
ವಿವಿಧ ಭಾಷೆಗಳಿಂದ ಆಯ್ದು ಅನುವಾದಿಸಿದ ಕತೆಗಳ ಸಂಕಲನ. ಈ ಸಂಕಲನದಲ್ಲಿ ಸಾಲಿಯವರು ರವೀಂದ್ರನಾಥ ಟ್ಯಾಗೋರ್, ಗುಡಿಪಾಟಿ ವೆಂಕಟಾಚಲಂ, ಅರ್ನೆಸ್ಟ್ ಹೆಮಿಂಗ್ವೆ, ಹರ್ನಾಂಡೋ ಟೆಲ್ಲೆಝ್, ಕರ್ತಾರ್ಸಿಂಗ್ ದುಗ್ಗಲ್, ದೇವರಕೊಂಡ, ಬಾಲಗಂಗಾಧರ ತಿಲಕ್, ಕಾಳಿಪಟ್ನಂ ರಾಮಾರಾವು, ಪೌಲ್ ಝಕಾರಿಯಾ, ಮಹೆಜಬಿನ್, ಮಹಮ್ಮದ್ ಖದೀರ್ ಬಾಬು, ಎಂಡ್ಗೂರಿ ಮಾನಸ ಅವರ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಡಾ. ನವೀನ್ ಹಳೆಮನೆ ಅವರು ’ಇಂಗ್ಲಿಷ್, ಕೊಲಂಬಿಯ, ಬಂಗಾಳಿ, ಪಂಜಾಬಿ, ಮಲಯಾಳಂ ಮತ್ತು ತೆಲುಗಿನ ಹನ್ನೊಂದು ವಿಶಿಷ್ಟ ಕಥ'ಗಳನ್ನು ತುಂಬಾ ಅಕ್ಕರೆಯಿಂದ ಇಲ್ಲಿ ಕನ್ನಡಕ್ಕೆ ತರಲಾಗಿದೆ. ಇಲ್ಲಿನ ಪ್ರತಿಯೊಂದು ಕಥೆಯ ವಸ್ತು ಮತ್ತು ಆಶಯಗಳು ಮೂಲಲೇಖಕರ ಅನನ್ಯ ಶೈಅಗೆ ಧಕ್ಕೆಯಾಗದಂತೆ, ಕನ್ನಡಕ್ಕೆ ಎಲ್ಲೂ ಅನ್ಯವೆನ್ನಿಸದ ಹಾಗೆ ಅನುವಾದಗೊಂಡಿವೆ. ಹಾಗೆಯೇ ದೇಶ-ಭಾಷೆ-ಕಾಲಗಳ ಎಲ್ಲೆ ಮೀರಿ ಎಲ್ಲೆಡೆ ಹರಡಿರುವ ಕಥನಾಕಾಶವು ಹಿಂಗೆ ಇಲ್ಲಿ ಕನ್ನಡದ ಕನ್ನಡಿಯಲ್ಲಿ ಪ್ರತಿಬಿಂಬಿತವಾಗಿದೆ. 'ಧರೆಗೆ ನಿದ್ರೆಯು ಇಲ್ಲ' ಎಂಬ ತನ್ನದೇ ಕಥಾಸಂಕಲನದಲ್ಲಿ ಒಂದರಂತೆ ಇನ್ನೊಂದಿಲ್ಲದ ನಿರೂಪಣಾ ಶೈಗಳ ಯಶಸ್ವಿ ಪ್ರಯೋಗದಿಂದ ಅಭಿಮಾನ ಹುಟ್ಟಿಸಿದ್ದ ದೋಸ್ತ ಸಾಲಿ, ಇಲ್ಲಿ ಕನ್ನಡಕ್ಕೆ ತಂದಿರುವ ಅನ್ಯ ಭಾಷೆಯ ಮನಸೂರೆಗೊಳ್ಳುವ ಕಥೆಗಳಿಗೂ ತನ್ನ ತೀವ್ರ ಭಾವುಕತೆಯ (ಅವನ ಪಕ್ಕಾ ಗುಣವೇ ಅದು) ಸ್ಪರ್ಶವಿತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2025 Book Brahma Private Limited.