ಕವಿತಾ ಕಿನ್ನರಿ

Author : ಬಾಗೂರು ಮಾರ್ಕಾಂಡೇಯ

Pages 56

₹ 40.00




Year of Publication: 2008
Published by: ಸಪ್ನ ಬುಕ್ ಹೌಸ್
Address: ಕರ್ನಾಟಕ ಬುಕ್ ಏಜೆನ್ಸಿ, ತುಂಗಾ ಕಾಂಪ್ಲೆಕ್ಸ್, ಗಾಂಧೀನಗರ, ಬೆಂಗಳೂರು-560 09
Phone: 08040114455

Synopsys

ಕವಿ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಿಗಾಗಿ ಬರೆದ ಕವಿತಾ ಸಂಕಲನ-ಕವಿತಾ ಕಿನ್ನರಿ. 35 ಕವಿತೆಗಳಿದ್ದು, ಪ್ರತಿ ಕವಿತೆಗೂ ಚಿತ್ತಾಕರ್ಷಕವಾದ ಚಿತ್ರವನ್ನು ಬಿಡಿಸಿದ್ದು ಗಮನ ಸೆಳೆಯುತ್ತದೆ. .‘..ಅನೇಕತೆಯಲಿ ಏಕತೆ ಇದುವೆ ಭಾವೈಕ್ಯತೆ ಭವ್ಯ ಭಾರತ ಜನತೆ ವಿಶ್ವಮಾನ್ಯತೆ ಘನತೆ...’ ಎನ್ನುತ್ತ ಕೊನೆಯಲ್ಲಿ ಅವನಿವನು ಬೇರೆಂದು ಭೇದವೆಣಿಸದ ಹಣತೆ ಅಣ್ಣ ತಮ್ಮ ನಮ್ಮ ಬಳಗ ಎಲ್ಲ ಒಂದೇನ್ನುವ ಧನ್ಯತೆ...’ ಎನ್ನುವ ದೇಶಭಕ್ತಿ ಗೀತೆಯು ಹಾಗೂ ‘....ನೊಡ ಬನ್ನಿ ಗೆಳೆಯರೇ ಹಾಡ ಬನ್ನಿ ಗೆಳತಿಯರೇ ನಾಡತುಂಬ ಒಲುಮೆಯಿಂದ ದೇಶಭಕ್ತಿ ಗೀತೆಯ...’ ಹೀಗೆ ಕವಿತೆಗಳು ಮಕ್ಕಳ ಮನಸ್ಸನ್ನು ಎಚ್ಚರದಿಂದ ಮುಗೊಳಿಸುತ್ಳೀತಾ ಹಾಗೂ ಐಕ್ಸುಯತೆಯ ಮತ್ತ್ತಾರವನ್ನು ಪಠಿಸುತ್ತಾ ಸಾಗುತ್ತವೆ. 

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books