿಜಯವಾಡ- 520002
Phone: 0866-2432885

Synopsys

‘ಕಣಿವೆಯಿಂದ ಶಿಖರಕ್ಕೆ’ ತೆಲುಗಿನ ಖ್ಯಾತ ಲೇಖಕ ಯಂಡಮೂರಿ ವೀರೇಂದ್ರನಾಥ್ ಅವರ ಕೃತಿಯನ್ನು ಲೇಖಕ ಯತಿರಾಜ್ ವೀರಾಂಬುಧಿ ಕನ್ನಡೀಕರಿಸಿದ್ದಾರೆ. ಇದು ಬದುಕಿಗೆ ಸ್ಫೂರ್ತಿದಾಯಕ ಚೇತನವನ್ನು ನೀಡುವ ಕೃತಿ. ಕಣಿವೆಯಿಂದ ಶಿಖರಕ್ಕೆ ಹೆಸರೇ ಸೂಚಿಸುವಂತೆ ಬದುಕಿನಲ್ಲಿ ಸಾಧನೆಗೆ ಬೇಕಾಗುವ ಮಹತ್ವದ ವಿಚಾರಗಳನ್ನು ಚರ್ಚಿಸಲಾಗಿದೆ.

About the Author

ಯತಿರಾಜ್‍ ವೀರಾಂಬುಧಿ
(11 August 1957)

ಕಥೆಗಾರ,ಲೇಖಕ, ಅನುವಾದಕ, ಕಾದಂಬರಿಗಾರರಾದ ಯತಿರಾಜ್ ವೀರಾಂಬುಧಿ 11-08-1957ರಂದು ಮೈಸೂರಿನಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ ಅವರು ಮೈಸೂರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಬಿ.ಇ (ಎಲೆಕ್ಟ್ರಿಕಲ್ ಪವರ್) ಮುಗಿಸಿದರು. ಬೆಂಗಳೂರು ಮತ್ತು ಸಲ್ತನತ್ ಆಫ್ ಒಮಾನ್‌ನಲ್ಲಿ ಕಾರ್ಯ ನಿರ್ವಹಿಸಿ 2013ರಲ್ಲಿ ನಿವೃತ್ತಿ ಪಡೆದಿದ್ದಾರೆ. ಯತಿರಾಜ್ ವೀರಾಂಬುಧಿಯವರ ಪ್ರಕಟಿತ ಕೃತಿಗಳು-  ಆಪತ್ತಿಗೆ ಆಹ್ವಾನ, ಪರಿಶೋಧ, ಗಾಥೆ, ಮರದಡಿ ಮಳೆ, ಪಂಚಾನನ, ಜೀವನ್ಮುಖಿ, ಸಾಬೀತು, ಕುರುಡು ತಿರುವು, ಅವಿನಾಭಾವ, ಹಸ್ತಕ್ಷೇಪ, ಹಾಸುಹೊಕ್ಕು, ಕಪ್ಪು ನದಿ, ಉದ್ಯೋಗ ಪರ್ವ, ಕರೆದರೆ ಬಾರೆ..!, ಒಂದೊಂದಾಗಿ ಜಾರಿದರೆ, ರಣವೀಳ್ಯ, ಚಿರಸ್ಮಿತ, ಸುಖಿಯಾಗಿರು ...

READ MORE

Related Books