ಕರ್ಣಾಟಕ ಮಹಾಭಾರತ ಶಲ್ಯ ಗದಾ ಪರ್ವ, ಸಂಪುಟ-10

Author : ಎನ್. ಅನಂತ ರಂಗಾಚಾರ್

Pages 210

₹ 1.00




Year of Publication: 1947
Published by: ಆರ್. ಅನಂತ ರಂಗಾಚಾರ್
Address: ಓರಿಯೆಂಟಲ್ ಲೈಬ್ರರಿ ಪಬ್ಲಿಕೇಷನ್ಸ್, ಮೈಸೂರು ವಿಶ್ವವಿದ್ಯಾಲಯ, ಮೈಸೂರು

Synopsys

ಮೈಸೂರು ವಿಶ್ವವಿದ್ಯಾಲಯದ ಓರಿಯೆಂಟಲ್ ಲೈಬ್ರರಿ ಪಬ್ಲಿಕೇಷನ್ಸ್ ಪ್ರಾಚ್ಯಕೋಶಾಗಾರವು ರಚಿಸಿದ ತಜ್ಞರ ಮಂಡಳಿಯ ಪರಿಶೀಲನೆ ಅನ್ವಯ ಕರ್ನಾಟಕದ ಮಹಾಭಾರತದ ವಿವಿಧ ಪರ್ವಗಳ ಸಂಪುಟಗಳನ್ನು ಪ್ರಕಟಿಸಲಾಯಿತು. ಪ್ರಧಾನ ಸಂಪಾದಕರಾಗಿ ಎಂ.ಎಸ್. ಬಸವಲಿಂಗಯ್ಯ ಹಾಗೂ ಸಂಪಾದಕರಾಗಿ ಎನ್. ಅನಂತ ರಂಗಾಚಾರ್ ಇದ್ದು, ಆ ಪೈಕಿ ಪ್ರಸ್ತುತ ಕೃತಿಯು ಕುಮಾರ ವ್ಯಾಸ ವಿರಚಿತ ಕರ್ನಾಟಕ ಮಹಾಭಾರತದ ಶಲ್ಯ ಗದಾ ಪರ್ವ, ಸಂಪುಟ-10' ಆಗಿದೆ.

ಶಲ್ಯನ ಸೇನಾಧಿಪತ್ಯಾಭಿಷೇಕ, ಧರ್ಮರಾಯನು ಶಲ್ಯನನ್ನು ಗೆಲ್ಲುವುದು, ಶಲ್ಯ ವಧೆ, ಧುರ್ಯೋಧನನು ಸೈನ್ಯಾಧಿಪತ್ಯವನ್ನು ವಹಿಸುವುದು, ಶಕುನಿ ಮರಣ, ಕೌರವನು ದ್ವೈಪಾಯನ ಸರೋವರವನ್ನು ಹೊಕ್ಕುವುದು, ಧುರ್ಯೋಧನನ್ನು ಹುಡುಕುತ್ತಾ ಪಾಂಡವರು ಸರೋವರವನ್ನು ಮುತ್ತುವುದು, ಭೀಮ-ಧುರ್ಯೋಧನರ ಸಂಗ್ರಾಮ, ಧುರ್ಯೋಧನರ ಮರಣ, ಅಶ್ವತ್ಥಾಮನ ಪಾಂಡವರ ವ್ಯೂಹವನ್ನು ಕೊಲ್ಲುವುದು, ಅಶ್ವತ್ಥಾಮನ ಶರಕ್ಕೆ ತುತ್ತಾದ ಉತ್ತರೆಯ ಗರ್ಭವನ್ನು ಶ್ರೀಕೃಷ್ಣನು ಕಾಪಾಡುವುದು, ಗಾಂಧಾರಿಯು ಧರ್ಮರಾಜನಿಗೆ ಶಾಪ ಕೊಡುವುದು, ರಂಣರಂಗದಲ್ಲಿ ನೂರು ಮಕ್ಕಳ ಹೆಣಗಳನ್ನು ಕಂಡ ಗಾಂಧಾರಿಯ ಪ್ರಲಾಪ, ಧರ್ಮರಾಜನ ಪಟ್ಟಾಭಿಷೇಕ ಹೀಗೆ ವಿವಿಧ ಅಧ್ಯಾಯಗಳಡಿ ಇಡೀ ಶಲ್ಯ ಹಾಗೂ ಗದಾ ಪರ್ವದ ಸಂಪೂರ್ಣ ವಿವರವನ್ನು ನೀಡಲಾಗಿದೆ.

About the Author

ಎನ್. ಅನಂತ ರಂಗಾಚಾರ್ - 28 October 1997)

ಕ್ರಿ.ಶ. 1904 ಜೂನ್ ತಿಂಗಳಲ್ಲಿ , ಎನ್ . ಅನಂತರಂಗಾಚಾರ್, ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ ಜನಿಸಿದರು. ತಂದೆ ಶ್ರೋತ್ರೀಯ ಬ್ರಾಹ್ಮಣ ನರಸಿಂಹಾಚಾರ್ಯರು. ಆಚಾರ್ಯರೇ ಒಂದೆಡೆ ಹೇಳಿರುವಂತೆ ಇವರೇ ಅವರಿಗೆ ಕಾಯಕ ಮೌಲ್ಯವನ್ನೂ ಕಾಲಪ್ರಜ್ಞೆಯನ್ನು ಕಲ್ಪಿಸಿಕೊಟ್ಟವರು. ನಾಲ್ಕನೇ ವರ್ಷದಿಂದ ಹದಿಮೂರನೇ ವರ್ಷದವರೆಗೆ ಬೆಳಿಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಜೊತೆಯಲ್ಲಿಯೇ ಇರಿಸಿಕೊಂಡು ಆ ಅವಧಿಯಲ್ಲಿ ವೇದ , ಪ್ರಬಂಧ , ಪ್ರಯೋಗ , ಸಂಸ್ಕೃತ  ಕಲಿಸಿದರು .ತಿ. ನರಸೀಪುರದ ಎ.ವಿ. ಸ್ಕೂಲಿನಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ, ನಂತರ, ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದರು .ಮೈಸೂರು ...

READ MORE

Related Books