ಕರ್ನಾಟಕೇತರ ಶರಣ ಶರಣೆಯರು

Author : ರಘುಶಂಖ ಭಾತಂಬ್ರಾ

Pages 88

₹ 5.00




Year of Publication: 2005
Published by: ಗುಲ್ಬರ್ಗ ವಿಶ್ವವಿದ್ಯಾಲಯ

Synopsys

ಶರಣ ಚಳವಳಿ ಕರ್ನಾಟಕದಾಚೆಗೂ ಬೀರಿದ ಪ್ರಭಾವ ಅಪಾರ. ಅದು ನಾಡಿನ ಹೊರಗೆ ಶರಣ- ಶರಣೆಯರನ್ನು ಹುಟ್ಟುಹಾಕಿದ ರೀತಿ ರೋಮಾಂಚನ ಮೂಡಿಸುವಂತಹುದು. 

ಅಫ್ಘಾನಿಸ್ಥಾನದ ಮರುಳ ಶಂಕರದೇವ, ಜಮ್ಮು ಕಾಶ್ಮೀರದ ಮೋಳಿಗೆ ಮಹಾದೇವ, ಭೋಪಾಲದ ಮಹಾದೇವಮ್ಮ-ಬೊಂತಾದೇವಿ, ಮಧ್ಯಪ್ರದೇಶದ ಡೋಹರ ಕಕ್ಕಯ್ಯ, ಉತ್ತರಪ್ರದೇಶದ ಶಿವಲೆಂಕ ಮಂಚಣ್ಣ, ಗುಜರಾತಿನ ಆದಯ್ಯ, ಒಡಿಶಾದ ನನ್ನಯ್ಯ-ಸುಜ್ಞಾನಿದೇವ, ಮಹಾರಾಷ್ಟ್ರದ ಸಿದ್ಧರಾಮೇಶ್ವರ, ಅಮುಗಿದೇವಯ್ಯ-ರಾಯಮ್ಮ ದಂಪತಿಗಳು; ಗಜೇಶ ಮಸಣಯ್ಯ ದಂಪತಿ ಹಾಗೂ ಉರಿಲಿಂಗದೇವ-ಉರಿಲಿಂಗಪೆದ್ದಿ-ಕಾಳವ್ವೆ, ಆಂಧ್ರಪ್ರದೇಶದ ಕಿನ್ನರಿ ಬ್ರಹ್ಮಯ್ಯ-ತೆಲುಗೇಶ ಮಸಣಯ್ಯ-ಮೈದುನ ರಾಮಯ್ಯ-ಹಡಪದ ರೇಚಯ್ಯ, ಕೇರಳದ  ಗೊಗ್ಗಯ್ಯ, ತಮಿಳುನಾಡಿನ ಮಾದರ ಚೆನ್ನಯ್ಯ-ಮೆರೆಮಿಂಡಯ್ಯ-ತಂಗಟೂರ ಮಾರಯ್ಯ ಹೀಗೆ ಪ್ರಾದೇಶಿಕ ಭಿನ್ನತೆಯಾಚೆಗೆ ಜಾತ್ಯತೀತತೆ, ಭ್ರಾತೃತ್ವವನ್ನು ಸಾರಿದವರ ವಿವರಗಳು ಕಿರುಹೊತ್ತಿಗೆಯಲ್ಲಿವೆ. 

ಶರಣ ಚಳವಳಿಯ ’ವಿಶ್ವರೂಪ’ವನ್ನು ಅರಿಯಲು ಯತ್ನಿಸುವವರಿಗೆ ಸಂಗ್ರಹಯೋಗ್ಯ ಕೃತಿ.

About the Author

ರಘುಶಂಖ ಭಾತಂಬ್ರಾ
(01 January 1970)

“ರಘುಶಂಖ” ಕಾವ್ಯನಾಮದಿಂದ ಪರಿಚಿತರಾಗಿರುವ ಡಾ. ರಘುನಾಥ  ಖರಾಬೆಯವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದವರು. ಶ್ರೀಮತಿ ಗುರಮ್ಮ ಶ್ರೀ ಶಂಕರೆಪ್ಪನವರ ಮಗನಾಗಿ 01-01-1970ರಲ್ಲಿ ಜನಿಸಿದರು. ಎಂ.ಎ; ಎಂ.ಪಿಎಲ್;  ಪಿಎಚ್.ಡಿ. ಪದವಿಧರರು. 1996ರಲ್ಲಿ ಗುಲಬರ್ಗಾ ಶ್ರೀ ಶರಣಬಸವೇಶ್ವರ ವಾಣಿಜ್ಯ ಕಾಲೇಜು; ಎಸ್.ಎಸ್. ಖೂಬಾ ಬಸವೇಶ್ವರ ಪದವಿ ಕಾಲೇಜು ಬಸವಕಲ್ಯಾಣದಲ್ಲಿ ಕನ್ನಡ ಉಪನ್ಯಾಸಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರ್ಮಾತಾಂಡಾದಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಶರಣಬಸವಪ್ಪ ಅವರ ಜೀವನ ಸಾಧನೆ (ಎಂ.ಪಿಎಲ್.), ವಚನಕಾರರ ವೃತ್ತಿ ಮೌಲ್ಯಗಳು ಒಂದು ಅಧ್ಯಯನ ...

READ MORE

Related Books