ಕರ್ಣಾಟಕ ಕವಿ ಚರಿತೆ

Author : ಆರ್. ನರಸಿಂಹಾಚಾರ್

Pages 714

₹ 4.00




Year of Publication: 1929
Published by: ರಾ. ನರಸಿಂಹಾಚಾರ್
Address: ಬೆಂಗಳೂರು

Synopsys

ರಾ. ನರಸಿಂಹಾಚಾರ್ ಅವರು ಬರೆದ `ಕರ್ಣಾಟಕ ಕವಿ ಚರಿತೆ-ಸಂಪುಟ--3' ಒಂದು ಗಮನಾರ್ಹ, ಸದಾ ಕಾಯ್ದಿಟ್ಟುಕೊಳ್ಳಬೇಕಾದ ಕೃತಿ. ಈ ಕೃತಿಯಲ್ಲಿ ದ್ರಾವಿಡ ಭಾಷೆಗಳು, ಸಾಂಸ್ಕೃತಿಕ ಆಚರಣೆಗಳು, ನಾಗರಿಕತೆ ಹಾಗೂ ಸಂಸ್ಕೃತ ಭಾಷೆಯಿಂದ ದ್ರಾವಿಡ ಭಾಷೆ ಹೇಗೆ ಭಿನ್ನ, ಗೌಡ ಭಾಷೆಗಳು, ಕನ್ನಡಿಗರ ನಾಗರಿಕತೆ, ವಚನಕಾರರು, ಪ್ರಾಚೀನ ಕನ್ನಡದ ಕವಿಗಳು, ಗ್ರಂಥಕರ್ತರ ಪಟ್ಟಿ, ನಾಗಚಂದ್ರ, ರುದ್ರಭಟ್ಟ, ಸುಮನೋಬಾಣ, ನಾಗವರ್ಮ, ಸೋಮರಾಜ, ಸಿಂಗೀರಾಜ, ಲಕ್ಷ್ಮೀಶ, ಗೊಮ್ಮಟೇಶ್ವರ ಪ್ರತಿಷ್ಠೆ, ಹೀಗೆ ಕನ್ನಡ ಸಾಹಿತ್ಯದ ಆದಿಯಿಂದ ಹಿಡಿದು 19ನೇ ಶತಮಾನದ ಆರಂಭದ ಕಾಲದವರೆಗೂ ಕನ್ನಡ ಸಾಡಿನ ಸಾಹಿತ್ಯ ಚರಿತ್ರೆಯನ್ನು ಸುದೀರ್ಘವಾಗಿ ಕಟ್ಟಿಕೊಟ್ಟ ಸಂಶೋಧನಾತ್ಮಕ, ಮಾಹಿತಿ ಪೂರ್ಣ ಹಾಗೂ ಕನ್ನಡ ಸಾಹಿತ್ಯ ಚರಿತ್ರೆಗೆ ಕರೀಟಪ್ರಾಯದ ಕೃತಿ ಇದು.

ಒಟ್ಟು 32 ಪುಟಗಳ ವಿಷಯ ಪರಿವಿಡಿ, 58ಪುಟಗಳ ಇಂಗ್ಲಿಷ್ ಹಾಗೂ 100 ಪುಟಗಳ ಕನ್ನಡ ಪ್ರಸ್ತಾವನೆಯನ್ನು ಲೇಖಕರು ಬರೆದಿದ್ದು, ಗಂಭೀರ  ಅಧ್ಯಯನದ ದ್ಯೋತಕವಾಗಿ  ಇವು ಕನ್ನಡಿ ಹಿಡಿಯುತ್ತವೆ.

About the Author

ಆರ್. ನರಸಿಂಹಾಚಾರ್
(08 April 1860 - 06 December 1936)

ಮದ್ರಾಸ್ ವಿಶ್ವವಿದ್ಯಾಲಯದಿಂದ ಮೊಟ್ಟ ಮೊದಲನೆಯ ಕನ್ನಡ ಎಂ.ಎ. ಪದವಿ ಪಡೆದ ಆರ್. ನರಸಿಂಹಾಚಾರ್ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ‘ಕವಿಚರಿತೆ’ಕಾರ ಎಂದೇ ಚಿರಪರಿಚಿತರು. ಸಂಶೋಧಕ ಮತ್ತು ಶಾಸನ ತಜ್ಞರೂ ಆಗಿದ್ದ ನರಸಿಂಹಾಚಾರ್ ಅವರು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಕರಲ್ಲಿ ಒಬ್ಬರು. ಮಂಡ್ಯದ ಕೊಪ್ಪಲು ಗ್ರಾಮದಲ್ಲಿ 1860ರ ಏಪ್ರಿಲ್ 9ರಂದು ಜನಿಸಿದ ಆರ್. ನರಸಿಂಹಾಚಾರ್ ಅವರ ತಂದೆ ತಿರುನಾರಾಯಣ ಪೆರುಮಾಳ್ ಮತ್ತು ತಾಯಿ ಶಿಂಗಮ್ಮಾಳ್. ಕೂಲಿಮಠದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಮದ್ರಾಸಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದು ಮೆಟ್ರಿಕ್ ಪಾಸಾದರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿ 1882ರಲ್ಲಿ ...

READ MORE

Related Books