ಕಾರ್ಯದಕ್ಷತೆಯ ವರ್ಧನೆಗಾಗಿ ಶಿವಸೂತ್ರಗಳು

Author : ಸ್ವಾಮಿ ಸುಖಬೋಧಾನಂದ

Pages 200

₹ 180.00




Year of Publication: 2009
Published by: ಪ್ರಸನ್ನ ಟ್ರಸ್ಟ್
Address: ಬೆಂಗಳೂರು

Synopsys

ಕಾರ್ಯದಕ್ಷತೆಯ ವರ್ಧನೆಗಾಗಿ ಶಿವಸೂತ್ರಗಳು-ಈ ಕೃತಿಯನ್ನು ಅಧ್ಯಾತ್ಮಿಕ ಗುರು ಖ್ಯಾತಿಯ ಸ್ವಾಮಿ ಸುಖಬೋಧಾನಂದ ಅವರು ರಚಿಸಿದ್ದು, ಶಿವಸೂತ್ರಗಳ ಮಹತ್ವವವನ್ನು ತಿಳಿ ಹೇಳಿದ್ದಾರೆ. ಮಂತ್ರಗಳು -ಸೂತ್ರಗಳು ಅಂದರೆ ಸಾಮಾನ್ಯ ಪದಗಳಿಗಿಂತ ಭಿನ್ನ. ಶಕ್ತಿ ಹಾಗೂ ಅವು ಹೊರಡಿಸುವ ಸಾಮರ್ಥ್ಯದಲ್ಲೂ ಸೂತ್ರಗಳು-ಮಂತ್ರಗಳೂ ಭಿನ್ನ. ಸಾಮಾನ್ಯ ಕಬ್ಬಿಣಕ್ಕೆ ಹೇಗೆ ಆಯಸ್ಕಾಂತೀಯ ಗುಣಗಳನ್ನು ತುಂಬಲಾಗುತ್ದೋ ಹಾಗೆ ಸಾಮಾನ್ಯ ಶಬ್ದಗಳಿಗೂ ಶಕ್ತಿ-ಸಾಮರ್ಥ್ಯದ ಸಂಸ್ಕಾರ ನೀಡಲಾಗಿದ್ದೇ ಮಂತ್ರಗಳು-ಸೂತ್ರಗಳು-ಶ್ಲೋಕಗಳು. ಒಬ್ಬ ವ್ಯಕ್ತಿಯ ಅಭಿವೃದ್ಧಿಯಲ್ಲಿ ಈ ಶಿವ ಸೂತ್ರಗಳು ತಮ್ಮ ಪ್ರಭಾವ ಹೇಗೆ ಬೀರುತ್ತವೆ. ಕಾರ್ಯದಕ್ಷತೆಯಲ್ಲಿ ಇವುಗಳ ಮಹತ್ವವೇನು ಇತ್ಯಾದಿ ಕುರಿತು ಸಲಹೆ ರೂಪದಲ್ಲಿ ನೀಡಿದ ಸಂದೇಶದ ಕೃತಿ ಇದು.

About the Author

ಸ್ವಾಮಿ ಸುಖಬೋಧಾನಂದ

ಸ್ವಾಮಿ ಸುಖಬೋಧಾನಂದ ಅವರು ಭಾರತೀಯ ಧಾರ್ಮಿಕ ಪರಂಪರೆಯ ಜ್ಞಾನವನ್ನು ಜನಸಾಮಾನ್ಯರಿಗೆ ನೀಡುತ್ತಿದ್ದು, ಇವರ ಈ ಕಳಕಳಿಗಾಗಿ 'ಎಸ್ಸೆಲ್‌ ಕರ್ನಾಟಕ ಅತ್ಯುತ್ತಮ ಸಮಾಜಸೇವಾ ಪ್ರಶಸ್ತಿ ಲಭಿಸಿದೆ. ಪಸನ್ನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಖ್ಯಾತ ಧಾರ್ಮಿಕ ಗುರುಗಳು. "ಮನಸ್ಸೇ,ರಿಲ್ಯಾಕ್ಸ್ ಪ್ಲೀಸ್’ ಶೀರ್ಷಿಕೆಯ ಇವರ ಪುಸ್ತಕವು ಹಾಗೂ ಶಿವ ಖೇರಾ ಅವರ ಪುಸ್ತಕ ‘ಯು ಕೆನ್ ವಿನ್ ’ ಕನ್ನಡೀಕರಿಸಿದ್ದು, ತೆಲುಗು, ತಮಿಳು ಸೇರಿದಂತೆ ಭಾರತೀಯ ಹಲವು ಭಾಷೆಗಳಲ್ಲಿ ಅನುವಾದಗೊಂಡಿದೆ. ...

READ MORE

Related Books