ಕರ್ಣಚೈತ್ರನ ಪರ್ಣಶಾಲೆ

Author : ಜಿ. ಕೃಷ್ಣಪ್ಪ

Pages 152

₹ 200.00




Year of Publication: 2022
Published by: ಶ್ರೀ ಅನ್ನಪೂರ್ಣ ಪಬ್ಲಿಷರ್ಸ್
Address: #133, ಒಂದನೇ ಮಹಡಿ, ಭಾರತಿಪುರ ಭಿಳೆನಕೊಟೆ ಪೋಸ್ಟ್, ಸೊಮಪುರ ಹೊಬಳಿ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮೀಣ ಜಿಲ್ಲೆ-562111

Synopsys

ಕರ್ಣಚೈತ್ರನ ಪರ್ಣಶಾಲೆ ಜಿ. ಕೃಷ್ಣಪ್ಪ ಅವರ ಕೃತಿಯಾಗಿದೆ. `ಕರ್ಣಚೈತ್ರನ ಪರ್ಣಶಾಲೆ’ ಎನ್ನುವ ಹೆಸರಿನಲ್ಲಿ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ವಿಮರ್ಶೆಯನ್ನು 35 ಅಧ್ಯಾಯಗಳನ್ನು ಒಳಗೊಂಡ ಕೃತಿರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ಪೂರ್ವ-ಪಶ್ಚಿಮದ ಮಹಾಕಾವ್ಯಗಳನ್ನೂ ಕಾವ್ಯಮೀಮಾಂಸೆಯನ್ನೂ ಕಾವ್ಯವಿಮರ್ಶೆಯನ್ನೂ ಶ್ರದ್ಧಾಸಕ್ತಿಯಿಂದ ಅಧ್ಯಯನ ಮಾಡಿ, ಚಿಂತನ-ಮAಥನ ಮಾಡಿ ಅರಗಿಸಿಕೊಂಡು ಪರಿಪುಷ್ಟವಾದ ಕುವೆಂಪು ಅವರ ದೈತ್ಯಪ್ರತಿಭೆಯಿಂದ ಹೊಮ್ಮಿದ ದರ್ಶನಮಹಾಕಾವ್ಯವನ್ನು ವಿಮರ್ಶೆಗೆ ಒಳಪಡಿಸಬೇಕಾದರೆ ಕವಿಪ್ರತಿಭೆಯ ಸ್ವರೂಪವನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳುವ ಮಟ್ಟಿಗಿನ ಓದು ಗ್ರಹಿಕೆ ಚಿಂತನೆಗಳು ಬೇಕಾಗುತ್ತವೆ. ಮಹಾಕಾವ್ಯ ಸೃಜನೆ ಕುವೆಂಪು ಅವರಿಗೆ ತಪಸ್ಸಾದಂತೆ, ಆ ಕಾವ್ಯದ ವಿಮರ್ಶೆಯೂ ಒಂದು ತಪಸ್ಸಾಗಬೇಕಾಗುತ್ತದೆ. ಅದು ಹೇಗೆ ಇರಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ `ವಿಮರ್ಶೆಯ ಪೂರ್ವ ಪಶ್ಚಿಮ’ದಲ್ಲಿ ಜಿ.ಎಸ್.ಶಿವರುದ್ರಪ್ಪನವರು ಆಡಿರುವ ಈ ಮಾತುಗಳನ್ನು ಗಮನಿಸುವುದು, ಮನನ ಮಾಡಿಕೊಳ್ಳುವುದು ವಿಮರ್ಶಕರೆನಿಸಿಕೊಳ್ಳುವವರಿಗೆ, ವಿಮರ್ಶಿಸುವ ಉತ್ಸಾಹದಲ್ಲಿ ಇರುವವರಿಗೆ ಬಹಳ ಮುಖ್ಯ ಎಂದು ನನಗನ್ನಿಸುತ್ತದೆ ಎಂದು ಪುಸ್ತಕದ ಲೇಖಕರು ತಿಳಿಸಿದ್ದಾರೆ.

About the Author

ಜಿ. ಕೃಷ್ಣಪ್ಪ

’ಬೇಂದ್ರೆ ಕೃಷ್ಣಪ್ಪ’ ಎಂದೇ ಜನಪ್ರಿಯರಾಗಿರುವ ಡಾ. ಜಿ.ಕೃಷ್ಣಪ್ಪ ಅವರು ಪ್ರಮುಖ ಬೇಂದ್ರ ಸಾಹಿತ್ಯ ಪರಿಚಾರಕರು. ಕೃಷ್ಣಪ್ಪ ಅವರು 1948ರಲ್ಲಿ ಬೆಂಗಳೂರಲ್ಲಿ  ಜನಿಸಿದರು. ತಂದೆ ಹೆಚ್.ಗಂಗಯ್ಯ, ತಾಯಿ ಸಾವಿತ್ರಮ್ಮ. ಜಿ.ಕೃಷ್ಣಪ್ಪ ಅವರು ಬೇರೆ ಕಾವ್ಯದ ಓದಿಗೆ ಹೊಸ ಆಯಾಮ ಪರಿಚಯಿಸಿದವರು. ಬೆಂಗಳೂರಿನ ಎಸ್.ಟಿ. ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ, ವಾಹನ ನಿರೀಕ್ಷಕರಾಗಿ ವೃತ್ತಿಯಾರಂಭಿಸಿದ ಇವರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿವೃತ್ತಿ. ಉದ್ಯೋಗದ ನಡುವೆ ಬಿ.ಎ, ಎಲ್‌ಎಲ್‌ಬಿ, ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರಾಗಿದ್ದಾರೆ. 'ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ : ಒಂದು ಅಧ್ಯಯನ ಕುರಿತು ಪಿಎಚ್ಡಿ ಪದವಿಯನ್ನು ಮಾಡಿದ್ದಾರೆ.ಸಾಹಿತ್ಯದ ಓದು, ಬೇಂದ್ರೆ ಕಾವ್ಯದ ಗುಂಗೇ ಇವರ  ಬರವಣಿಗೆಗೆ ...

READ MORE

Related Books