ಕೃಷ್ಣವಿವರಗಳು

Author : ಜಿ.ಟಿ. ನಾರಾಯಣರಾವ್

Pages 274

₹ 30.00




Year of Publication: 1997
Published by: ಅತ್ರಿ ಬುಕ್ ಸೆಂಟರ್
Address: ಶರಾವತಿ ಕಟ್ಟಡ, ಬಲ್ಮಠ ರೋಡ್, ಮಂಗಳೂರು. 575001

Synopsys

ಒಂದೆಡೆ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳಲು, ಅದಕ್ಕೊಂದು ಸೈದ್ಧಾಂತಿಕ ಚೌಕಟ್ಟು ಹಾಕಲು ಯತ್ನಿಸುತ್ತಲೇ ಇರುವ ಮನುಷ್ಯ; ಮತ್ತೊಂದೆಡೆ ಮನುಷ್ಯನ ನಿರ್ಧಾರಗಳನ್ನು ತಲೆಕೆಳಗು ಮಾಡುವ ಪ್ರಕೃತಿ. ಇದೊಂದು ರೀತಿ ನಿಸರ್ಗ ಮತ್ತು ಮಾನವನ ನಡುವಿನ ಹಾವು ಏಣಿ ಆಟ. 

ಅಂತಹ ಸ್ವಾರಸ್ಯಗಳನ್ನು ಖಗೋಳ ವಿಜ್ಞಾನದ ಮೂಲಕ ಹೇಳುವ ಯತ್ನ ಜಿಟಿನಾ ಅವರದು. ಅವರು ನಿಸರ್ಗದ ಅಗೋಚರ ಕಾಯಗಳ ಬಗೆಗಿನ ಮಾಹಿತಿಯನ್ನು ’ಕೃಷ್ಣ ವಿವರಗಳು’ ಕೃತಿಯಲ್ಲಿ ವಿವರಿಸಿದ್ದಾರೆ. ವಿಜ್ಞಾನದ ವರ್ಣನೆಯಿಂದ ನುಣುಚಿಕೊಳ್ಳುವ ಇವುಗಳ ಅಸ್ತಿತ್ವವನ್ನು ವಿಶ್ಲೇಷಿಸಿದ್ದಾರೆ. 

About the Author

ಜಿ.ಟಿ. ನಾರಾಯಣರಾವ್
(30 January 1926)

ಜಿ.ಟಿ.ನಾರಾಯಣ ರಾವ್ ಅವರು ಪುತ್ತೂರಿನ ಸಮೀಪದ ಮರಿಕೆ ಗ್ರಾಮದಲ್ಲಿ 30-01-1926ರಂದು ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಎನ್.ಸಿ.ಸಿ. ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತ ಹಾಗೂ ಕನ್ನಡ ಅಭಿಜಾತ ವಾಙ್ಙಯ ಕುರಿತು ಅಪಾರ ಆಸಕ್ತಿ ಹೊಂದಿದ್ದಾರೆ, ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪನ ಮತ್ತೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸಿ.ವಿ. ರಾಮನ್‌ರನ್ನು ಬೆಂಗಳೂರಿನಲ್ಲಿಯೂ, ಎಸ್. ಚಂದ್ರಶೇಖರ್‌ರನ್ನು ಚಿಕಾಗೋದಲ್ಲಿಯೂ ಭೇಟಿಮಾಡಿ ವೈಜ್ಞಾನಿಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಕನ್ನಡಕ್ಕೆ ವಿಪುಲ ಸ್ವತಂತ್ರ ವೈಜ್ಞಾನಿಕ ಕೃತಿಗಳನ್ನೂ, ಕೆಲವು ...

READ MORE

Related Books