ಕಥಾಸ್ವರೂಪ

Author : ಆನಂದ ಋಗ್ವೇದಿ

Pages 324

₹ 220.00




Year of Publication: 2011
Published by: ರೂಪ ಪ್ರಕಾಶನ
Address: # 2406, 2407/K-1, 1ನೇ ಅಡ್ಡರಸ್ತೆ, ಹೊಸಬಂಡಿಕೇರಿ, ಮೈಸೂರು-570004,
Phone: 9342274331

Synopsys

ಲೇಖಕ ಆನಂದ ಋಗ್ವೇದಿ ಅವರ ಸಂಶೋಧನಾ ಗ್ರಂಥ-ಕಥಾ ಸ್ವರೂಪ. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈ ಕೃತಿ ಧನ ಸಹಾಯ ಪಡೆದಿದೆ. ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಡಾ. ನಟರಾಜ ಹುಳಿಯಾರ್ ‘ಲಯ, ಶ್ರದ್ಧೆ, ಹಸಿವು, ಅಸ್ತಿತ್ವದ ಪರಿಕಲ್ಪನೆಗಳನ್ನು ಕನ್ನಡ ಸಂಶೋಧನಾ ವಲಯದಲ್ಲಿ ಹೆಚ್ಚು ಗಂಭೀರವಾಗಿ ಚರ್ಚಿತವಾಗದ ಕತೆಗಾರರ ಕತೆಗಳ ಮೂಲಕ ಗ್ರಹಿಸಲು ಯತ್ನಿಸುವುದು ಇಲ್ಲಿನ ವಿಶೇಷ. ಲಯದ ಪರಿಕಲ್ಪನೆಯ ಮೂಲಕ ರಾಘವೇಂದ್ರ ಪಾಟೀಲರ ಕತೆಗಳನ್ನು ಹಾಗೂ ಶ್ರದ್ಧೆಯ ಪರಿಕಲ್ಪನೆಯ ಮೂಲಕ ಬೋಳುವಾರರ ಕತೆಗಳನ್ನು ಚರ್ಚಿಸಿರುವ ಕ್ರಮ ವಿಭಿನ್ನವಾಗಿದೆ. ಬೋಳುವಾರರ ಕತೆಗಳನ್ನು ಕೇವಲ ಮುಸ್ಲಿಂ ಸಂವೇದನೆಯ ಆಥವಾ ಬಂಡಾಯದ ಆಶಯದ ಬೆನ್ನಲ್ಲೇ ಹಳೆಯ ರೀತಿಗಳಿಗಿಂತ ಶ್ರದ್ಧೆ ಎಂಬ ಕೇಂದ್ರದ ಮೂಲಕ ಈ ಕತೆಗಳನ್ನು ಚರ್ಚಿಸಿರುವ ರೀತಿ ಕುತೂಹಲಕಾರಿಯಾಗಿದೆ’ ಎಂದು ಪ್ರಶಂಸಿಸಿದ್ದಾರೆ.

About the Author

ಆನಂದ ಋಗ್ವೇದಿ
(24 May 1974)

ಬರಹಗಾರ ಡಾ. ಆನಂದ್ ಋಗ್ವೇದಿ ಅವರು ಜನಿಸಿದ್ದು 1974ರ ಮೇ 24 ಚಿತ್ರದುರ್ಗ ಜಿಲ್ಲೆ ಗುಂಜಿಗನೂರಿನಲ್ಲಿ. ತಂದೆ-  ರಾಘವೇಂದ್ರ ರಾವ್ ತಿರುಮಲಾರಾಯ ಕುಕ್ಕವಾಡ, ತಾಯಿ ಜಿ.ಎಸ್. ಸುಶೀಲಾದೇವಿ ಆರ್. ರಾವ್. ವೃತ್ತಿಯಲ್ಲಿ ದಾವಣಗೆರೆಯ ಸರ್ಕಾರಿ (ಚಿಗಟೇರಿಯವರ ಸ್ಮಾರಕ) ಜಿಲ್ಲಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಪದವೀಧರರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.  ಕತೆ, ಕವಿತೆ, ಪ್ರಬಂಧ, ವಿಮರ್ಶೆ, ನಾಟಕ, ಸಂಶೋಧನೆ. . ಮೊದಲಾದ ಪ್ರಕಾರಗಳಲ್ಲಿ ಬರಹ.  ‘ಜನ್ನ ಮತ್ತು ಅನೂಹ್ಯ ಸಾಧ್ಯತೆ’, ‘ಮಗದೊಮ್ಮೆ ನಕ್ಕ ಬುದ್ಧ’ ‘ಕರಕೀಯ ಕುಡಿ’ ...

READ MORE

Related Books