ಕರ್ಮಯೋಗ

Author : ರಂಗನಾಥ ದಿವಾಕರ

Pages 190

₹ 0.00




Year of Publication: 1935
Published by: ಅಧ್ಯಾತ್ಮ ಕಾರ್ಯಾಲಯ
Address: ಧಾರವಾಡ

Synopsys

ರಂಗನಾಥ ದಿವಾಕರರು ಹಿಂಡಲಗಾ ಸೆರೆಮನೆಯಲ್ಲಿರುವಾಗ ಗುಜರಾತಿನ ಕಾಂಗ್ರೆಸ್ ಕಾರ್ಯಕರ್ತರ ಪೈಕಿ ಮಥುರಾದಾಸ್ ಎಂಬುವರು ಉತ್ತಮ ಗೀತಾಭ್ಯಾಸಿಗಳು. ಇವರ ಗೀತಾಭ್ಯಾಸ ಹಾಗೂ ಗಾಂಧೀಜಿ ಅವರ ಅನಾಸಕ್ತಿಯೋಗ- ಈ ಎರಡೂ ವಿಚಾರಗಳ ಹಿನ್ನೆಲೆಯಲ್ಲಿ ಕರ್ಮಯೋಗದ ಬಗ್ಗೆ ಉಪನ್ಯಾಸ ಬರೆಯಬೇಕು ಮತ್ತು ಮೊದಲು ಈ ಕೃತಿಯು ಗುಜರಾತಿನಲ್ಲಿ ಪ್ರಕಟವಾಗಬೇಕು ತದನಂತರ ಅದನ್ನು ಕನ್ನಡಕ್ಕೆ ಅನುವಾದಿಸಬೇಕು ಎಂದು ಇಬ್ಬರಲ್ಲೂ ಒಪ್ಪಂದವಾದ ಪರಿಣಾಮ ಈ ಕೃತಿ ಮೊದಲು ಮಥುರಾದಾಸ್ ರಿಂದ ಗುಜರಾತಿನಲ್ಲಿ (1934) ನಂತರ ರಂಗನಾಥ ದಿವಾಕರರಿಂದ (1935) ಪ್ರಕಟಗೊಂಡಿತ್ತು.

ಕರ್ಮಯೋಗದ ಸಂದೇಶ ತಿಳಿಯಲು ಈ ಕೃತಿ ಅತ್ಯಂತ ಉಪಯುಕ್ತ. ಕರ್ಮಯೋಗ, ಭೌತಿಕ ದೃಷ್ಟಿ, ಸುಖ ಮತ್ತು ದುಃಖ, ಸೃಷ್ಟಿ ಮತ್ತು ಸಮಷ್ಠಿ, ಭಕ್ತಿಯೋಗದ ಲಕ್ಷಣಗಳು ಹೀಗೆ ವಿವಿಧ ವಿಷಯ ವೈವಿಧ್ಯತೆ ಒಳಗೊಂಡ ಅಧ್ಯಾಯಗಳು ಈ ಕೃತಿಯಲ್ಲಿ ಚರ್ಚಿತವಾಗಿವೆ.

About the Author

ರಂಗನಾಥ ದಿವಾಕರ
(30 September 1894 - 15 January 1990)

ಕೇಂದ್ರ ವಾರ್ತಾ ಸಚಿವರೂ, ಜನಪ್ರತಿನಿಧಿಗಳೂ, ಏಕೀಕರಣದ ನೇತಾರರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ರಂಗರಾವ್ ರಾಮಚಂದ್ರ ದಿವಾಕರ್, ಕರ್ನಾಟಕದ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಜೀವನದ ಪ್ರಮುಖರು. ಧಾರವಾಡದಲ್ಲಿ 1894ರ ಸೆಪ್ಟೆಂಬರ್ 30ರಂದು ಜನಿಸಿದ ರಂ.ರಾ. ದಿವಾಕರ, ಧಾರವಾಡ, ಬೆಳಗಾವಿ, ಪುಣೆ, ಹುಬ್ಬಳ್ಳಿ, ಮುಂಬಯಿಗಳಲ್ಲಿ ವ್ಯಾಸಂಗ ಮಾಡಿದರು. ತಂದೆ ರಾಮಚಂದ್ರರಾವ್, ತಾಯಿ ಸೀತಮ್ಮ. ಎಲ್ಎಲ್ ಬಿ ಪದವಿ (1919, ನಂತರ 1920ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು.  ಕರ್ಮವೀರ (1921) ವಾರಪತ್ರಿಕೆ ಪ್ರಾರಂಭಿಸಿ, ಅನಂತರ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಆರಂಭಿಸಿದರು. ಭಾರತದ ಸಂವಿಧಾನ ರಚನೆಯಲ್ಲಿ ಘಟನಾ ಸಮಿತಿಯ ಸದಸ್ಯರಾಗಿದ್ದರು.  1948-52ರ ವರೆಗೆ ಕೇಂದ್ರ ಸರ್ಕಾರದಲ್ಲಿ ವಾರ್ತಾ ಇಲಾಖೆ ಸಚಿವರಾದರು. ...

READ MORE

Related Books