ಕರ್ಣಾಟಕ ಶಬ್ದಾನುಶಾಸನಂ ಭಾಷ್ಯ ಮಂಜರಿ

Author : ಆರ್. ನರಸಿಂಹಾಚಾರ್

Pages 629




Year of Publication: 1923
Published by: ಆರ್. ನರಸಿಂಹಾಚಾರ್
Address: ಬೆಂಗಳೂರು

Synopsys

ಕನ್ನಡ ನಾಡು-ನುಡಿ ಹಿತ ಚಿಂತಕ ಆರ್. ನರಸಿಂಹಾಚಾರ್ ಅವರ ರಚಿಸಿದ ಕರ್ಣಾಟಕ ಶಬ್ದಾನುಶಾಸನಂ ಭಾಷ್ಯ ಮಂಜರಿ ಕೃತಿಯು ಕನ್ನಡ ವ್ಯಾಕರಣ ವಲಯದಲ್ಲಿ ಮಹತ್ವದ ಗ್ರಂಥ. ಉಪೋದ್ಘಾತ, ವೃತ್ತಿ ವ್ಯಾಖ್ಯಾ ಸಹಿತ ಕರ್ಣಾಟಕ ಶಬ್ದಾನುಶಾಸನ, ಪ್ರಥಮದಿಂದ ಚತುರ್ಥ ಪಾದದವರೆಗೂ ವಿವರಣೆ, ಸೂತ್ರ ಪಾಠ, ಸೂತ್ರ ವರ್ಣಾನುಕ್ರಮಣಿಕಾ, ಕನ್ನಡ ಶಬ್ದಾನುಶಾಸನದ ಸೂತ್ರಗಳಿಗೆ ಸಂವಾದಿಯಾದ ಶಬ್ದಮಣಿ ದರ್ಪಣ, ಕಾವ್ಯಾವಲೋಕ, ಕರ್ಣಾಟಕ ಭಾಷಾ ಭೂಷಣ ಇತ್ಯಾದಿಗಳ ವಿವರಣೆ, ಕನ್ನಡ ಗ್ರಂಥಗಳಿಂದ ಉದಾಹೃತ ಪದ್ಯಗಳು ಹೀಗೆ ವ್ಯಾಕರಣದ ಸಮಗ್ರ ಕೋನಗಳಿಂದ ಪರಿಶೀಲಿಸಿದ ಮಹತ್ವದ ಗ್ರಂಥವಿದು.

About the Author

ಆರ್. ನರಸಿಂಹಾಚಾರ್
(08 April 1860 - 06 December 1936)

ಮದ್ರಾಸ್ ವಿಶ್ವವಿದ್ಯಾಲಯದಿಂದ ಮೊಟ್ಟ ಮೊದಲನೆಯ ಕನ್ನಡ ಎಂ.ಎ. ಪದವಿ ಪಡೆದ ಆರ್. ನರಸಿಂಹಾಚಾರ್ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ‘ಕವಿಚರಿತೆ’ಕಾರ ಎಂದೇ ಚಿರಪರಿಚಿತರು. ಸಂಶೋಧಕ ಮತ್ತು ಶಾಸನ ತಜ್ಞರೂ ಆಗಿದ್ದ ನರಸಿಂಹಾಚಾರ್ ಅವರು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಕರಲ್ಲಿ ಒಬ್ಬರು. ಮಂಡ್ಯದ ಕೊಪ್ಪಲು ಗ್ರಾಮದಲ್ಲಿ 1860ರ ಏಪ್ರಿಲ್ 9ರಂದು ಜನಿಸಿದ ಆರ್. ನರಸಿಂಹಾಚಾರ್ ಅವರ ತಂದೆ ತಿರುನಾರಾಯಣ ಪೆರುಮಾಳ್ ಮತ್ತು ತಾಯಿ ಶಿಂಗಮ್ಮಾಳ್. ಕೂಲಿಮಠದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಮದ್ರಾಸಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದು ಮೆಟ್ರಿಕ್ ಪಾಸಾದರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿ 1882ರಲ್ಲಿ ...

READ MORE

Related Books