ಕಾರ್ಗಿಲ್ ಕಂಪನ

Author : ಎಸ್‌.ಆರ್‌. ರಾಮಸ್ವಾಮಿ

Pages 127

₹ 70.00




Year of Publication: 2017
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವಶಿಲ್ಪ, ಕೆಂಪೇಗೌಡನಗರ, ಬೆಂಗಳೂರು- 560019

Synopsys

‘ಕಾರ್ಗಿಲ್ ಕಂಪನ’ ಎಸ್.ಆರ್. ರಾಮಸ್ವಾಮಿ, ದು.ಗು. ಲಕ್ಷ್ಮಣ, ಚಂದ್ರಶೇಖರ ಭಂಡಾರಿ ಅವರು ಬರೆದಿರುವ ಸಂಶೋಧನಾತ್ಮಕ ಕೃತಿ. ಕಾರ್ಗಿಲ್ ನಲ್ಲಿ ನಡೆದದ್ದು ನೆರೆ-ರಾಜ್ಯಗಳ ನಡುವಣ ಭೌಗೋಳಿಕ ಸಮರ ಮಾತ್ರವಲ್ಲ. ಇದು ಬರ್ಬರತೆಗೂ ನಾಗರಿಕತೆಗೂ ನಡುವಣ ಸಂಘರ್ಷ. 1948, 1965, 1971, 1999 - ಈ ಕದನ ಸರಣಿಯ ಬೀಜವಿರುವುದು ರಾಜಕೀಯ ಮುಖಂಡರ ದರ್ಶನ ಶೂನ್ಯತೆಯಲ್ಲಿ, ಜಿಹಾದ್ ಮಾನಸಿಕತೆಗೆ ತುಷ್ಟೀಕರಣ ಉತ್ತರವಾಗಲಾರದು ಎಂಬ ಪ್ರಜ್ಞೆಯ ಅಭಾವದಲ್ಲಿ ಸಹಸ್ರ ಸಹಸ್ರ ವೀರಯೋಧರ ಬಲಿದಾನ ವ್ಯರ್ಥವಾಗದೇ ಇರಬೇಕಾದರೆ ರಾಷ್ಟ್ರೀಯ ಅಸ್ಥಿತೆಯ ಭಾವನೆ ಸ್ಥಾಪಿತವಾಗಬೇಕು. ಈ ಆದ್ಯತೆಗೆ ಗಮನ ಸೆಳೆಯುವ ಕಾರ್ಗಿಲ್ ಕಂಪನ ಸಾಹಸಗಾಥೆ ಮಾತ್ರವಲ್ಲ, ಉದ್ಭೋಧಕ ವ್ಯಾಖ್ಯಾನ ಎನ್ನಬಹುದು.

About the Author

ಎಸ್‌.ಆರ್‌. ರಾಮಸ್ವಾಮಿ

ನಾಡೋಜ ಎಸ್‌.ಆರ್‌.ರಾಮಸ್ವಾಮಿ ಅವರು ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಸುಪರಿಚಿತರು. ಮೂಲತಃ ಬೆಂಗಳೂರಿನವರೇ ಆದ ರಾಮಸ್ವಾಮಿ ಅವರು ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದವರು. 1950ರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, 1972 ರಿಂದ 79ರ ವರೆಗೆ ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ರಾಷ್ಟೋತ್ಥಾನ ಸಾಹಿತ್ಯ ಮತ್ತು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರಾದ ಇವರು ಇಂದಿಗೂ ಆ ಹುದ್ದೆಯಲ್ಲಿ ಸೇವಾನಿರತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 55 ಕ್ಕೂ ...

READ MORE

Related Books