ಕರುಣಾಳು ಬಾ ಬೆಳಕೆ

Author : ಗುರುರಾಜ ಕರಜಗಿ

Pages 214

₹ 125.00




Year of Publication: 2018
Published by: ವ್ಯಾಸ ಪ್ರಕಾಶನ
Address: #480, 6ನೇ ಮುಖ್ಯ ರಸ್ತೆ, ಎಚ್.ಎಂ.ಟಿ ಕಾಲೋನಿ, ಬಸ್ ಡಿಪೋ ಎದುರಿಗೆ. ಆರ್.ಟಿ ನಗರ, ಬೆಂಗಳೂರು- 560 032
Phone: 080- 41697855

Synopsys

ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರು ಪ್ರಜಾವಾಣಿ ಪತ್ರಿಕೆಗೆ ಬರೆದ ಅಂಕಣಗಳ ಬರಹಗಳ ಸಂಗ್ರಹದ ಸರಣಿ ಭಾಗ-12 -ಕರುಣಾಳು ಬಾ ಬೆಳಕೆ. ಪುಟ್ಟಪುಟ್ಟ ಘಟನೆ, ಸನ್ನಿವೇಶ, ಪಾತ್ರಗಳ ಮೂಲಕ ಮಹತ್ತರ ಸಂದೇಶ ನೀಡುವ ಇಲ್ಲಿಯ ಬರಹಗಳು ಓದುಗರ ಮನದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತವೆ. ನಾವು ಪ್ರತಿದಿನ ವ್ಯವಹರಿಸುತ್ತಿರುವ ಮತ್ತು ಅನುಭವಿಸುತ್ತಿರುವ ವಿಷಯಗಳೇ ಈ ಲೇಖನ ಮಾಲೆಯ ಜೀವಳವಾಗಿದೆ. ಇಂಥ ಲೇಖನಗಳು ಜನಾಕರ್ಷಣೆ ಪಡೆಯುತ್ತಿದ್ದು, ಅಮೂಲ್ಯವಾದ ಗ್ರಂಥಗಳನ್ನು , ದೀರ್ಘ ಲೇಖನಗಳನ್ನೂ ಓದಲೂ ಬಿಡುವಿಲ್ಲದ ಓದುಗರಿಗೆ ಇದೊಂದು ಜ್ಞಾನದ ಹಸಿವನ್ನು ನೀಗಿಸಲು ಕಾರಣವಾಗುತ್ತಿದೆ. 2017ರಲ್ಲಿ ಮೊದಲ ಮುದ್ರಣ ಕಂಡಿದ್ದ ಈ ಕೃತಿ, 2018ರ ಮಾರ್ಚ್ ನಲ್ಲಿ ಮರು ಮುದ್ರಣ ಕಂಡಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಕೃತಿಗೆ ಮುನ್ನುಡಿ ಬರೆದಿದ್ದಾರೆ.

About the Author

ಗುರುರಾಜ ಕರಜಗಿ
(24 May 1952)

ಡಾ.ಗುರುರಾಜ ಕರ್ಜಗಿಯವರು, ಗುರುರಾಜರು ಜನಿಸಿದ್ದು ೨೪.೦೫.೧೯೫೨ ರಲ್ಲಿ. ಶಿಕ್ಷಣ ತಜ್ಞರು. ಮೂರೂ ದಶಕಗಲಿಗಿಂತಲೂ ಹೆಚ್ಚುಕಾಲ ಉನ್ನತ ಮಟ್ಟದ ವಿದ್ಯಾಸಂಸ್ಥೆ ಕಟ್ಟಿ, ಬೆಳೆಸಿ, ಪ್ರಾಧ್ಯಾಪಕರಾಗಿ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ಜಲವಾಗಿಸಿದವರು. ವಿಶ್ವದಾದ್ಯಂತ ಶಿಷ್ಯ ಪರಂಪರೆಯನ್ನ್ನು ಹೊಂದಿರುವ ಇವರು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟನ್ನು ಪಡೆದುಕೊಂಡಿದ್ದಾರೆ. ೨೨ಕ್ಕೂಹೆಚ್ಚು ಸಂಶೋಧನಾ ಲೇಖನಗಳನು ದೇಶ ವಿದೇಶಗಳ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಸೃಜನ ಶೀಲತೆ,ಸಂವಹನಕಲೆ, ಮುಂತಾದದುಗಳಲಿ ಆಸಕ್ತಿ ಹೊಂದಿರುವ ಡಾ.ಕರಜಗಿಯವರು ತಮ್ಮ ಧನಾತ್ಮಕ ಚಿಂತನೆಗಳು, ಕಾರ್ಯಕ್ಷಮತೆ ಹಾಗೂ ಮಾನವೀಯ ಮೌಲ್ಯಗಳಿಗಾಗಿ ಚಿರಪರಿಚಿತರು ಇವರ ಉಪನ್ಯಾಸ ಹಾಗು ಕಾರ್ಯಾಗಾರಗಳಿಗೆ, ಭಾರತ ಮತ್ತು ವಿದೇಶಗಳಲ್ಲೂ ಹೆಚ್ಛು ಪರಿಚಿತರು. ಎಪ್ಪತ್ತಕ್ಕೂ ಹೆಚ್ಚು ...

READ MORE

Related Books