ಕರ್ಮ ಸಿದ್ಧಾಂತ ಹಾಗೂ ಪುನರ್ಜನ್ಮ

Author : ಶೇಷ ನವರತ್ನ

Pages 320

₹ 300.00




Year of Publication: 2020
Published by: ಸಮಾಜ ಪುಸ್ತಕಾಲಯ
Address: ಸುಭಾಶ ಬೀದಿ, ಧಾರವಾಡ

Synopsys

ಹಿರಿಯ ಲೇಖಕ ಶೇಷ ನವರತ್ನ ಅವರ ಕೃತಿ-ಕರ್ಮಸಿದ್ಧಾಂತ ಹಾಗೂ ಪುನರ್ಜನ್ಮ. ‘ಕರ್ಮ- ಪುನರ್ಜನ್ಮಗಳ ನಿಗೂಢ ಚಕ್ರದ ರಹಸ್ಯ’ ಎಂಬುದು ಕೃತಿಯ ಉಪಶೀರ್ಷಿಕೆ. ಹಿಂದೂಗಳಲ್ಲಿ ಕರ್ಮ ಸಿದ್ಧಾಂತ ಹಾಗೂ ಪುನರ್ಜನ್ಮ ಕುರಿತು ಬಹಳಷ್ಟು ನಂಬಿಕೆ ಇದೆ. ಬಹುತೇಕ ವೇಳೆ ಇದು ಮೌಢ್ಯವಾಗಿಯೂ ಜನರ ಬದುಕಿನಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ, ಈ ಪರಿಕಲ್ಪನೆಗಳ ನೈಜತೆ ತಿಳಿದರೆ, ಅದು ಉತ್ತಮ ಜ್ಞಾನವೂ ಹೌದು. ಕರ್ಮ ಇದ್ದರೆ ಎಲ್ಲಿದೆ...ಹೇಗಿದೆ...ಅದರ ಪ್ರಕಾರಗಳೆಷ್ಟು,..ಅದು ಮನುಷ್ಯನ ವರ್ತನೆ, ವಿಚಾರ-ಭಾವಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ... ಪುನರ್ಜನ್ಮ ಇದೆಯೇ..ಇದ್ದರೆ ಮನುಷ್ಯ ಜನ್ಮವೇ ಪುನರಾವರ್ತನೆಯಾಗುತ್ತದೆ ಅಥವಾ ಬೇರೆ ಬೇರೆ ಪ್ರಾಣಿಗಳಲ್ಲಿ ಆತ್ಮ ಪ್ರಕಟವಾಗುತ್ತದೆ..ಪುನರ್ಜನ್ಮಕ್ಕೆ ಕೊನೆ ಎಂಬುದು ಇದೆಯೇ.. ಇದ್ದರೆ ಅದು ಹೇಗಿದೆ... ಯಾವ ರೂಪದಲ್ಲಿ ಅದು ಕೊನೆಗೊಳ್ಳುತ್ತದೆ. ಇಂತಹ ವಿಚಿತ್ರ, ಆದರೆ, ಅನುಭವಕ್ಕೆ ಬರುವ, ಬಹುತೇಕ ವೇಳೆ ಕರ್ಮ ಸಿದ್ಧಾಂತ -ಪುನರ್ಜನ್ಮ ಕಲ್ಪನೆಗಳ ಬಗ್ಗೆಯೇ ಸಾಕಷ್ಟು ಸಂಶಯಗಳು ನಮ್ಮನ್ನು ಕಾಡುತ್ತವೆ. ಇಂತಹ ಸಂಗತಿಗಳ ಬಗ್ಗೆ ವಿವರಗಳಿರುವ ಕೃತಿ ಇದು.

About the Author

ಶೇಷ ನವರತ್ನ
(05 May 1950 - 15 December 2013)

ಶೇಷ ನವರತ್ನ ಅವರು 1950 ರ ಮೇ 5ರಂದು ಧಾರವಾಡದಲ್ಲಿ ಜನಿಸಿದರು. ಎಂ.ಎ. (ಇಂಗ್ಲಿಷ್) ಪದವೀಧರರು. ಸಾಹಿತ್ಯಕ ಮತ್ತು ತತ್ವಶಾಸ್ತ್ರೀಯ ಕೃತಿಗಳನ್ನು ರಚಿಸಿದ್ದಾರೆ. ಚಿಕ್ಕಜಾಜೂರು ಪಿಯು ಕಾಲೇಜು ಪ್ರಾಂಶುಪಾಲರಾಗಿ ನಿವೃತ್ತರು.  ಧರ್ಮಗಳು, ಕರ್ಮ ಸಿದ್ದಾಂತ ಮತ್ತು ಪುನರ್ಜನ್ಮ ಮನಸೋಲ್ಲಾಸ, ನಿರ್ಣಯ ಸಿಂಧು, ಮಹಾಭಾರತದಲ್ಲಿ ಧರ್ಮ, ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ (ಸಾಹಿತ್ಯಕ-ತತ್ವಶಾಸ್ತ್ರೀಯ). ಹರೆಯದ ಹುಚ್ಚು, ಊರ್ಮಿಳಾ, ಮಲನಾಡ ಗಿಣಿ, ಮೀರಾಬಾಯಿ (ಕವನ ಸಂಕಲನ).  ಕಬೀರ್, ಸೂರದಾಸ್ ಮುಂತಾದವರ ಕವಿತೆಗಳ ಅನುವಾದ. ಅವರಿಗೆ ವೇದಾಂತರತ್ನ, ಉಜ್ಜನಿ ಸದ್ಧರ್ಮ ಪೀಠ, ಆರ್ಯ ಸಮಾಜ ಮುಂತಾದ ಗೌರವಗಳು ಸಂದಿವೆ. 2013ರ ಡಿಸೆಂಬರ್ 15ರಂದು ನಿಧನರಾದರು. ...

READ MORE

Related Books