ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ ಪ್ರಭಾವ ಮತ್ತು ಪರಿಣಾಮಗಳು

Author : ರಶ್ಮಿಎಸ್

Pages 528

₹ 500.00




Year of Publication: 2018
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

‘ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಪ್ರಭಾವ ಮತ್ತು ಪರಿಣಾಮಗಳು’ ಎನ್ನುವ ರಶ್ಮಿ ಎಸ್. ಅವರ ಡಾಕ್ಟರೇಟ್ ಮಹಾ ಪ್ರಬಂಧವನ್ನು ಕೃತಿಯನ್ನಾಗಿಸಲಾಗಿದೆ.

ಕರ್ನಾಟಕದ 1970 ರ ದಶಕದ ರಾಜಕಾರಣವನ್ನು ಸಾಂಸ್ಕೃತಿಕ ಲೋಕದ ನೆಲೆಗಳನ್ನು ಅರ್ಥ ಮಾಡಿಕೊಳ್ಳಲು ಈ ಕೃತಿ ಪೂರಕವಾಗಿದೆ.  ಆ ಕಾಲಘಟ್ಟದ ಅನೇಕ ರಾಜಕೀಯ ಪಲ್ಲಟ, ಆಯಾಮಗಳನ್ನು ಚರ್ಚಿಸಲು ಪ್ರಯತ್ನಿಸಿರುವ ಕೃತಿ ಎನ್ನಬಹುದು.

1970-80 ರ ದಶಕದಲ್ಲಿ ಉಂಟಾದ ಪ್ರಮುಖ ಆರ್ಥಿಕ ಮತ್ತು ಸಾಮಾಜಿಕ ಪಲ್ಲಟಗಳ ವಿಸ್ತೃತ ಅಧ್ಯಯನವನ್ನು , ವಿವಿಧ ವಿಶ್ಲೇಷಣೆಗಳನ್ನು ಇಲ್ಲಿ ಚರ್ಚಿಸಿ ಅಧ್ಯಯನ ನಡೆಸಲಾಗಿದೆ.  

ಅನೇಕ ಸಾಹಿತ್ಯ ಕೃತಿಗಳು, ಸರ್ಕಾರಿ ವರದಿಗಳು, ಪತ್ರಿಕಾ ಮಾಧ್ಯಮದಲ್ಲಿ ವ್ಯಕ್ತವಾಗಿದ್ದ ವೈವಿಧ್ಯಮಯ ಚರ್ಚೆಗಳು ಹಾಗೂ ಅಭಿಪ್ರಾಯಗಳು, ಸಂದರ್ಶನಗಳು, ಪ್ರದರ್ಶನ ಕಲೆಗಳ ಮೂಲಕ ವ್ಯಕ್ತವಾದ ಮಾಹಿತಿಯನ್ನು ಸಂಶೋಧನೆ  ನಡೆಸಿ ಈ ಕೃತಿಯ ಮೂಲಕ ಹೊರತಂದಿದ್ದಾರೆ.

About the Author

ರಶ್ಮಿಎಸ್

ಲೇಖಕಿ ಡಾ. ರಶ್ಮಿ ಎಸ್: ಮೂಲತಃ ಮೈಸೂರು ಸಮೀಪದ ಮೂಗೂರಿನವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ, ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಹಾಗೂ ಹಿಂದಿ ರತ್ನ, ಎಪಿಗ್ರಫಿಯಲ್ಲಿ ಡಿಪ್ಲೊಮಾ ಪದವೀಧರರು.  ಕೃತಿಗಳು: ಗೋಪಾಲಕೃಷ್ಣ ಗೋಖಲೆ (2001) ತುರ್ತುಪರಿಸ್ಥಿತಿ: ಪ್ರಭಾವ ಮತ್ತು ಪರಿಣಾಮಗಳು (2008). 15ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.  ...

READ MORE

Related Books