ಕನ್ನಡಾಭಿಮಾನ

Author : ಬರಗೂರು ರಾಮಚಂದ್ರಪ್ಪ

Pages 64

₹ 40.00




Published by: ಅಂಕಿತ ಪುಸ್ತಕ
Address: #ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು-560004

Synopsys

ಬರಗೂರು ರಾಮಚಂದ್ರಪ್ಪ ಅವರ ‘ಕನ್ನಡಾಭಿಮಾನ’ ಕೃತಿಯು ರಚನಾತ್ಮಕ ಹಾಗೂ ಸೃಜನಾತ್ಮಕ ಕಿರುಹೊತ್ತಿಗೆಯಾಗಿದೆ. ಈ ಕೃತಿಯಲ್ಲಿನ ಲೇಖನಗಳು ಕನ್ನಡಪರ ನೆಲೆಗಳನ್ನು ವಾಸ್ತವದ ಉಸಿರಲ್ಲಿ ತುಂಬಿಕೊಂಡಿರುವ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿದೆ. ಕನ್ನಡದ ಅಭಿಮಾನವು ಆಕಾಶದ ಆದರ್ಶವಾಗುವ ಬದಲು ಭೂಮಿಯ ಬೆಳಕಾಗಬೇಕೆಂದು ನಂಬಿದ ಬರಗೂರರು, ಮುಖ್ಯ ಮಾಹಿತಿಗಳ ಮೂಲಕ ಕನ್ನಡವನ್ನು ಒಂದು ತತ್ವವಾಗಿ ಕಟ್ಟಿಕೊಟ್ಟಿದ್ದಾರೆ. ಭಾರತದ ಮಿಕ್ಕೆಲ್ಲ ರಾಜ್ಯ ಹಾಗೂ ಭಾಷೆಗಳು ಸುಸ್ಥಿಯಲ್ಲಿದ್ದು ಕನ್ನಡಕ್ಕೆ ಮಾತ್ರವೇ ಕುತ್ತು ಬಂದಿದೆ ಎಂಬ ರೂಢಮೂಲಭಾವನೆಯನ್ನು ಸಾಧಾರವಾಗಿ ನಿರಾಕರಿಸಿ, ಸಮಕಾಲೀನ ಸತ್ಯಗಳನ್ನು ಅನಾವರಣಗೊಳಿಸುವ ಈ ಪುಸ್ತಕವು ಕನ್ನಡಿಗರಿಗೆ ಮಹತ್ವದ ಕೈದೀವಿಯಾಗಿದೆ.

About the Author

ಬರಗೂರು ರಾಮಚಂದ್ರಪ್ಪ
(18 October 1946)

ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕತೆ-ಕಾದಂಬರಿ-ಕಾವ್ಯಗಳಂತಹ ಸೃಜನಶೀಲ ಕೃತಿಗಳ ಜೊತೆಗೆ ಚಿಂತನ ಪರ ಬರಹ, ವಿಮರ್ಶೆಗಳ ಮೂಲಕ ಹೆಸರಾದವರು. ರಾಮಚಂದ್ರಪ್ಪ ಅವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ, ನಿರ್ದೇಶಕ ಆಗಿದ್ದರು. ಸಾಹಿತ್ಯದಷ್ಟೇ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನಿಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ವಿಭಿನ್ನ ಹಾದಿ ಹಿಡಿದವರು. ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ...

READ MORE

Related Books