ಕಾರಂತರ ಕಾದಂಬರಿಗಳಲ್ಲಿ ನಿಸರ್ಗ

Author : ಎಸ್. ಅನಂತನಾರಾಯಣ

Pages 48

₹ 15.00




Year of Publication: 1991
Published by: ಕರ್ನಾಟಕ ಸಂಘ ಪುತ್ತೂರು
Address: ದಕ್ಷಿಣ ಕನ್ನಡ ಜಿಲ್ಲೆ, 574201

Synopsys

ಪ್ರಸಿದ್ಧ ವಿಮರ್ಶಕ, ಕಾರಂತ ಸಾಹಿತ್ಯದ ವಿಶೇಷ ಅಧ್ಯಯನ ನಡೆಸಿದ ಎಸ್. ಅನಂತ ನಾರಾಯಣ ಅವರು 1989ರಲ್ಲಿ ’ಶಿವರಾಮ ಕಾರಂತ ದತ್ತಿ ನಿಧಿ’ಯಡಿ ಆಯೋಜಿಸಿದ್ದ ಸಮಾರಭದಲ್ಲಿ ಪ್ರಥಮ ಉಪನ್ಯಾಸ ನೀಡಿದ ವಿಷಯ ’ ಕಾರಂತರ ಕಾದಂಬರಿಗಳಲ್ಲಿ ನಿಸರ್ಗ’. ದಕ್ಷಿಣ ಕನ್ನಡ ಜಿಲೆಯನ್ನು ಸಾಹಿತ್ಯದಲ್ಲಿ ಜೀವಂತವಾಗಿ ಮೂಡಿಸಿದ ಕಾರಂತರ ಬಗೆಗೆ, ಅವರಿಗೆ ನಿಕಟವಾದ ನಿಸರ್ಗದ ಕುರಿತಿರುವ ಪ್ರೀತಿಯನ್ನು ಇಲ್ಲಿ ವಿವರಿಸುತ್ತಾರೆ. ಈ ಕೃತಿಯಲ್ಲಿ ಮುಖ್ಯವಾಗಿ ’ ಮರಳಿ ಮಣ್ಣಿಗೆ’ ’ ಬೆಟ್ಟದ ಜೀವ’ ಹಾಗೂ ’ ಕುಡಿಯರ ಕೂಸು’ ಕಾದಂಬರಿಗಳ ವಿಮರ್ಶೆ ಬಂದಿದೆ. ಚೋಮನದುಡಿ, ಸರಸಮ್ಮನ ಸಮಾಧಿ, ಶನೀಶ್ವರನ ನೆರಳಲ್ಲಿ, ಚಿಗುರಿದ ಕನಸು, ಮುಗಿದಯುದ್ಧ, ಅಳಿದ ಮೇಲೆ  ಕಾದಂಬರಿಗಳ ಉಲ್ಲೇಖಗಳನ್ನು ನೀಡಿದ್ದಾರೆ. ಶಿವರಾಮ ಕಾರಂತರ ಸ್ಮೃತಿ ಪಟಲದಿಂದ  ಮತ್ತು  ಹುಚ್ಚು ಮನಸ್ಸಿನ ಹತ್ತು ಮುಖಗಳು-’ ಆತ್ಮ ಕಥನ’ ಕೃತಿಗಳಿಂದಲೂ ಪೂರಕವಾಗಿ, ಕಾರಂತರ ಮಾತುಗಳನ್ನೇ ಮತ್ತೇ ನೆನಪಿಸುತ್ತದೆ-ಈ ಕೃತಿ.

About the Author

ಎಸ್. ಅನಂತನಾರಾಯಣ
(30 November 1925 - 25 August 1992)

ಎಸ್. ಅನಂತನಾರಾಯಣ  ಕನ್ನಡದ ಪ್ರಗತಿಶೀಲ ಬರಹಗಾರರಲ್ಲಿ ಪ್ರಮುಖರೆನಿಸಿದ್ದಾರೆ. ಪ್ರೊ. ಅನಂತ ನಾರಾಯಣ ಅವರು ನವೆಂಬರ್ 30, 1925 ರಲ್ಲಿ ಮೈಸೂರಿನಲ್ಲಿ ಜನಿಸಿದರು. ತಂದೆ ಆರ್. ಸದಾಶಿವಯ್ಯನವರು ಮತ್ತು ತಾಯಿ ರಂಗಮ್ಮನವರು.  ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. (ಆನರ್ಸ್) ಮತ್ತು ಎಂ.ಎ. ಪದವಿಗಳನ್ನು ಪ್ರಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕಗಳೊಂದಿಗೆ ಗಳಿಸಿದರು. ಅವರು ಮೈಸೂರು ವಿಶ್ವವಿದ್ಯಾನಿಲಯದ ಹಲವಾರು ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸಂಗೀತ, ನಾಟಕ ಕಾಲೇಜಿನಲ್ಲಿ ಮೂರು ವರ್ಷ ನಾಟಕ ಶಾಸ್ತ್ರದ ಬೋಧಕರಾಗಿ, ನಾಟಕ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ಧಾರೆ.  ನವೋದಯ ಕಾಲದ ಬರಹಗಾರರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದು ಸಹಜ ಕ್ರಿಯೆ. ...

READ MORE

Related Books