ಕೆರೆ-ಬಾವಿ (ಹೈದರಾಬಾದ್ ಕರ್ನಾಟಕ ಸಾಲು: ಸಂಪುಟ-3)

Author : ಬಸವರಾಜ ಕೋಡಗುಂಟಿ

Pages 144

₹ 120.00




Year of Publication: 2018
Published by: ಬಂಡಾರ ಪ್ರಕಾಶನ
Address: ಮಸ್ಕಿ, ರಾಯಚೂರು
Phone: 9886407011

Synopsys

ಹಿಂದುಳಿದ ಪ್ರದೇಶ ಎಂತಲೇ ಹೆಸರಾಗಿರುವ ಹೈದರಾಬಾದ್ ಕರ್ನಾಟಕದ ಸಾಹಿತ್ಯ ಶ್ರೀಮಂತಿಕೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳನ್ನು ಬಸವರಾಜ ಕೋಡಗುಂಟಿ ಅವರು ಬರೆದಿದ್ದಾರೆ. ಈ ಸರಣಿಯಲ್ಲಿ ಊರು, ದರಗಾ, ಕೆರೆ, ಬಾವಿ, ಶಾಸನ, ಕೋಟೆ, ರಾಜಮನೆತನ, ಕನ್ನಡ, ಬುಡಕಟ್ಟು ಮೊದಲಾದವು. ವಿಶಿಷ್ಟವಾದ ಎಲ್ಲಮ್ಮ, ಅಲ್ಲಮಪ್ರಭು ಮೊದಲಾದ ಸಂಪುಟಗಳು ಇವೆ.

ನೀರಿನ ಕೇಂದ್ರಗಳಾದ ಕೆರೆ ಮತ್ತು ಬಾವಿಗಳು ಮನುಷ್ಯ ಬದುಕಿನ ಅವಶ್ಯಕತೆಯ ಭಾಗಗಳು. ಸಮಾಜದ ಭಾಗಗಳಾದ ಧರ್ಮ, ರಾಜಕೀಯ, ಆರ್ಥಿಕತೆ, ಸಂಸ್ಕೃತಿ ಹೀಗೆ ಎಲ್ಲ ವಲಯಗಳನ್ನೂ ಒಳಗೊಂಡಿವೆ. ಅದರೊಟ್ಟಿಗೆ ಪ್ರಾಕೃತಿಕ ಮಹತ್ವವನ್ನೂ ಹೊಂದಿರುತ್ತವೆ. ಹೀಗೆ ವಿವಿಧ ಆಯಾಮಗಳಿಂದ ಕೆರೆ-ಬಾವಿಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ. ಸಾಹಿತ್ಯ, ಕಲೆ, ಶಿಲ್ಪಕಲೆ ಹೀಗೆ ವಿವಿಧ ವಲಯಗಳನ್ನೂ ಇವು ಆವರಿಸಿಕೊಳ್ಳುತ್ತವೆ. ಬದುಕಿನ ಸಂಕೀರ್ಣತೆಯನ್ನು ಇವು ಒಳಗೊಂಡಿವೆ. ಈ ಎಲ್ಲ ಆಯಾಮಗಳನ್ನು ಚರ್ಚಿಸುವ ಭಿನ್ನ ಲೇಖನಗಳು ಈ ಪುಸ್ತಕದಲ್ಲಿ ಇವೆ.

About the Author

ಬಸವರಾಜ ಕೋಡಗುಂಟಿ

ಬಸವರಾಜ ಕೋಡಗುಂಟಿ ಇವರು ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುಲ್ಬರ್ಗದಲ್ಲಿ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾಷಾ ವಿಜ್ಞಾನದಲ್ಲಿ ಆಸಕ್ತಿ ಇರುವ ಇವರು ಕನ್ನಡ ಮಾತಿನ ಇತಿಹಾಸ, ದ್ರಾವಿಡ ಮಾತಿನ ಮನೆತನ, ವಿಬಕ್ತಿ ಮೊದಲಾದ ಕ್ಶೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಕನ್ನಡ ವಿಬಕ್ತಿ ರೂಪಗಳ ಅಯ್ತಿಹಾಸಿಕ ಬೆಳವಣಿಗೆ, ಮಸ್ಕಿ ಕನ್ನಡದಾಗ ವಿಬಕ್ತಿ ರೂಪಗಳು, ಮಾತೆಂಬುದು, ಬಾಶಿಕ ಕರ್ನಾಟಕ. ಇತರ ಕೃತಿಗಳೆಂದರೆ ಭಾಷಾ ವಿಶ್ಲೇಷಣೆ, ಊರು, ಹೈದರಾಬಾದ್ ಕರ್ನಾಟಕ, ಕರ್ನಾಟಕದ ಮಾತುಗಳು, ದರಗಾ, ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳು-6 (ಊರು, ಕೋಟೆ, ಶಾಸನ, ಕೆರೆ-ಬಾವಿ, ಕನ್ನಡ, ದರಗಾ) ಮುಂತಾದವು.  ...

READ MORE

Related Books