ಕರ್ನಾಟಕದ ಹಿತಚಿಂತನೆ

Author : ಅ.ನ.ಕೃ (ಅ.ನ. ಕೃಷ್ಣರಾಯ)

Pages 72

₹ 40.00




Year of Publication: 2006
Published by: ಸಾಗರ ಪ್ರಕಾಶನ
Address: #1679, 10ನೇ ಮುಖ್ಯರಸ್ತೆ, 5ನೇ A-ಕ್ರಾಸ್, ಬಿಎಸ್ ಕೆ 1ನೇ ಹಂತ, 2ನೇ ಬ್ಲಾಕ್, ಬೆಂಗಳೂರು-560050
Phone: 9448494632

Synopsys

ಹೆಸರೇ ಸೂಚಿಸುವಂತೆ ’ಕರ್ನಾಟಕದ ಹಿತಚಿಂತನೆ’ ಸುಮಾತರು 15 ಪ್ರಬಂಧಗಳ ಮೂಲಕ ಕರ್ನಾಟಕ ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳ ಪೈಕಿ ಇಲ್ಲಿಯವು ತುಂಬಾ ಗಂಭೀರ ಎಂಬ ಚಿಂತನಾ ಪ್ದುರೇರಕ ಬರೆಹಗಳು ಇಲ್ಲಿವೆ. ಜೊತೆಗೆ ಇಲ್ಲಿಯ ಸಾಹಿತ್ಯ-ಕಲೆ-ಚಿತ್ರಕಲೆ, ಸಂಗೀತ ಬಗ್ಗೆಯೂ ಅಭಿಮಾನಪಡುವಂತೆ ವಿವರಿಸಲಾಗಿದೆ. ಕನ್ನಡ ನಾಡಿನ ಮೇಲೆ ಆಂಧ್ರದವರ ದಾಳಿ ಕುರಿತು ಮೂರು ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ಕರ್ನಾಟಕಕ್ಕೆ ದುಡಿವ ನಾಯಕರು, ಕರ್ನಾಟಕ ಪ್ರಾಂತ್ಯ ನಿಯೋಜನೆ ಹೀಗೆ 15 ಪ್ರಬಂಧಗಳ ಸಂಗ್ರಹವಿದು. ಈ ಕೃತಿಯು 1947ರಲ್ಲಿ ಮೊದಲು ಪ್ರಕಟಗೊಂಡಿತ್ತು.

About the Author

ಅ.ನ.ಕೃ (ಅ.ನ. ಕೃಷ್ಣರಾಯ)
(09 May 1908 - 04 July 1971)

‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...

READ MORE

Related Books