ಕರ್ನಾಟಕ ಜನಪದ ಶಿಲ್ಪಕಲೆ

Author : ಶಿವಾನಂದ ಎಚ್. ಬಂಟನೂರು

Pages 100




Published by: ಎಸ್.ಎಲ್.ಎನ್. ಪಬ್ಲಿಕೇಷನ್
Address: ನಂ. 3437, 4ನೇ ಮುಖ್ಯ ರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀ ನಗರ, ಬನಶಂಕರಿ, 2ನೇ ಹಂತ, ಬೆಂಗಳೂರು.
Phone: 9972129376

Synopsys

ಉತ್ತರ ಕರ್ನಾಟಕದ ಜನಪದ ಶಿಲ್ಪಕಲೆಯ ಪರಂಪರೆಯ ವಿಸ್ತೃತವಾದ ಅಧ್ಯಯನ  ಪ್ರಬಂಧದಲ್ಲಿದೆ. ಮಣ್ಣು, ಕಲ್ಲು, ಕಟ್ಟಿಗೆ, ಲೋಹ ಮಾಧ್ಯಮಗಳಲ್ಲಿ ವ್ಯಕ್ತಗೊಂಡಿರುವ ಶಿಲ್ಪಕಲೆಯ ವೈವಿಧ್ಯತೆಯನ್ನು ಸಂಶೋಧಕರು ಕೃತಿಯಲ್ಲಿ ಚರ್ಚಿಸಿದ್ದಾರೆ. ಪ್ರತಿಯೊಂದು ಶಿಲ್ಪದ ಮಾಧ್ಯಮ, ರಚನೆ ಆಕಾರ, ವೈಶಿಷ್ಟ್ಯಗಳನ್ನು ವಿವರಿಸುವುದರೊಂದಿಗೆ ಅವುಗಳಿಗಿರುವ ಐತಿಹಾಸಿಕ ಹಿನ್ನೆಲೆ, ಸಾಂಸ್ಕೃತಿಕ ಮಹತ್ವ ಹಾಗೂ ದೈವತ್ವದ ಪರಿಕಲ್ಪನೆಗಳನ್ನು, ಆ ಶಿಲ್ಪದ ಸುತ್ತ ಹೆಣೆದುಕೊಂಡಿರುವ ನಂಬಿಕೆ-ಹಾಡು-ಆಚರನೆಗಳನ್ನು ಲೇಖಕರು ವಿಶಿಷ್ಟ ರೀತಿಯಲ್ಲಿ ಪರಿಶೀಲಿಸಿದ್ದಾರೆ. ಕೃತಿ ಜನಪದ ಶಿಲ್ಪಕಲೆ ಮತ್ತು ಸಂಸ್ಕೃತಿಗಳ ಸಮೀಕ್ಷಾ ವರದಿಯಂತಿದ್ದು, ಅಧ್ಯಾಯನಾಸಕ್ತರಿಗೆ ಉಪಯುಕ್ತ ಗ್ರಂಥ. 

About the Author

ಶಿವಾನಂದ ಎಚ್. ಬಂಟನೂರು

ಬಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಖೈನೂರರಲ್ಲಿ 1967ರಲ್ಲಿ ಜನಿಸಿದ ಶಿವಾನಂದ ಬಂಟನೂರರು ಚಿತ್ರ ಕಲೆಗೆ ಸಂಬಂಧಿಸಿದಂತೆ ಎ.ಎಂ., ಜಿ.ಡಿ (ಆರ್)ಗಳಲ್ಲದೆ ಸ್ನಾತಕೋತ್ತರ ಪದವಿಯನ್ನು ಹಾಗೂ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಸಂಶೋಧನಾ ಅನುದಾನ ಪಡೆದು 2002ರಲ್ಲಿ 'ಕರ್ನಾಟಕ ಜನಪದ ಶಿಲ್ಪಕಲೆ' ಕುರಿತು ಪಿಎಚ್.ಡಿ. ಪದವಿ ಪಡೆದಿದ್ದಾರೆ. ಮೂಲತ ಕಲಾವಿದರಾದ ಬಂಟನೂರ ಅವರು ಬೆಂಗಳೂರಿನ ವೆಂಕಟಪ್ಪ ಕಲಾಶಾಲೆ ಸೇರಿದಂತೆ ಹಲವಾರು ಕಡೆಗಳಲ್ಲಿ ಏಕವ್ಯಕ್ತಿ ಪ್ರದರ್ಶನವನ್ನೂ ಪೂನಾ, ಗೋವ ತಮಿಳುನಾಡು ಸೇರಿದಂತೆ ರಾಜ್ಯದ ಹಲವಾರು ಕಡೆ ಸಮೂಹ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಚಿತ್ರಕಲೆಯ ಸ್ನಾತಕೋತ್ತರ ವ್ಯಾಸಂಗದಲ್ಲಿ ಪ್ರಥಮ ...

READ MORE

Related Books