ಕರುಳು ಕಟ್ಟಿದ ಬರಹ

Author : ಬರಗೂರು ರಾಮಚಂದ್ರಪ್ಪ

Pages 308

₹ 266.00




Year of Publication: 2019
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 080-26617100 / 2667755

Synopsys

ಕರುಳು ಕಟ್ಟಿದ ಬರಹ- ಬಂಡಾಯ ಸಾಹಿತ್ಯದ ಪ್ರಮುಖ ಲೇಖಕರಾದ ಬರಗೂರು ರಾಮಚಂದ್ರಪ್ಪನವರ ಕೃತಿ. ಬರಗೂರು ರಾಮಚಂದ್ರಪ್ಪನವರ ಅಂಕಣಬರಹಗಳ ಸಂಕಲನ 'ಕರುಳು ಕಟ್ಟಿದ ಬರಹ'. ನನ್ನ ಬರಹಗಳು ಜನರಿಗೆ ಹೆಚ್ಚು ತಲುಪಬೇಕೆಂದು ಬರೆಯುತ್ತೇನೆಯೆ ಹೊರತು ಆತ್ಮತೃಪ್ತಿಗಾಗಿ ಅಲ್ಲ ಎನ್ನುವ ಬರಗೂರು, ನನ್ನ ಅಂಕಣಗಳೇ ನನ್ನ ಪಾಲಿನ ಮಹಾಕಾವ್ಯ ಎನ್ನುತ್ತಾರೆ. ಜನತೆ ನನ್ನ ಬರಹದ ವಸ್ತು ವಿಷಯಗಳ ಕುರಿತು ಚರ್ಚೆ ಹಾಗೂ ಸಂವಾದ ನಡೆಸಬೇಕೆಂದು ಬಯಸುತ್ತೇನೆ. ಹೀಗಾಗಿ ಅಂಕಬರಹಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತೇನೆಂದು ಹೇಳುವ ರಾಮಚಂದ್ರಪ್ಪನವರು ಈ ಕೃತಿಯಲ್ಲಿ ಅವರ ಬಹುಮುಖ್ಯ ಅಂಕಣ ಬರಹಗಳನ್ನು ಒಂದೆಡೆ ನೀಡಿದ್ದಾರೆ. 

 

About the Author

ಬರಗೂರು ರಾಮಚಂದ್ರಪ್ಪ
(18 October 1946)

ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕತೆ-ಕಾದಂಬರಿ-ಕಾವ್ಯಗಳಂತಹ ಸೃಜನಶೀಲ ಕೃತಿಗಳ ಜೊತೆಗೆ ಚಿಂತನ ಪರ ಬರಹ, ವಿಮರ್ಶೆಗಳ ಮೂಲಕ ಹೆಸರಾದವರು. ರಾಮಚಂದ್ರಪ್ಪ ಅವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ, ನಿರ್ದೇಶಕ ಆಗಿದ್ದರು. ಸಾಹಿತ್ಯದಷ್ಟೇ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನಿಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ವಿಭಿನ್ನ ಹಾದಿ ಹಿಡಿದವರು. ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ...

READ MORE

Related Books