ಕೆಂಡ ಮಂಡಲ

Author : ಮೂಡ್ನಾಕೂಡು ಚಿನ್ನಸ್ವಾಮಿ

Pages 68

₹ 10.00




Year of Publication: 1996
Published by: ರಂಗಚೇತನ ಪ್ರಕಾಶನ
Address: 94/165, 9ನೇ ಕ್ರಾಸ್, 1ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018

Synopsys

‘ಕೆಂಡ ಮಂಡಲ’ ಮೂಡ್ನಾಕೂಡು ಚಿನ್ನಸ್ವಾಮಿ ಅವರ ನಾಟಕ ಕೃತಿ. ಈ ಕೃತಿಗೆ ಶೂದ್ರ ಶ್ರೀನಿವಾಸ ಅವರ ಬೆನ್ನುಡಿಯ ಮಾತುಗಳಿವೆ. ಕೃತಿ ಮತ್ತು ಕೃತಿಕಾರರ ಬಗ್ಗೆ ಬರೆಯುತ್ತಾ 'ಚಿನ್ನಸ್ವಾಮಿಯವರು ಮೂಲಭೂತವಾಗಿ ಕವಿಯ ಮನಸ್ಸಿನವರು. ಕಾವ್ಯದಲ್ಲಿ ಗಂಭೀರವಾಗಿ ಕೆಲಸ ಮಾಡಬೇಕು ಎಂಬ ತುಡಿತವನ್ನು ಪಡೆದವರು. ಯಾವುದೇ ಭಾಷೆಯ ಗದ್ಯಕ್ಕೆ ಸೊಗಸು ಬರುವುದು ಕಾವ್ಯದ ಮನಸ್ಸು ಲೇಖನಿಗಿದ್ದಾಗ, ಈ ದೃಷ್ಟಿಯಿಂದ ಗೆಳೆಯ ಚಿನ್ನಸ್ವಾಮಿಯವರ ಕೆಂಡ ಮಂಡಲ ನಾಟಕಕ್ಕೆ ಆ ರೀತಿಯ ಕಾವ್ಯ ಮಮತೆಯ ಸೊಗಸಿದೆ. ಇದು ಅವರ ಮೊದಲನೆಯ ನಾಟಕ. ವಸ್ತು: ಸಾಮಾಜಿಕ ಬದ್ಧತೆಯ ಚೌಕಟ್ಟಿನಲ್ಲಿ ನಿರೂಪಿತವಾಗಿರುವಂಥದ್ದು, ಮೇಲ್ನೋಟಕ್ಕೆ ಹಸಿಹಸಿಯಂತೆ ಕಾಣಿಸಿದರೂ ಚಿನ್ನಸ್ವಾಮಿಯವರು ವಸ್ತುವನ್ನು ನೋಡಿರುವ ಕ್ರಮದಲ್ಲಿ ಹೊಸತನವಿದೆ. ಜಾತಿಬದ್ಧ ಸಮಾಜ ವ್ಯವಸ್ಥೆಯಲ್ಲಿ ವಿದ್ಯಾವಂತರ ನಡುವೆಯೂ ಘಟಿಸಬಹುದಾದ ಸೂಕ್ಷ್ಮ ಸಮಸ್ಯೆಗಳನ್ನು ಚೆನ್ನಾಗಿ ಗ್ರಹಿಸಿದ್ದಾರೆ' ಎನ್ನುತ್ತಾರೆ ಶೂದ್ರ ಶ್ರೀನಿವಾಸ. ಕೆಂಡಮಂಡಲವನ್ನು ಚಿನ್ನಸ್ವಾಮಿಯವರು ತುಂಬು ಉತ್ಸಾಹದಿಂದ ಬರೆದಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಮೂಡ್ನಾಕೂಡು ಚಿನ್ನಸ್ವಾಮಿ
(22 September 1954)

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...

READ MORE

Related Books