ಕನ್ನಡ ಜೈನ ಸಾಹಿತ್ಯ ಚರಿತ್ರೆ ಸಂಪುಟ-1

Author : ಎಸ್.ಪಿ. ಪದ್ಮಪ್ರಸಾದ್‌

Pages 648

₹ 650.00




Year of Publication: 2021
Published by: ಎಸ್.ಪಿ.ಪದ್ಮಪ್ರಸಾದ್
Address: ತೃಪ್ತಿ-ಎರಡನೇ ಕ್ರಾಸ್, 9ನೇ ಮುಖ್ಯರಸ್ತೆ, ಗೋಕುಲ ಬಡಾವಣೆ, ತುಮಕೂರು-572104
Phone: 9448768567

Synopsys

`ಕನ್ನಡ ಜೈನ ಸಾಹಿತ್ಯ ಚರಿತ್ರೆ ಸಂಪುಟ-1’ ಕೃತಿಯು ಎಸ್.ಪಿ ಪದ್ಮಪ್ರಸಾದ್ ಅವರ ಐತಿಹಾಸಿಕ ಸಂಶೋಧನಾ ಗ್ರಂಥವಾಗಿದೆ. ಈ ಸಂಪುಟ ಕೆಲವು ಹೊಸ ವಿಚಾರಗಳನ್ನು ಒಳಗೊಂಡಿದ್ದು, ಒಂದನೇ ನಾಗವರ್ಮನ ಮತ ವಿಚಾರ ಕುರಿತ ಚರ್ಚೆಯನ್ನು ಮತ್ತೊಂದು ಮಜಲಿಗೆ ತಂದಿರುತ್ತದೆ. ಕವಿ ಆದಿತ್ಯ, ಕರ್ಣಾಭರಣ ಸೂರಿ ಹಾಗೂ ‘ರತ್ನಕರಂಡದ ಕಥೆಗಳು’ ಗದ್ಯ ಕೃತಿಯ ಅಜ್ಞಾತ ಕರ್ತೃ ಹೀಗೆ ಸಾಹಿತ್ಯಚರಿತ್ರೆಯಲ್ಲಿ ದಾಖಲಾಗದ ಕವಿಗಳ ಬಗೆಗಿನ ಮಾಹಿತಿ, ಶ್ರೀವಿಜಯವನ್ನು ಕುರಿತು ಕೆಲವು ಹೊಸ ವಿಚಾರಗಳ ಸೇರ್ಪಡೆ- ಇವೆಲ್ಲಾ ಈ ಸಂಪುಟದ ವೈಶಿಷ್ಟ್ಯಗಳಾಗಿವೆ.

ಕೃತಿಯ ಕುರಿತು ಪ್ರಾಧ್ಯಾಪಕ ಡಿ. ವಿ. ಪರಮಶಿವಮೂರ್ತಿ ಅವರು, ಭಾಷಾ ಸ್ವರೂಪ, ಭಿನ್ನಕಾಲಘಟ್ಟ, ರಾಜವಂಶಾಧಾರಿತ, ವಿವಿಧ ಛಂದಸ್ಸುಗಳ ಪ್ರಕಾರ, ಪ್ರಧಾನ ಕವಿಗಳನ್ನಾಧರಿಸಿ, ಮೌಲ್ಯಗಳ ಆಧಾರದಲ್ಲಿ ಮತ್ತು ಧರ್ಮಗಳ ಆಧಾರದಲ್ಲಿ ಸಾಹಿತ್ಯ ಚರಿತ್ರೆಗಳು ರೂಪುಗೊಂಡಿರುವುದು ಈಗಾಗಲೇ ಚಿರಪರಿಚಿತ. ಎಸ್. ಪಿ ಪದ್ಮಪ್ರಸಾದ್ ಅವರ ಪ್ರಸ್ತುತ ಜೈನ ಸಾಹಿತ್ಯ ಚರಿತ್ರೆಯ ಸಂಪುಟವು ಈಗಿರುವ ಅನೇಕ ಸಾಹಿತ್ಯಚರಿತ್ರೆ ಕೃತಿಗಳ ನಡುವೆ ವಿಶೇಷವಾಗಿ ಕಂಡುಬರುತ್ತವೆ. ಇಲ್ಲಿನ ಎಲ್ಲಾ ಲೇಖನಗಳೂ ಜೈನಸಾಹಿತ್ಯದ ಪರಿಚಯವನ್ನಷ್ಟೇ ಮಾಡದೆ ಕಾವ್ಯಗಳ ವಿಮರ್ಶೆಯನ್ನೂ ಮಾಡಿರುತ್ತಾರೆ. ಇಲ್ಲಿನ ಹಲವು ಲೇಖನಗಳಿಗೆ ಸಂಪಾದಕರು ಬರೆದಿರುವ ಪೂರಕ ಟಿಪ್ಪಣಿಗಳೂ ಸಹ ಮೌಲಿಕವಾಗಿವೆ. ಈ ಕೃತಿಯ ಅಧ್ಯಯನದಿಂದ ಜೈನ ಕವಿ-ಕಾವ್ಯ ಪರಂಪರೆಯ ಮಹತ್ತು ಅರಿವಾಗುವುದಲ್ಲದೆ ಜೈನ ಕವಿಗಳು ಕನ್ನಡ ಭಾಷೆಯನ್ನು ಬಳಸಿದ ಮತ್ತು ಬೆಳೆಸಿದ ಪರಿ, ಅವರ ಅಗಾಧ ಪ್ರತಿಭೆ ವಿಸ್ಮಯವನ್ನುಂಟು ಮಾಡುತ್ತದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಎಸ್.ಪಿ. ಪದ್ಮಪ್ರಸಾದ್‌

ಎಸ್.ಪಿ. ಪದ್ಮಪ್ರಸಾದ್‌ ಜಾನಪದ, ಕಾವ್ಯ, ನಾಟಕ, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪದ್ಮ ಪ್ರಸಾದವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ.  ತಂದೆ ಎಸ್.ಪಿ. ಪಾಯಪ್ಪಶೆಟ್ಟಿ, ತಾಯಿ ಜಿನ್ನಮ್ಮ. ಪ್ರಾರಂಭಿಕ ಶಿಕ್ಷಣ ಹೊಸನಗರದಲ್ಲಿ. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಿಂದ ಬಿ.ಎಸ್ಸಿ ಪದವಿ ಮತ್ತು ನ್ಯಾಷನಲ್ ಕಾಲೇಜ್ ಆಫ್ ಎಜುಕೇಷನ್‌ನಿಂದ ಬಿ.ಇಡಿ. ಪದವಿಯನ್ನೂ,. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಹಾಗೂ ‘‘ಜೈನ ಜನಪದ ಸಾಹಿತ್ಯ-ಸಂಪಾದನೆ ಹಾಗೂ ಅಧ್ಯಯನ’’ ಪ್ರಬಂದ ಮಂಡಿಸಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದಿದ್ದಾರೆ.  ಹೈಸ್ಕೂಲು ಅಧ್ಯಾಪಕರಾಗಿ ಪಿಎಚ್.ಡಿ. ಪದವಿಗಳಿಸಿದ ರಾಜ್ಯದ ...

READ MORE

Related Books