ಖಲೀಲ್ ಗಿಬ್ರಾನ್ ಪ್ರೇಮಪತ್ರಗಳು

Author : ಕಸ್ತೂರಿ ಬಾಯಿರಿ

Pages 186

₹ 120.00




Year of Publication: 2014
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ವಿಶ್ವ ಸಾಹಿತ್ಯದಲ್ಲಿ ಖಲೀಲ್ ಗಿಬ್ರಾನ್‌ನಷ್ಟು ಕಾಡುವ ಸೃಜನಶೀಲ ಮತ್ತೊಬ್ಬನಿಲ್ಲ. ಕವಿತೆಯಂತೆ ಇರುವ ಚಿತ್ರಗಳು- ಚಿತ್ರಗಳಂತೆ ಇರುವ ಕವಿತೆಗಳನ್ನು ಬರೆದವನು ಅವನು. ಜೊತೆಗೆ ತತ್ವಜ್ಞಾನದ ಮೆರಗು. ಹಾಗೆಂದೇ ಅವನ ಹೆಚ್ಚು ಹೆಚ್ಚು ಕೃತಿಗಳು ಜಗತ್ತಿನ ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಳ್ಳುತ್ತವೆ. ಅವನ ’ಪ್ರಾಫೆಟ್’ ಓದದವರೇ ಇಲ್ಲ ಎನ್ನುವಷ್ಟು ಕೃತಿ ಜನಪ್ರಿಯ.

ಖಲೀಲ್‌ ಗಿಬ್ರಾನ್‌ ತನ್ನ ಪ್ರೇಯಸಿ ಮಯ್‌ಗೆ (ಮೇರಿ ಹಸ್ಕೆಲ್‌) ಬರೆದ ಪ್ರೇಮ ಕವಿತೆಗಳ ಗುಚ್ಛ ’ಖಲೀಲ್‌ ಗಿಬ್ರಾನ್ ಪ್ರೇಮ ಪತ್ರಗಳು’. ಪದ್ಯದ ಸೊಬಗಲ್ಲಿ ಗದ್ಯವನ್ನು ಹೆಣೆಯುವ ಕವಯತ್ರಿ ಕಸ್ತೂರಿ ಬಾಯರಿ ಇದನ್ನು ಅನುವಾದಿಸಿದ್ದಾರೆ.

About the Author

ಕಸ್ತೂರಿ ಬಾಯಿರಿ
(27 April 1956)

ಕಾವ್ಯಾತ್ಮಕ ನೇಯ್ಕೆಯಲ್ಲಿ ಕತೆ ಬರೆಯುವ ಕಸ್ತೂರಿ ಬಾಯರಿ ಭರವಸೆಯ ಕತೆಗಾರ್ತಿ. ಅವರ ಕತೆಗಳು ಪ್ರಜಾವಾಣಿ, ಸಂಕ್ರಮಣ ಬಹುಮಾನ ಪಡೆದುಕೊಂಡಿವೆ. ದಟ್ಟ ವಿಷಾದ ಮತ್ತು ಮಡುಗಟ್ಟಿದ ನೋವಿನ ಜಿನುಗುವಿಕೆಯ ಭಾವದಲ್ಲಿ ಕತೆ ಹೆಣೆಯುವ ಅವರು ಸೂಕ್ಷ್ಮ ಮನಸಿನ ಕವಯಿತ್ರಿಯೂ ಆಗಿದ್ದಾರೆ. ಅನುವಾದ ಕಾರ್ಯದಲ್ಲೂ ತುಂಬ ಕೆಲಸ ಮಾಡಿದ್ದಾರೆ. ಕರಾವಳಿಯ ಉಡುಪಿ ಜಿಲ್ಲೆಯ ಸಾಸ್ತಾನದಲ್ಲಿ ಜನಿಸಿದ ಅವರು ಉತ್ತರ ಕರ್ನಾಟಕದ ಬಾದಾಮಿಯಲ್ಲಿ ಬೆಳೆದು, ಅಲ್ಲಿಯೇ ವಾಸಿಸುತ್ತಿದ್ದಾರೆ. ಕಾನೂನು ಪದವೀಧರರಾಗಿರುವ ಅವರು ಒಂದು ಶಾಲೆಯ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ.  ಥಾ ಸಂಕಲನ, ಕವನ ಸಂಕಲನ, ಪ್ರಬಂಧ ಸಂಕಲನ ಹೀಗೆ ಅವರ ಹತ್ತಕ್ಕೂ ಹೆಚ್ಚು ಪುಸ್ತಕಗಳು ...

READ MORE

Excerpt / E-Books

ಮಯ್‌, 

ಹಗಲುರಾತ್ರಿಯನ್ನು ಒಂದುಗೂಡಿಸುವ ಒಂದು ಎಳೆ: ಇಬ್ಬರ ನಡುವೆ ಉಂಟಾದ ಒಂದು ಬೆಸುಗೆ ಭೂತ-ವರ್ತಮಾನ-ಭವಿಷ್ಯತ್ಕಾಲವನ್ನು ಒಂದುಗೂಡಿಸುತ್ತದೆ. ಇಂತಹ ಒಂದು ಬೆಸುಗೆಯಲ್ಲಿ ಖಾಸಗಿ ಭಾವಗಳು ಗಹನವಾದ, ಅಮೂಲ್ಯವಾದ ಕನಸುಗಳನ್ನು ಹುಟ್ಟು ಹಾಕಿರುತ್ತವೆ.

ಇಂತಹ ಒಂದು ಭಾವ ಹರಿತವಾದ ನೋವನ್ನು ಹುಟ್ಟು ಹಾಕಿರುತ್ತದೆ. ಅದು ಎಂದೂ ಮಾಯುವುದಿಲ್ಲ. ಹಂಚಲು ಬರುವುದಿಲ್ಲ. ಯಾವುದೇ ವೈಭವ, ಋಷಿ, ಕಲ್ಪನೆ, ತಿಳುವಳಿಕೆ ಅದನ್ನು ಮುಟ್ಟಲಾರವು. ಅವು ಬೇರೆಯವರನ್ನು ಸ್ಪರ್ಶಿಸಲಾರವು. ನನ್ನೆಲ್ಲಾ ಗುಟ್ಟುಗಳನ್ನು ನಿನ್ನಲ್ಲಿ ಮಾತ್ರ ಹೇಳಿಕೊಳ್ಳಬಲ್ಲೆ, ನನಗೆ ಜೀವನ ಅವಳನ್ನು ಉಡುಗೊರೆಯಾಗಿ ಕೊಟ್ಟಿದೆ. ನಾನು ನನಗೆ ತೀರ ಹತ್ತಿರವಾದ ವಿಷಯಗಳನ್ನು ಮಾತ್ರ ಈ ಪತ್ರಗಳ ಮುಖಾಂತರ ಅವಳಲ್ಲಿ ಹೇಳಿಕೊಳ್ಳುವೆ. ನಂತರ ಬೇಕಾದರೆ ಪತ್ರಕ್ಕೆ ಉರಿ ಹತ್ತಲಿ. ನಾನು ಚಿಂತಿಸುವುದಿಲ್ಲ. ನಾನು ನಿನ್ನಲ್ಲಿ ಬೇಡಿಕೊಳ್ಳುತ್ತೇನೆ ಗೆಳತಿ, ನೀನು ಯಾವುದನ್ನೂ ಹಚ್ಚಿಕೊಳ್ಳದೇ ಮುಕ್ತವಾಗಿ ಮನುಕುಲದ ದಾರಿಗಳ ಬಗ್ಗೆ ಬರೆ, ನೀನು ಮತ್ತು ನಾನು ಈ ಮನುಕುಲದ ವ್ಯಾಪಾರವನ್ನು, ವಿಸ್ತಾರವನ್ನು ಬಲ್ಲೆವು. ನಾವು ಒಂದು ಕ್ಷಣವನ್ನೂ ಈ ದಾರಿಯಿಂದ ಕಳೆದುಕೊಳ್ಳಬಾರದು. ಒಂದು ಚಿಕ್ಕ ವಿರಾಮವನ್ನೂ ಕಿರಣಗಳನ್ನು ದಿಟ್ಟಿಸಿನೋಡುವಲ್ಲಿ ತೆಗೆದುಕೊಳ್ಳಬಾರದು. ಎಲ್ಲವೂ ರಾತ್ರಿಯನ್ನು, ಹಗಲನ್ನು, ಕಾಲವನ್ನು ಮೀರಿದ ಸತ್ಯದ ಕ್ಷಣಗಳಾಗಬೇಕು.

ದೇವರು ನನ್ನ ಸಲುವಾಗಿ ನಿನ್ನ ಕಾಪಾಡಲಿ..

Related Books