ಕನ್ನಡ ಕವಿ ಚರಿತ್ರೆ ಸಂಪುಟ-2

Author : ಹೀ.ಚಿ. ಶಾಂತವೀರಯ್ಯ

Pages 274

₹ 270.00




Year of Publication: 2017
Published by: ಅಕ್ಷರ ಮಂಟಪ ಪ್ರಕಾಶನ
Address: ಹಂಪಿನಗರ, ಬೆಂಗಳೂರು

Synopsys

ಕನ್ನಡ ಕವಿ ಚರಿತ್ರೆ ಸಂಪುಟ-2: ಈ ಕೃತಿಯನ್ನು ಹಿರಿಯ ಸಾಹಿತಿ ಹೀ.ಚಿ. ಶಾಂತವೀರಯ್ಯ ಅವರು ರಚಿಸಿದ್ದು, ಕನ್ನಡದ ಕವಿಗಳ ಮಾಹಿತಿ ಒಳಗೊಂಡಿದೆ. ಕನ್ನಡ ಸಾಹಿತ್ಯವನ್ನು ಮೂರು ಭಾಗಗಳಾಗಿ ಅಂದರೆ ಹಳೆಗನ್ನಡ, ನಡುಗನ್ನಡ ಹಾಗೂ (ಹೊಸ) ಆಧುನಿಕ ಕನ್ನಡ ಎಂದು ವಿಂಗಡಿಸಿದೆ. ಹಳೆಗನ್ನಡ ಕವಿಗಳೆಂದರೆ ಪಂಪ, ರನ್ನ, ಪೊನ್ನ, ಜನ್ನ, ಪುಲಿಗೆರೆ ಸೋಮನಾಥ, ಪಲ್ಕುರಿಕಿ ಸೋಮನಾಥ ಇತರರು. ನಡುಗನ್ನಡ ಕವಿಗಳೆಂದರೆ ಹರಿಹರ, ರಾಘವಾಂಕ, ಭೀಮಕವಿ, ಲಕ್ಷ್ಮೀಶ, ಕುಮಾರವ್ಯಾಸ, ಜೇಡರ ದಾಸಿಮಯ್ಯ, ವಾದಿರಾಜರು, ಪುರ೦ದರದಾಸ, ಕನಕದಾಸ, ಬಸವಣ್ಣಇತರರು ಹಾಗೂ ಹೊಸಗನ್ನಡದ ಕವಿಗಳೆಂದರೆ ಮಧುರ ಚೆನ್ನ, ಶಾ೦ತಕವಿ, ಆನಂದಕಂದ, ಭಟ್ಟಾಕಳಂಕ, ಗೋವಿಂದ ಪೈ, ಆಲೂರು ವೆಂಕಟರಾಯರು, ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆ೦ಪು), ದ.ರಾ.ಬೇಂದ್ರೆ, ಮಾಸ್ತಿ, ಶಿವರಾಮ ಕಾರ೦ತ, ವಿ.ಕೃ.ಗೋಕಾಕ್ ಇತರರು. ಈ ಎಲ್ಲ ಕವಿಗಳ ಚರಿತ್ರೆಯನ್ನು ಶಾಸ್ತ್ರೀಯವಾಗಿ ಪರಿಚಯಿಸಿದ್ದು ಈ ಕೃತಿಯ ಹೆಗ್ಗಳಿಕೆ.

About the Author

ಹೀ.ಚಿ. ಶಾಂತವೀರಯ್ಯ
(11 June 1934 - 27 September 2020)

ಲೇಖಕ ಶಾಂತವೀರಯ್ಯನವರು ಹುಟ್ಟಿದ್ದು ತಿಪಟೂರು ತಾಲ್ಲೂಕಿನ ಹೀಚನೂರಿನ ದೇವರ ಹಟ್ಟಿ ಪ್ರಸಿದ್ಧ ಮನೆತನದಲ್ಲಿ. ತಂದೆ-ಚಿಕ್ಕಯ್ಯ, ತಾಯ- ಚಿಕ್ಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಹೀಚನೂರು, ತಿಪಟೂರಿನಲ್ಲಿ ಪೂರ್ಣಗೊಳಿಸಿದ ಅವರು ಕಾಲೇಜು ವಿದ್ಯಾಭ್ಯಾಸವನ್ನು ದಾವಣಗೆರೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ಬಿ.ಎ. (ಆನರ್ಸ್) ಎಂ.ಎ. ಮತ್ತು ಬಿ.ಇಡಿ ಪದವಿಗಳನ್ನು ಪಡೆದರು. ಪದವಿಯ ನಂತರ ಉದ್ಯೋಗ ಪ್ರಾರಂಭಿಸಿದ್ದು ತಿಪಟೂರು, ಚಿಕ್ಕನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ. ನಂತರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಹಾಯಕ ಸಂಪಾದಕರಾಗಿ, ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆಸಲ್ಲಿಸಿ ನಿವೃತ್ತಿ ಪಡೆದರು. ಕನ್ನಡದ ಪ್ರಸಿದ್ಧ ಪತ್ರಿಕೆಗಳಲ್ಲಿ ಅವರ ಹಲವಾರು ಲೇಖನಗಳು ನಗೆಬರಹಗಳು ...

READ MORE

Related Books