ಕ್ರಾಂತಿ ಬಂತು ಕ್ರಾಂತಿ, ಗಿಳಿಯು ಪಂಜರದೊಳಿಲ್ಲ

Author : ಪಿ. ಲಂಕೇಶ್

Pages 67

₹ 40.00




Published by: ಲಂಕೇಶ ಪ್ರಕಾಶನ

Synopsys

ಪಿ.ಲಂಕೇಶರ ಎರಡು ನಾಟಕಗಳ ಸಂಗ್ರಹ ‘ಕ್ರಾಂತಿ ಬಂತು ಕ್ರಾಂತಿ, ಗಿಳಿಯು ಪಂಜರದೊಳಿಲ್ಲ’. ನಿಜವಾಗಿ ಮನುಷ್ಯನ ದ್ವಂದ್ವ ಮತ್ತು ಆತ ಏನಾಗಿದಾನೋ ಅದನ್ನು ಸಂಪೂರ್ಣವಾಗಿ ಬದುಕಲಾರದ ಅನುಭವ ಕಟ್ಟಿಕೊಡುವ ಕ್ರಾಂತಿ ಬಂತು ಕ್ರಾಂತಿ. ಹಣದ ಹಿಂದೆ ಇರುವ ಜಗತ್ತು ಬದುಕಿನ ಹತ್ತಿರದಲ್ಲಿ ಇರದ ಜೀವನದ ಜಿಜ್ಞಾಸೆ ಗಿಳಿಯು ಪಂಜದಳೊಳಿಲ್ಲ ನಾಟಕದಲ್ಲಿದೆ.

About the Author

ಪಿ. ಲಂಕೇಶ್
(08 March 1935 - 25 January 2000)

ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್‌ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...

READ MORE

Related Books