ಕೋಹಿನೂರು

Author : ಬಿ. ವೆಂಕಟಾಚಾರ್ಯ

Pages 141

₹ 1.00




Year of Publication: 1921
Published by: ಬಿ.ವಿ. ನರಸಿಂಹೈಯ್ಯಂಗಾರ
Address: ಮೈಸೂರು

Synopsys

ಕೋಹಿನೂರು- ಬಂಗಾಳ ಮೂಲದ ಕಾದಂಬರಿ. ಅದನ್ನು ಬಿ.ವೆಂಕಟಾಚಾರ್ಯರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೊಗಲ್ ಸಾಮ್ರಾಟ ಅಕಬರ ಷಹಾನು ‘ಯಾವ ದಿನ ಮೊಗಲ್ ಸಾಮ್ರಾಟನು ಈ ವಿಸ್ತಾರವಾದ ಸಾಮ್ರಾಜ್ಯವನ್ನು ಆಳುವಲ್ಲಿ ಹಿಂದೂಗಳಿಗೂ -ಮುಸಲ್ಮಾನರಿಗೂ ಭೇದವನ್ನುತೋರಿಸುವನೋ ಆ ದಿನವೇ ಈ ರತ್ನ ಸಿಂಹಾಸನವು ಪುಡಿಚೂರ್ಣವಾಗಿ ಹೋಗುವುದೆಂದು ತಿಳಿಯಿರಿ’ ಎಂದು ಹೇಳಿದ್ದ. ಆ ದಿನಗಳು ಔರಂಬಜೇಬನ ಕಾಲಕ್ಕೆ ಬಂದವು. ಮೊಗಲ್ ಸಾಮ್ರಾಜ್ಯದ ಅಳಿವು ಆರಂಭವಾಯಿತು. ಈ ನಿಟ್ಟಿನಲ್ಲಿ ಸಾಗುವ ಐತಿಹಾಸಿಕ ವಸ್ತುವಿನ ಕಾದಂಬರಿ ಇದು.

About the Author

ಬಿ. ವೆಂಕಟಾಚಾರ್ಯ

ಅನುವಾದಕ, ಕಾದಂಬರಿಕಾರ ಬಿ. ವೆಂಕಟಾಚಾರ್ಯ ಅವರು ಕನ್ನಡಿಗರಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಕಾರಣರಾದವರು. ಚಾಮರಾಜನಗರ ತಾಲ್ಲೂಕು ಕೊಳ್ಳೆಗಾಲದಲ್ಲಿ 1845ರಲ್ಲಿ ಜನಿಸಿದ ಅವರು ಸಂಸ್ಕೃತ, ಕನ್ನಡ, ಇಂಗ್ಲಿಷ್ ಹಾಗೂ ಬಂಗಾಳಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಬಂಗಾಳಿ ಬರಹಗಾರ ಬಂಕಿಮಚಂದ್ರರ ಕಾದಂಬರಿಗಳನ್ನು ಕನ್ನಡ ಜನತೆಗೆ ಪರಿಚಯಿಸಿದವರಲ್ಲಿ ಇವರೇ ಮೊದಲಿಗರು. ಕನ್ನಡಿಗರ ವಾಚನ ಅಭಿರುಚಿಗಳು ಬೆಳೆಯಲು ಗಟ್ಟಿಯಾದ ತಳಹದಿ ಹಾಕಿದ ಅವರು ಅಪ್ರತ್ಯಕ್ಷ ಗುರುವಾದ ಈಶ್ವರಚಂದ್ರ ವಿದ್ಯಾಸಾಗರರ `ಭ್ರಾಂತಿವಿಲಾಸ'ವೇ ಅವರು ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದರು. ಇದು ಬಂಗಾಳಿಯಿಂದ ಕನ್ನಡಕ್ಕೆ ಅವರು ಅನುವಾದಿಸಿದ ಮೊದಲ ಗ್ರಂಥ. ಈ ಗ್ರಂಥವನ್ನು ಮದರಾಸು ವಿಶ್ವವಿದ್ಯಾಲಯ ಪಠ್ಯಪುಸ್ತಕವಾಗಿ ಅಂಗೀಕರಿಸಿದ್ದರಿಂದ ...

READ MORE

Related Books