ಕರ್ನಾಟಕ ಕೇಸರಿ

Author : ವೀರಣ್ಣ ರಾಜೂರ

Pages 136

₹ 100.00




Year of Publication: 1998
Published by: ಮಂಗಳ ಪ್ರಕಾಶನ
Address: ಧಾರವಾಡ

Synopsys

ಲೇಖಕ ಡಾ. ವೀರಣ್ಣ ರಾಜೂರ ಅವರ ’ ಕರ್ನಾಟಕ ಕೇಸರಿ’ ವೀರರಸ ಪ್ರಧಾನ ಐತಿಹಾಸಿಕ ನಾಟಕವನ್ನು ಒಳಗೊಂಡ ಕೃತಿ. ಕಲಿತನ, ಶುಚಿತ್ವಗಳಿಗೆ ಹೆಸರಾದ ಕಮ್ಮಟದುರ್ಗದ ಕುಮಾರರಾಯನ ಉಜ್ವಲ ಜೀವನಗಾಥೆಯು ನಾಟಕಗಳ ವಸ್ತುವಾಗಿದೆ. ಕತೆಯು ಮೂರು ಅಂಕಗಳಲ್ಲಿ ವಿಸ್ತರಿಸಿಕೊಂಡಿದೆ. ಕುಮಾರರಾಯನ ಜನನ, ವಿದ್ಯಾಭ್ಯಾಸ, ಕಲಿತನ, ಓರಂಗಲ್ಲಿನ ಪ್ತಾಪರುದ್ರನ ಷಡ್ಯಂತ್ರವನ್ನು ಭೇದಿಸಿ ಗೆದ್ದು ಬರುವ ಪ್ರಸಂಗಗಳು ಮೊದಲ ಅಂಕದಲ್ಲಿದ್ದರೆ, ಕುಮಾರರಾಮನ ಕೀರ್ತಿ ವಾರ್ತೆ ಕೇಳಿ ದಿಲ್ಲಿ ಸುಲ್ತಾನನ ಮಗಳು ಅವನನ್ನು ಪ್ರೀತಿಸುವುದು, ಅದು ತನಗೆ ಅಪಮಾನವೆಂದು ತಿಳಿದು ಸುಲ್ತಾನ ಕಮ್ಮಟದುರ್ಗದ ಮೇಲೆ ದಾಳಿ ಮಾಡುವುದು, ಕುಮಾರರಾಮ ಅವನ ಸೈನ್ಯವನ್ನು ಸೋಲಿಸಿ ಓಡುವುದು ಮೊದಲಾದ ಸನ್ನಿವೇಶಗಳು ಎರಡನೆಯ ಅಂಕದಲ್ಲಿ ಜೋಡಣೆಗೊಂಡಿವೆ. ಯುದ್ಧದಲ್ಲಿ ಗೆದ್ದು ಬರುವ ಕುಮಾರರಾಮನನ್ನು ಕಂಪಿಲನ ಕಿರಿಯರಾಣಿ ರತ್ನಾಜಿ ನೋಡಿ ಅವನ ರೂಪಕ್ಕೆ ಮರುಳಾಗುವುದು , ಅವನನ್ನು ಒಲಿಸಿಕೊಳ್ಳಲು ಪ್ರಯತ್ನಿಸುವುದು, ಅದು ಸಾಧ್ಯವಾಗದೇ ಹೋದಾಗ ಅವನ ಮೇಲೆ ಅಪವಾದ ಹೊರಿಸಿ ಮರಣದಂಡನೆಗೆ ಗುರಿಮಾಡುವುದು; ಕುಮಾರರಾಮ ಕೊಲೆಯಾದ ಸುದ್ದಿ ತಿಳಿದು, ದಿಲ್ಲಿ ಸುಲ್ತಾನ ಮತ್ತೆ ಕಮ್ಮಟದುರ್ಗದ ಮೇಲೆ ಮುತ್ತಿಗೆ ಹಾಕುವುದು, ಮಂತ್ರಿ ಬಚ್ಚಿಟ್ಟಿದ ಕುಮಾರರಾಮ ನೆಲಮನೆಯಿಂದ ಹೊರಬಂದು ಸುಲ್ತಾನನ ಸೈನ್ಯವನ್ನು ಸದೆಬಡಿದು ಕಮ್ಮಟದುರ್ಗವನ್ನು ಕಾಪಾಡುವುದು ಈ ನಾಟಕದ ಮುಖ್ಯ ಘಟ್ಟಗಳು’ ಎನ್ನುತ್ತಾರೆ ಲೇಖಕರು.

About the Author

ವೀರಣ್ಣ ರಾಜೂರ
(04 June 1947)

ಸಂಶೋಧಕ, ಸಾಹಿತಿ ವೀರಣ್ಣ ರಾಜೂರ ಅವರು ಜನಿಸಿದ್ದು 1946 ಜೂನ್ 4ರಂದು, ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲೂಕಿನ ಬೆನಕನಾಳದಲ್ಲಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಪೀಠದಲ್ಲಿ ಸಹಾಯಕ ಸಂಶೋಧಕರಾಗಿ ಸೇವೆ ಆರಂಭಿಸಿದರು.  ಇವರ ಪ್ರಮುಖ ಕೃತಿಗಳೆಂದರೆ ವಚನ ಅಧ್ಯಯನ, ಸ್ವರವಚನಗಳು, ವಿಚಾರ ಪತ್ನಿಯರು (ಸಂಶೋಧನಾ ಕೃತಿ), ಅವಳೇ ಗಂಡ, ನಾನೆ ಹೆಂಣ್ತಿ, ಲವ್ ಅಂದ್ರೆ ಪ್ರೇಮ (ನಾಟಕಗಳು), ಹಾಲಭಾವಿ ವೀರಭದ್ರಪ್ಪನವರು, ಪಿ.ಬಿ. ಧುತ್ತರಗಿ-ಜೀವನಚರಿತ್ರೆ. ಸಿದ್ಧಲಿಂಗ ಶತಕ, ವಚನಾಮೃತಸಾರ, ವಚನಶಾಸ್ತ್ರ ಸಾರ, ಶಿವಯೋಗ ಪ್ರದೀಪಿಕೆ, ಭಕ್ತ್ಯಾನಂದ ಸುಧಾರ್ಣವ (ಸಂಪಾದಿತ ...

READ MORE

Related Books