ಕರ್ನಾಟಕ ಕಲಾವಿದರು

Author : ಅ.ನ.ಕೃ (ಅ.ನ. ಕೃಷ್ಣರಾಯ)

Pages 208

₹ 3.00




Year of Publication: 1946
Published by: ವಿಶ್ವವಾಣಿ ಪ್ರಕಟಣ ಮಂದಿರ
Address: ಅನ್ನಪೂರ್ಣ, ವಿಶ್ವೇಶ್ವರ ಪುರಂ, ಬೆಂಗಳೂರು

Synopsys

ದೇಶವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲು ಕೇವಲ ರಾಜಕೀಯ ಮಾತ್ರ ಮಾನದಂಡವಲ್ಲ; ಆ ದೇಶದ ಸಾಂಸ್ಕೃತಿಕ-ಸಾಮಾಜಿಕ-ಸಾಹಿತ್ಯಕ-ಶೈಕ್ಷಣಿಕ ಹಿನ್ನೆಲೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಲೇಖಕ ಅ.ನ.ಕೃಷ್ಣರಾಯರು 16 ಜನ ಕಲಾವಿದರನ್ನು ಪರಿಚಯಿಸಿದ ಕೃತಿ-ಕರ್ನಾಟಕದ ಕಲಾವಿದರು.

ಒಂದು ದೇಶದ ಸಂಸ್ಕೃತಿಯನ್ನು ರಾಜಕೀಯದ ಕಣ್ಣುಗಳಿಂದ ನೋಡುತ್ತಾ ಬರಲಾಗಿದೆ. ಇದು ಸಂಕುಚಿತ ಮನಸ್ಸಿನ ಲಕ್ಷಣ. ವ್ಯಕ್ತಿ-ಸಮಾಜ-ಜನಾಂಗಳ ಸರ್ವತೋಮುಖ ಅಭಿವೃದ್ಧಿಯನ್ನು ಸಂಸ್ಕೃತಿ ಬಯಸುತ್ತದೆ. ನೈಸರ್ಗಿಕ ಬೆಳೆಯನ್ನು ಪರಂಪರೆಯ ಅನುಸರಣೆಯಿಂದಾಗಲಿ, ಪರದೇಶದ ಅನುಕರಣೆಯಿಂದಾಗಲಿ ತಡೆಗಟ್ಟುವುದು ಪರಮದ್ರೋಹವಾಗುತ್ತದೆ ಎಂದು ಕೃತಿಯ ಪ್ರಸ್ತಾವನೆಯಲ್ಲಿ ಲೇಖಕರು ಸ್ಪಷ್ಟಪಡಿಸಿದ್ದಾರೆ.

ಸಂಗೀತ ರತ್ನರಾದ ಮಲ್ಲಿಕಾರ್ಜುನ ಮನ್ಸೂರು, ಡಿ. ಸುಬ್ಬರಾಮಯ್ಯ., ವೈಣಿಕ ಪ್ರವೀಣ ವೆಂಕಟಗಿರಿಯಪ್ಪ, ಚಿತ್ರಕಾರ ಕಮಡೊಳಿ, ವೀಣೆ ಕೇಶವಮೂರ್ತಿ, ನಾಟಕ ಶಿರೋಮಣಿ ಎ.ವಿ. ವರದಾಚಾರ್ಯ, ಆಸ್ಥಾನ ವಿದ್ವಾನ್ ಎಂ. ರಾಮಾರಾಯರು, ವೀಣೆ ರಾಜಾರಾಯರು, ನಾಟಕ ರತ್ನ ಗುಬ್ಬಿ ವೀರಣ್ಣನವರು, ನಟಶೇಖರ ಮಹಮ್ಮದ್ ಪೀರ್, ಗಾಯನಾಚಾರ್ಯ ರಾಮಕೃಷ್ಣ ಬುವಾ ವಝೆ ಸೇರಿದಂತೆ ಒಟ್ಟು 16 ಜನ ಕಲಾವಿದರ ಸಾಹಿತ್ಯಕ-ಸಂಗೀತ-ಕಲೆಗಳ ಸಾಧನೆಯನ್ನು ಅಕ್ಷರ ರೂಪಕ್ಕೆ ಇಳಿಸಲಾಗಿದೆ.

About the Author

ಅ.ನ.ಕೃ (ಅ.ನ. ಕೃಷ್ಣರಾಯ)
(09 May 1908 - 04 July 1971)

‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...

READ MORE

Related Books