ಕನ್ನಡ ಕಾವ್ಯ ಪ್ರಕಾಶ ಸಂಪುಟ-1

Author : ಕೆ.ಕೃಷ್ಣಮೂರ್ತಿ

Pages 199

₹ 6.00




Year of Publication: 1955
Published by: ಶಾರದಾ ಮಂದಿರ
Address: ಕೃಷ್ಣರಾಜಪುರಂ, ಮೈಸೂರು

Synopsys

ಸಂಸ್ಕೃತ ಕವಿ ಮಮ್ಮಟನ ಮೂಲಗ್ರಂಥದ ಕನ್ನಡಾನುವಾದವೇ ಈ ಕೃತಿ-ಕನ್ನಡ ಕಾವ್ಯ ಪ್ರಕಾಶ ಸಂಪುಟ-1. ಡಾ. ಕೆ. ಕೃಷ್ಣಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕವಿ ಮಮ್ಮಟನ ಕಾವ್ಯ ಮಿಮಾಂಸೆಯನ್ನು ಸವಿಸ್ತಾರವಾಗಿ ಇಲ್ಲಿ ಚರ್ಚಿಸಿ, ಅಗತ್ಯವಿರುವೆಡೆ ಅಡಿ ಟಿಪ್ಪಣಿಯೂ ನೀಡಲಾಗಿದೆ. ಈತನ ಕಾಲ-ದೇಶ, ಸಾಹಿತ್ಯ ಕೃತಿಗಳು, ಸಂಸ್ಕೃತದ ಮೂಲ ಪಠ್ಯದ ಜೊತೆಗೆ ಕನ್ನಡಾನುವಾದವೂ ನೀಡಿದ್ದು, ಓದುಗರಿಗೆ ತೊಂದರೆಯಾಗದು. ಪದ್ಯಮಯವಾದ ಈ ಬರೆಹಗಳನ್ನು ಪದ್ಯಮಯವಾಗಿಯೇ ಲೇಖಕರು ಅನುವಾದಿಸಿದ್ದು, ಮೂಲ ಕೃತಿಯ ಸ್ವಾದವನ್ನೇ ಓದಿಗರಿಗೆ ನೀಡಲು ಯತ್ನಿಸಿದ್ದೇ ಈ ಕೃತಿಯ ವಿಶೇಷ. ಕನ್ನಡ ಕಾವ್ಯ ಪ್ರಕಾಶದ ಪಠ್ಯವನ್ನು ಪ್ರಬುದ್ಧ ಕರ್ಣಾಟಕದಲ್ಲಿ ಧಾರಾವಾಹಿಯಾಗಿ ಪ್ರಕಟಿಸಲಾಗಿತ್ತು.

About the Author

ಕೆ.ಕೃಷ್ಣಮೂರ್ತಿ

ಕೆ.ಕೃಷ್ಣಮೂರ್ತಿ- ಹುಟ್ಟಿದ್ದು ಹಾಸನ ಜಿಲ್ಲೆ ಕೇರಳಾಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ ಮತ್ತು ಎಂ.ಎ. ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಸರ್ವಪ್ರಾವಿಣ್ಯ. ಬೊಂಬಾಯಿ ವಿಶ್ವವಿದ್ಯಾಲಯದಿಂದ ಧ್ವಾನ್ಯಾಲೋಕ ಮತ್ತು ಅದರ ವಿಮರ್ಶೆ ಡಾಕ್ಟರೇಟ್ ಪದವಿ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕೆಲಸ. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಮುಖ್ಯಪುಸ್ತಕಗಳು ಧ್ವನ್ಯಾಲೋಕ ಮತ್ತು ಆನಂದವರ್ಧನನ ಕಾವ್ಯಮೀಮಾಂಸೆ, ಮಮ್ಮಟನ ಕಾವ್ಯ ಪ್ರಕಾಶ. ರಾಜಶೇಖರನ ಕಾವ್ಯ ಮೀಮಾಂಸೆ, ದಂಡಿಯ ಕಾವ್ಯದರ್ಶನ, ವಾಮನನ ಕಾವ್ಯಲಂಕರಸೂತ್ರವೃತ್ತಿ, ಕ್ಷೇಮೇಂದ್ರನ ಕವಿಕಂಠಾಭರಣ, ಔಚಿತ್ಯಚರ್ಚೆ, ಭಾಮಹನ ಕಾವ್ಯಾಲಂಕಾರ, ಹಾಗೆಯೇ ಇಂಗ್ಲಿಷಿನಲ್ಲಿ ವಕ್ರೋಕ್ತಿಜೀವಿತ, ಧ್ವನ್ಯಾಲೋಕ, ನಾಟ್ಯಶಾಸ್ತ್ರ ಮತ್ತು ಅಭಿನವ ಭಾರತಿ, ...

READ MORE

Related Books