ಕರ್ಣಾಟಕ ಕವಿ ಚರಿತೆ, ಸಂಪುಟ-2

Author : ಆರ್. ನರಸಿಂಹಾಚಾರ್

Pages 680




Year of Publication: 1919
Published by: ರಾ. ನರಸಿಂಹಾಚಾರ್
Address: ಬೆಂಗಳೂರು

Synopsys

15 ರಿಂದ 17ನೇ ಶತಮಾನದವರೆಗೆ ಕರ್ಣಾಟಕ ಕವಿ ಚರಿತೆಯನ್ನು ಕನ್ನಡ ನಾಡು-ನುಡಿಯ ಚಿಂತಕ ಆರ್. ನರಸಿಂಹಾಚಾರ್ಯ ಅವರು ಸಂಕಲಿಸಿದ ಬೃಹತ್ ಕೃತಿ ಇದು. 20 ಪುಟದ ವಿಷಯ ಪರಿವಿಡಿ, 20 ಪುಟದ ಇಂಗ್ಲಿಷ್ ಪ್ರಸ್ತಾವನೆ ಹಾಗೂ 35 ಪುಟದಷ್ಟು ಕನ್ನಡ ಪ್ರಸ್ತಾವನೆಯ ಈ ಕೃತಿಯಲ್ಲಿ ಕನ್ನಡ ನಾಡಿನ ಪ್ರಾಚೀನತೆ, ಕನ್ನಡ ನಾಡಿನ ಮಹಿಮೆ, ಕನ್ನಡಿ ನಾಡಿಗೆ ಪ್ರೋತ್ಸಾಹ, ದಕ್ಷಿಣೋತ್ತರ ಮಾರ್ಗಗಳು, ಕರ್ಣಾಟಕ ಕವಿ ಚರಿತೆಯ ದ್ವಿತೀಯ ಸಂಪುಟದ ಮಹತ್ವ ಇವೆಲ್ಲವನ್ನೂ ಲೇಖಕರು ವಿಸ್ತಾರವಾಗಿ ವಿವರಿಸಿದ್ದಾರೆ. ಕನ್ನಡ ನಾಡು-ನುಡಿಗೆ ಸಂಬಂಧಿಸಿದಂತೆ ಇದೇ ಲೇಖಕರು ಬರೆದ ಕರ್ಣಾಟಕ ಕವಿ ಚರಿತೆಯ ಮೂರು ಪ್ರತ್ಯೇಕ ಸಂಪುಟಗಳು ಶಾಶ್ವತವಾಗಿ ಉಳಿಯುವ ಗ್ರಂಥಗಳು.

About the Author

ಆರ್. ನರಸಿಂಹಾಚಾರ್
(08 April 1860 - 06 December 1936)

ಮದ್ರಾಸ್ ವಿಶ್ವವಿದ್ಯಾಲಯದಿಂದ ಮೊಟ್ಟ ಮೊದಲನೆಯ ಕನ್ನಡ ಎಂ.ಎ. ಪದವಿ ಪಡೆದ ಆರ್. ನರಸಿಂಹಾಚಾರ್ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ‘ಕವಿಚರಿತೆ’ಕಾರ ಎಂದೇ ಚಿರಪರಿಚಿತರು. ಸಂಶೋಧಕ ಮತ್ತು ಶಾಸನ ತಜ್ಞರೂ ಆಗಿದ್ದ ನರಸಿಂಹಾಚಾರ್ ಅವರು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಕರಲ್ಲಿ ಒಬ್ಬರು. ಮಂಡ್ಯದ ಕೊಪ್ಪಲು ಗ್ರಾಮದಲ್ಲಿ 1860ರ ಏಪ್ರಿಲ್ 9ರಂದು ಜನಿಸಿದ ಆರ್. ನರಸಿಂಹಾಚಾರ್ ಅವರ ತಂದೆ ತಿರುನಾರಾಯಣ ಪೆರುಮಾಳ್ ಮತ್ತು ತಾಯಿ ಶಿಂಗಮ್ಮಾಳ್. ಕೂಲಿಮಠದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಮದ್ರಾಸಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದು ಮೆಟ್ರಿಕ್ ಪಾಸಾದರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿ 1882ರಲ್ಲಿ ...

READ MORE

Related Books