ಕರಿಮುಗಿಲು ಸರಿದಾಗ ಮತ್ತಿತರ ನಾಟಕಗಳು

Author : ನಿಡಸಾಲೆ ಪುಟ್ಟಸ್ವಾಮಯ್ಯ

Pages 40

₹ 10.00




Year of Publication: 1994
Published by: ಗೀತಾಂಜಲಿ ಪಬ್ಲಿಕೇಷನ್ಸ್
Address: # 60, 2D ಅಡ್ಡರಸ್ತೆ, 2ನೇ ಹಂತ, 3ನೇ ಬ್ಲಾಕ್, ನಾಗಬಾವಿ, ಬೆಂಗಳೂರು-560072

Synopsys

ಲೇಖಕ ನಿಡಸಾಲೆ ಪುಟ್ಟಸ್ವಾಮಯ್ಯ ಅವರ ಸಾಮಾಜಿಕ ನಾಟಕ ‘ಕರಿಮುಗಿಲ ಸರಿದಾಗ ಮತ್ತಿತರ ನಾಟಕಗಳು’. ಈಗಾಗಲೇ ಕಾದಂಬರಿಗಳನ್ನು ರಚಿಸಿದ ಲೇಖಕರು ಈಗ ನಾಟಕ ರಚಿಸಿದ್ದು, ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.

ಖ್ಯಾತ ಸಾಹಿತಿ ನವರತ್ನರಾಮ್ ಅವರು ಕೃತಿಗೆ ಮುನ್ನುಡಿ ಬರೆದು ‘20ಕ್ಕೂ ಹೆಚ್ಚು ಪಾತ್ರಗಳಿದ್ದರೂ ಪ್ರತಿಯೊಬ್ಬನ ಪಾತ್ರವು ತನ್ನದೇ ಆದ ಜೀವಂತಿಕೆಯಿಂದ ಅರ್ಥವತ್ತಾಗಿ ನಿಲ್ಲುತ್ತವೆ ಮತ್ತು ನಾಟಕದ ಓಟಕ್ಕೆ ಪೂರಕವಾಗಿದೆ. ಉನ್ನತ ಆದರ್ಶಗಳನ್ನು ಕಾರ್ಯಗತ ಮಾಡಲು ಸಮಾಜದಲ್ಲಿ ಅಷ್ಟು ಸುಲಭವಲ್ಲ. ಇದನ್ನು ಅಹಿಂಸಾತ್ಮಕವಾಗಿ ಪ್ರತಿಭಟಿಸುವುದು ನಾಟಕದ ವಸ್ತು. ಕಂದಾಚಾರಗಳನ್ನು ಬದಿಗೊತ್ತಿ ನವ ಸಮಾಜದ ನಿರ್ಮಾಣದ ಆಶಯವೂ ಈ ನಾಟಕದ ವಸ್ತು’ ಎಂದು ಪ್ರಶಂಸಿಸಿದ್ದಾರೆ. 

About the Author

ನಿಡಸಾಲೆ ಪುಟ್ಟಸ್ವಾಮಯ್ಯ
(05 February 1951)

ಲೇಖಕ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ನಿಡಸಾಲೆ (ಜನನ: 05-02-1951) ಗ್ರಾಮದವರು. ತಂದೆ- ಮುಳವಾಗಲಯ್ಯ, ತಾಯಿ- ನಿಂಗಮ್ಮ. ನಿಡಸಾಲೆಯಲ್ಲಿ ಪ್ರಾಥಮಿಕ, ಹುಲಿಯೂರುದುರ್ಗದಲ್ಲಿ ಪ್ರೌಢಶಾಲೆಯವರೆಗೆ ವ್ಯಾಸಂಗ ಪೂರ್ಣಗೊಳಿಸಿದರು. 1968ರಲ್ಲಿ ಬೆಂಗಳೂರಿನ ಐ.ಟಿ.ಐ.ನಲ್ಲಿ ತರಬೇತಿ ಪಡೆದು, 1969ರಿಂದ ಕೃಷಿ ಇಲಾಖೆಯಲ್ಲಿ ಉದ್ಯೋಗ ಆರಂಭಿಸಿದರು. ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಪಿ.ಯು.ಸಿ ತೇರ್ಗಡೆ ಯಾಗಿ ಬಿ.ಕಾಂ.ಗೆ ಸೇರ್ಪಡೆಯಾದರು. ಹಿರಿಯ ಸಾಹಿತಿ ಬಿ.ಜಿ. ಸತ್ಯಮೂರ್ತಿಯವರ ಒಡನಾಟದಲ್ಲಿ 1971ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಅವರು ಸಣ್ಣ ಕಥೆ, ನಾಟಕ, ಕಾದಂಬರಿ ಸೇರಿದಂತೆ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ.  ಕೃತಿಗಳು: ಗೊಲ್ಲಳ್ಳಿ ತೋಟ’, ‘ಸಾಧನೆಯ ...

READ MORE

Related Books