ಕನ್ನಡ ಸಾಹಿತ್ಯ ಪರಂಪರೆ ಮತ್ತು ಕಂಬಾರರು

Author : ವೀರೇಶ ಬಡಿಗೇರ

Pages 200

₹ 95.00




Year of Publication: 2012
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
Phone: 26617100, 26617755

Synopsys

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವೀರೇಶ ಬಡಿಗೇರ ಅವರು ಚಂದ್ರಶೇಖರ ಕಂಬಾರ ಅವರ ಸಂಶೋಧನೆ, ಸಂಸ್ಕೃತಿ ಚಿಂತನೆ, ಸಂಪಾದನೆ ಕುರಿತು ಬರೆದಿದ್ದಾರೆ. ಕನ್ನಡ ವಿಮರ್ಶೆಯಲ್ಲಿ ಕಂಬಾರ ಬಗ್ಗೆ ಇದುವರೆಗೆ ಕಾವ್ಯ, ನಾಟಕ, ಕಾದಂಬರಿ ಬಗ್ಗೆ ಚರ್ಚೆಯಾದದ್ದೇ ಹೆಚ್ಚು. ಹಿರಿಯ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಮಣ್ಯ ಅವರು ಮುನ್ನುಡಿಯಲ್ಲಿ ’ಬಡಿಗೇರರ ಈ ಕೃತಿ ಮೊದಲ ಬಾರಿಗೆ ಕಂಬಾರರ ಸಂಶೋಧನೆ, ಸಂಸ್ಕೃತಿ ಚಿಂತನೆ, ಸಂಪಾದನೆ, ಶಿಕ್ಷಣ, ಜಾನಪದ - ಈ ವಲಯಗಳನ್ನು ಒಳಗೊಂಡು ರೂಪಿತವಾಗಿದೆ. ಹೀಗಾಗಿ ಬಡಿಗೇರರ ಈ ಅಧ್ಯಯನ ಕಂಬಾರರ ಸಾಹಿತ್ಯ ಕೃಷಿಯ ಸಮಗ್ರ ಅಧ್ಯಯನದ ವ್ಯಾಪ್ತಿ ಪಡೆದು ಕೊಂಡಿದೆ. ತಮ್ಮ ಜಾನಪದ ಅಧ್ಯಯನಗಳ ಮೂಲಕ, ಸಂಸ್ಕೃತಿ ಸಂಕಥನಗಳ ಮುಖಾಂತರ ವಸಾಹತು ಶಾಹಿ ಪರಂಪರೆಗೆ ಮುಖಾಮುಖಿಯಾಗುತ್ತಿರುವ ವೀರೇಶ ಬಡಿಗೇರರು ತಮ್ಮ ಈ 'ಕನ್ನಡ ಸಾಹಿತ್ಯ ಪರಂಪರೆ ಮತ್ತು ಕಂಬಾರರು' ಕೃತಿಯ ಮೂಲಕ ಕನ್ನಡ ಪರಂಪರೆಯನ್ನು ಭಿನ್ನವಾಗಿ ಓದುವ, ಪರ್ಯಾಯ ಸಂಸ್ಕೃತಿಯ ಚರಿತ್ರೆಯನ್ನು ರೂಪಿಸುವ ಪ್ರಯತ್ನ ಮಾಡುತ್ತಿರುವಂತೆ ತೋರುತ್ತದೆ’ ಎಂದು ವಿವರಿಸಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವೀರೇಶ ಬಡಿಗೇರ ಅವರು ಚಂದ್ರಶೇಖರ ಕಂಬಾರ ಅವರ ಸಂಶೋಧನೆ, ಸಂಸ್ಕೃತಿ ಚಿಂತನೆ, ಸಂಪಾದನೆ ಕುರಿತು ಬರೆದಿದ್ದಾರೆ. ಕನ್ನಡ ವಿಮರ್ಶೆಯಲ್ಲಿ ಕಂಬಾರ ಬಗ್ಗೆ ಇದುವರೆಗೆ ಕಾವ್ಯ, ನಾಟಕ, ಕಾದಂಬರಿ ಬಗ್ಗೆ ಚರ್ಚೆಯಾದದ್ದೇ ಹೆಚ್ಚು. ಹಿರಿಯ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಮಣ್ಯ ಅವರು ಮುನ್ನುಡಿಯಲ್ಲಿ ’ಬಡಿಗೇರರ ಈ ಕೃತಿ ಮೊದಲ ಬಾರಿಗೆ ಕಂಬಾರರ ಸಂಶೋಧನೆ, ಸಂಸ್ಕೃತಿ ಚಿಂತನೆ, ಸಂಪಾದನೆ, ಶಿಕ್ಷಣ, ಜಾನಪದ - ಈ ವಲಯಗಳನ್ನು ಒಳಗೊಂಡು ರೂಪಿತವಾಗಿದೆ. ಹೀಗಾಗಿ ಬಡಿಗೇರರ ಈ ಅಧ್ಯಯನ ಕಂಬಾರರ ಸಾಹಿತ್ಯ ಕೃಷಿಯ ಸಮಗ್ರ ಅಧ್ಯಯನದ ವ್ಯಾಪ್ತಿ ಪಡೆದು ಕೊಂಡಿದೆ. ತಮ್ಮ ಜಾನಪದ ಅಧ್ಯಯನಗಳ ಮೂಲಕ, ಸಂಸ್ಕೃತಿ ಸಂಕಥನಗಳ ಮುಖಾಂತರ ವಸಾಹತು ಶಾಹಿ ಪರಂಪರೆಗೆ ಮುಖಾಮುಖಿಯಾಗುತ್ತಿರುವ ವೀರೇಶ ಬಡಿಗೇರರು ತಮ್ಮ ಈ 'ಕನ್ನಡ ಸಾಹಿತ್ಯ ಪರಂಪರೆ ಮತ್ತು ಕಂಬಾರರು' ಕೃತಿಯ ಮೂಲಕ ಕನ್ನಡ ಪರಂಪರೆಯನ್ನು ಭಿನ್ನವಾಗಿ ಓದುವ, ಪರ್ಯಾಯ ಸಂಸ್ಕೃತಿಯ ಚರಿತ್ರೆಯನ್ನು ರೂಪಿಸುವ ಪ್ರಯತ್ನ ಮಾಡುತ್ತಿರುವಂತೆ ತೋರುತ್ತದೆ’ ಎಂದು ವಿವರಿಸಿದ್ದಾರೆ.

About the Author

ವೀರೇಶ ಬಡಿಗೇರ
(04 April 1966)

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವೀರೇಶ ಬಡಿಗೇರ, ಕನ್ನಡದ ಹಸ್ತಪ್ರತಿ ತಜ್ಞರಲ್ಲಿ ಒಬ್ಬರು. 1966 ಏಪ್ರಿಲ್‌ 4 ರಂದು ಜನಿಸಿದರು. ಎಂ. ಎ., ಪಿಎಚ್.ಡಿ. ಹಾಗೂ ಬಿ.ಇಡ್, ಡಿಪ್ಲೊಮಾ ಇನ್ ಎಪಿಗ್ರಾಫಿ ಮಾಡಿದ್ದು, ಕನ್ನಡ ಸಾಹಿತ್ಯ, ಸಂಸ್ಕೃತಿ, ಜಾನಪದ, ಸಂಗೀತ, ತಂತ್ರಜ್ಞಾನ ಆಸಕ್ತಿ ಕ್ಷೇತ್ರಗಳು. 28 ವರ್ಷ ಕಾಲ ಬೋಧನೆ ಹಾಗೂ ಸಂಶೋಧನೆಯ ಅನುಭವ ಇದೆ. ಬಾಗಲಕೋಟೆಯ  ಪಿ. ಎಂ. ನಾಡಗೌಡಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ  ಅರೆಕಾಲಿಕ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. 1992 ರಿಂದ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಸಹಾಯಕರಾಗಿ ಕೆಲಸಕ್ಕೆ ಸೇರಿದರು. 1996 ಆಗಸ್ಟನಿಂದ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿಉಪನ್ಯಾಸಕರಾದರು. 1996ರಲ್ಲಿ ಉತ್ತರ ಕರ್ನಾಟಕದ ಜಾನಪದ ...

READ MORE

Related Books