ಕನ್ನಡ ಉಕ್ತಲೇಖನದ ಪಾಠಗಳು

Author : ಟಿ.ಎಸ್. ಗೋಪಾಲ್

Pages 52

₹ 45.00




Year of Publication: 2019
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

ಲೇಖಕ ಟಿ.ಎಸ್. ಗೋಪಾಲ ಅವರು ರಚಿಸಿದ ಕೃತಿ-ಕನ್ನಡ ಉಕ್ತಲೇಖನದ ಪಾಠಗಳು. ಶಿಕ್ಷಕರು ಹೇಳುವುದನ್ನು ಕೇಳಿಸಿಕೊಂಡು ಬರೆಯುತ್ತಾ ಹೋಗುವುದು ಉಕ್ತಲೇಖನ. ವಿದ್ಯಾರ್ಥಿಗಳು ಏನು ಕೇಳಿಸಿಕೊಳ್ಳುವರೋ ಅದನ್ನೇ ಬರೆಯುತ್ತಾರೆ. ಹೀಗಾಗಿ, ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಶಿಕ್ಷಕರ ಪಾಠಗಳನ್ನು ಕೇಳುತ್ತಿರಬೇಕು. ಕೇಳಿಸಿಕೊಂಡಾದ ಮೇಲೂ ವ್ಯಾಕರಣ ಶುದ್ಧಿ ಕಾಯ್ದುಕೊಂಡು ಬರೆಯಬೇಕು. ಇಂತಹ ಬರಹಗಳ ರೂಢಿ ಕಠಿಣತಮವಾಗಿರುತ್ತದೆ. ಆದರೆ, ವಿದ್ಯಾರ್ಥಿಗಳಲ್ಲಿ ಇಂತಹ ಹವ್ಯಾಸ ರೂಢಿಸಬೇಕು. ಈ ಕುರಿತ ಕೆಲ ಮಹತ್ವದ ಅಂಶಗಳನ್ನು ಲೇಖಕರು ಇಲ್ಲಿ ಚರ್ಚಿಸಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೂ ಉತ್ತಮ ಮಾರ್ಗದರ್ಶಿಯಾಗಿದೆ.

About the Author

ಟಿ.ಎಸ್. ಗೋಪಾಲ್

ಲೇಖಕ ಟಿ. ಎಸ್. ಗೋಪಾಲ್ ಅವರ ಹೆಸರು ತಿರು ಶ್ರೀನಿವಾಸಾಚಾರ್ಯ ಗೋಪಾಲ್. ಕನ್ನಡ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನ ಕುರಿತ ಪುಸ್ತಕಗಳನ್ನು ಬರೆದಿದ್ದಾರೆ. ಅವರ 'ಕಾಡು ಕಲಿಸುವ ಪಾಠ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (2013) ದೊರೆತಿದೆ. ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಎ. ಹಾಗೂ ಎಂ. ಎ. ಪದವಿ (ಚಿನ್ನದ ಪದಕ) ಪಡೆದಿರುವ ಅವರು ದಕ್ಷಿಣ ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಅವರು ...

READ MORE

Related Books