ಕನ್ನಡ ಸಾಹಿತ್ಯ ವಿಮರ್ಶೆಗೆ ಡಾ. ಜಿ.ಎಸ್. ಆಮೂರವರ ಕೊಡುಗೆ

Author : ಗೋವಿಂದರಾಜ ತಳಕೋಡ

Pages 230

₹ 160.00




Year of Publication: 2012
Published by: ಚಿನ್ಮಯ ಪ್ರಕಾಶನ
Address: # ಬನಶಂಕರಿ ನಗರ, ಕೆಲಗೇರಿ ರಸ್ತೆ, ಧಾರವಾಡ-8

Synopsys

ಡಾ. ಗೋವಿಂದರಾಜ ತಳಕೋಡ ಅವರ ಕೃತಿ-ಕನ್ನಡ ಸಾಹಿತ್ಯ ವಿಮರ್ಶೆಗೆ ಡಾ. ಜಿ.ಎಸ್. ಆಮೂರವರ ಕೊಡುಗೆ. ವಿಮರ್ಶೆ ಕುರಿತು ಸಂಶೋಧನಾತ್ಮಕ ವಿಚಾರವೇ ಈ ಕೃತಿ.  ‘ಕ್ರಿಟಿಕ್ ಆನ್ ದಿ ರನ್’ ಸೇರಿದಂತೆ 14 ಇಂಗ್ಲಿಷ್ ಕೃತಿಗಳು ಹಾಗೂ ಭುವನದಭಾಗ್ಯ, ಆಧುನಿಕ ಕನ್ನಡ ಸಾಹಿತ್ಯದ ವಿರಾಟ್ ಪುರುಷ (ಶ್ರೀರಂಗ ಸಾರಸ್ವತ ಸಮೀಕ್ಷೆ)  ಸೇರಿದಂತೆ ಇತರೆ ಕನ್ನಡ ಕೃತಿಗಳು ಹೀಗೆ ಒಟ್ಟು 20 ಕೃತಿಗಳನ್ನು ಲೇಖಕರು ವಿಮರ್ಶೆಗೆ ಒಳಪಡಿಸಿದ್ದಾರೆ. ಹೀಗಾಗಿ, ಕನ್ನಡ ವಿಮರ್ಶೆ ವಲಯದಲ್ಲಿ ಈ ಕೃತಿಯು ಶ್ರೇಷ್ಠ ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ. ವಿಮರ್ಶೆಯ ತಮ್ಮದೇ ಆದ ಮಾನದಂಡಗಳ ಮೂಲಕ ಕೃತಿ-ಕೃತಿಕಾರ ಹಿನ್ನೆಲೆಯಲ್ಲಿ ವಿಮರ್ಶೆಯ ಆಯಾಮಗಳನ್ನು ವಿಸ್ತರಿಸಿದ ಖ್ಯಾತಿ ಆಮೂರರಿಗೆ ಸಲ್ಲುತ್ತದೆ. ಆಮೂರರ ಅಭಿರುಚಿ, ಮೌಲ್ಯಗಳು, ಭಾವನೆಗಳು, ತೀರ್ಮಾನಗಳು ..ಹೀಗೆ ಎಲ್ಲ ಆಯಾಮಗಳ ಮೂಲಕ ಆಮೂರರ ವ್ಯಕ್ತಿತ್ವವನ್ನುಕಟ್ಟಿಕೊಡುವ ಕೃತಿ ಇದಾಗಿದೆ.   

About the Author

ಗೋವಿಂದರಾಜ ತಳಕೋಡ

ಲೇಖಕ ಗೋವಿಂದರಾಜ ತಳಕೋಡ ಅವರು ಧಾರವಾಡ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದವರು. ಪ್ರಾಥಮಿಕ-ಪ್ರೌಢಶಿಕ್ಷಣ ಹುಟ್ಟೂರಿನಲ್ಲಿ ನಂತರ ನರಗುಂದದಲ್ಲಿ ಪಿಯುಸಿ ಪೂರ್ಣಗೊಳಿಸಿದರು. ಬಳ್ಳಾರಿಯ ಸಕಾರಿ ಪ್ರಥಮ ದರ್ಜೆ ಕಲೇಜಿನಲ್ಲಿ ಬಿ.ಎ. ಹಾಗೂ ಗುಲಬರ್ಗಾ ವಿ.ವಿ.ಯಿಂದ ಎಂ.ಎ ಹಾಗೂ ಎಂ.ಫಿಲ್ ಮತ್ತು ಧಾರವಾಡದ ಕರ್ನಾಟಕ ವಿ.ವಿ.ಯಿಂದ ಪಿಎಚ್ ಡಿ ಪದವೀಧರರು. ಚೆನ್ನೈನಲ್ಲಿಯ ಬಹುಭಾಷೆ ಅಧ್ಯಯನ ಸಂಸ್ಥೆಯಲ್ಲಿ ಸಹಾಯಕ ಸಂಪಾದಕರಾಗಿ ಸೇವೆ ನಂತರ, ಕಳೆದ 15 ವರ್ಷದಿಂದ ಧಾರವಾಡದ ಜೆಎಸ್ ಎಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ.  ಕೃತಿಗಳು: ಕನ್ನಡ ಸಾಹಿತ್ಯ ವಿಮರ್ಶೆಗೆ ಜಿ.ಎಸ್. ಆಮೂರವರ ಕೊಡುಗೆ,  ಸಮಾಲೋಕ, ಕಲ್ಲು ಕರಗಿದಾಗ, ಮನವ ಕಾಡುವ ...

READ MORE

Related Books