ಕಥಾ ಸಾಗರಿ

Author : ನಾಗವೇಣಿ ಹೆಗಡೆ

Pages 96




Year of Publication: 2022
Published by: ವೀರಲೋಕ ಬುಕ್ಸ್
Address: ಬೆಂಗಳೂರು

Synopsys

ನಾಗವೇಣಿ ವೆಂ.ಹೆಗಡೆ, ಹೆಗ್ಗರ್ಸಿಮನೆ ಅವರು ಬರೆದ ಐದನೇ ಕೃತಿ ಈ 'ಕಥಾಸಾಗರಿ'. ಇದು ಚಿಣ್ಣರ ಐಸಿರಿ! . ಕನ್ನಡ ಸಾರಸ್ವತ ಲೋಕದಲ್ಲಿ ಪ್ರಸ್ತುತ ಮಕ್ಕಳ ಸಾಹಿತ್ಯವು ಅಬಾಲವೃದ್ಧರಿಗೆ ಅಗತ್ಯವಾಗಿ ಬೇಕಿದೆ. ನೈತಿಕ ಮೌಲ್ಯಗಳ ಅರಿವಿಗೆ ಮಕ್ಕಳಿಗೂ ಹಾಗೂ ಪಾಲಕರಿಗೂ ಮಕ್ಕಳ ಕಥೆ,ಕವನ,ಕಾದಂಬರಿ, ನಾಟಕ ಹೀಗೆ ಎಲ್ಲಾ ಪ್ರಕಾರದ ಶಿಶು ಸಾಹಿತ್ಯವು ಸನ್ಮಾರ್ಗದಲ್ಲಿ ನಡೆಯಲು ಕಲಿಸುತ್ತದೆ. ನಾವು ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಈ ಮಕ್ಕಳ ಕಥೆಗಳನ್ನು ಓದುತ್ತ ಬೆಳೆದಿದ್ದೇವೆ. ಚಂದಮಾಮ, ಬಾಲಮಂಗಳ, ತುಂತುರುಗಳಂತಹ ಮಕ್ಕಳ ಪತ್ರಿಕೆಗಳ ಕಥೆಗಳಿಂದ ಸಾಕಷ್ಟು ಪ್ರಭಾವಿತರಾಗಿದ್ದೇವೆ. "ಈಗ ಆಧುನಿಕ ಯುಗದ ಮಕ್ಕಳಿಗೆ ಉತ್ತಮ ಕಥಾ ಪುಸ್ತಕಗಳು ಸಿಗುತ್ತಿಲ್ಲ, ಮಕ್ಕಳ ಸಾಹಿತಿಗಳ ಸಂಖ್ಯೆ ತಗ್ಗಿದೆ. ಮಕ್ಕಳ ಮನಸ್ಥಿತಿ ಅರಿತು ಅವರನ್ನು ತಿದ್ದುವ ಹಾಗೂ ಮುನ್ನಡೆಸಬಹುದಾದ ಕಥೆ ಹೆಣೆಯುವ ಕೆಲಸ ಹೆಚ್ಚಾಗುತ್ತಿಲ್ಲ..." ಎಂದು ದೂಷಿಸುವವರ ಕೊರಗು ನಿವಾರಿಸಲೆಂದೇ ಶ್ರೀಮತಿ ನಾಗವೇಣಿ ಹೆಗಡೆಯವರು 'ಕಥಾ ಸಾಗರಿ' ಕೃತಿಯ ಮೂಲಕ ಉತ್ತಮ ಕಥೆಗಳನ್ನು ಮಕ್ಕಳ ಲೋಕಕ್ಕೆ ಅರ್ಪಿಸಿದ್ದಾರೆ.

About the Author

ನಾಗವೇಣಿ ಹೆಗಡೆ

ಕವಯತ್ರಿ ನಾಗವೇಣಿ ಹೆಗಡೆ ಅವರು ಮೂಲತಃ ಶಿರಸಿಯ ಹೆಗ್ಗರ್ಸಿಮನೆ ಗ್ರಾಮದವರು. ಜನಿಸಿದ್ದು ಶಿರಸಿಯ ಬೊಮ್ಮನಹಳ್ಳಿಯಲ್ಲಿ. ತಂದೆ ಕಮಲಾಕರ, ತಾಯಿ ಸುನಂದಾ. ಗೃಹಿಣಿಯ ಹೊಣೆಗಾರಿಕೆ ಮಧ್ಯೆಯೂ ಫ್ಯಾಷನ್ ಡಿಸೈನ್ ಸೇರಿದಂತೆ ಸಾಹಿತ್ಯದಲ್ಲೂ ವಿಶೇಷ ಆಸಕ್ತರು. ಮೊದಲಿನಿಂದಲೂ ಕರಕೌಶಲಗಳಲ್ಲಿಆಸಕ್ತರು. ಮಾತ್ರವಲ್ಲ; ಭರ್ಚಿಎಸೆತ, ರೀಲೆ, ವಾಲಿಬಾಲ್ , ಕಬ್ಬಡ್ಡಿಗಳಲ್ಲೂ ಬಹುಮಾನ ವಿಜೇತರು. ನಾಡಿನ ಹಲವಾರು ಪತ್ರಿಕೆಗಳಲ್ಲಿಇವರ ಕಥೆ-ಕವನಗಳು  ಪ್ರಕಟಗೊಳ್ಳುತ್ತಿವೆ. `ಕಣ್ಣು'  ಪತ್ರಿಕೆಯ ಶಿರಸಿ ಉಪಸಂಪಾದಕಿ ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.  ಕೃತಿಗಳು: ಕಾವ್ಯಮಂಜರಿ (ಕವನ ಸಂಕಲನ-2018), ಅಗ್ನಿದಿವ್ಯ (ಕವನ ಸಂಕಲನ( 2021), ಒಲವ ಹಂಚುವ ಮುದುಕಿ(ಮಕ್ಕಳ ಕಾದಂಬರಿ-2021, ವಿನಯವಾಣಿ ...

READ MORE

Related Books