ಕ್ಷಣ ಹೊತ್ತು ಆಣಿ ಮುತ್ತು ಭಾಗ-7

Author : ಎಸ್. ಷಡಕ್ಷರಿ

Pages 150

₹ 110.00




Year of Publication: 2019
Published by: ರಮಣಶ್ರಿ ಪ್ರಕಾಶನ
Address: ಬೆಂಗಳೂರು - 25

Synopsys

ಕ್ಷಣ ಹೊತ್ತು ಆಣಿ ಮುತ್ತು -7 ಎಸ್‌. ಷಡಕ್ಷರಿ ಅವರ ಅಂಕಣ ಬರೆಹಗಳು. ನೀತಿಯನ್ನು ಭೋದನೆಯಂತೆ ಹೇಳದೆ ನವಿರಾಗಿ ಪ್ರಸ್ತತ ಪಡಿಸಿರುವ ಕತೆಗಳಿವೆ. ಮನಕ್ಕೆ ಮುದ ನೀಡುವ ಇವು ದೊಡ್ಡವರನ್ನು ಆಕರ್ಷಿಸುತ್ತಾ, ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಯುತ ವಿಚಾರಗಳನ್ನು ತಲುಪಿಸುತ್ತವೆ. ಇದು ಸಾವಿರದ, ಸಾವು ಇರದ ಪುಸ್ತಕ ಎಂದು ಚೆನ್ನವೀರ ಕಣವಿ ಕರೆದಿದ್ದಾರೆ. ಹೊಸ ಹೊಸ ಓದುಗರನ್ನು ಹುಟ್ಟುಹಾಕುತ್ತಾ ಸಾಗುತ್ತಿದೆ.

About the Author

ಎಸ್. ಷಡಕ್ಷರಿ

ಬರೆಹಗಾರ ಎಸ್‌. ಷಡಕ್ಷರಿ ಅವರು ತಮ್ಮ ಸಣ್ಣ ಕತೆಗಳ ಮೂಲಕ ಕನ್ನಡಿಗರ ಮನೆ ತಲುಪಿ ಯಶ ಸಾಧಿಸಿದವರು. ರಮಣಶ್ರೀ ಹೋಟೆಲ್ ಮತ್ತು ಸಮೂಹ ಉದ್ಯಮದ ಮುಖ್ಯಸ್ಥರಾಗಿದ್ದಾರೆ. ರಮಣಶ್ರೀ ಉದಯಶಾಲೆಯ ಮುಖ್ಯಸ್ಥರಾಗಿದ್ದಾರೆ.  ವ್ಯಕ್ತಿತ್ವಕ್ಕೆ ಸಂಬಂಧಸಿದಂತೆ ಹಲವಾರು ಪುಸ್ತಕಗಳನ್ನು ರಚಿಸಿ, ಬೋಧನಾ ತರಬೇತಿಗಳನ್ನು ನಿರ್ವಹಿಸಿದ್ದಾರೆ. ‘ಕ್ಷಣ ಹೊತ್ತು ಆಣಿ ಮುತ್ತು’ ಅಂಕಣದ ಮೂಲಕ ಜನಮಾನಸಕ್ಕೆ ತಲುಪಿಸಿ, ಪುಟ್ಟ ನವಿರಾದ ನೀತಿ ಕತೆಗಳೊಂದಿಗೆ ಸಾಮಾಜಿಕ ಸ್ವಾಸ್ಥಕ್ಕಾಗಿ ಶ್ರಮಿಸುತ್ತಿರುವವರು. ಹಾಸ್ಯ ಬರೆಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಅವರ ‘ಕ್ಷಣ ಹೊತ್ತು ಆಣಿ ಮುತ್ತು’ ಅಂಕಣ ಬರೆಹಗಳು ಏಳು ಸಂಪುಟಗಳಲ್ಲಿ ಹೊರ ಬಂದಿವೆ. ಅವರ ‘ಕ್ಷಣ ಹೊತ್ತು ...

READ MORE

Reviews

ಕ್ಷಣ ಹೊತ್ತು ಆಣಿ ಮುತ್ತು-7-ಪ್ರಜಾವಾಣಿ

ಷಡಕ್ಷರಿ ಟೈಮ್!

ಕತೆಗಳ ಮೂಲಕ ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವವರು ಎಸ್. ಷಡಕ್ಷರಿ. ಅವರ ಕ್ಷಣಹೊತ್ತು ಆಣಿಮುತ್ತು ಕನ್ನಡದಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಪುಸ್ತಕಗಳ ಎಲಲ್ಲಿ ಉತ್ತುಂಗದಲ್ಲಿದೆ. ಪತ್ರಿಕೆಗೆ ನಿತ್ಯವೂ ಅಂಕಣ ಬರೆದುಕೊಂಡು ಬಂದಿರುವ ಕ್ಷಣ ಹೊತ್ತು - ಷಡಕ್ಷರಿ, ಕಳದ ಆನೇಕ ವರ್ಷಗಳಲ್ಲಿ ಆಣಿ ಮುತ್ತು ಪತ್ರಿಕೆಗೆ ಬರೆದ ಅಂಕಣಗಳನ್ನು ಸಂಗ್ರಹಿಸಿ ಕ್ಷಣಹೊತ್ತು ಮಾಲಿಕೆಯ ಏಳನೆಯ ಪುಸ್ತಕ ಹೊರತಂದಿದ್ದಾರೆ. ಮೊದಲ ಮುದ್ರಣದಲ್ಲೇ 5000 ಪ್ರತಿಗಳನ್ನು ಮುದ್ರಿಸುವ ಕನ್ನಡದ ಏಕೈಕ ಲೇಖಕರೆಂದರೆ ಇವರೇ. 166 ಪುಟ, 100 ರುಪಾಯಿ, ಚೆಂದದ ಮುದ್ರಣ, ಒಂದೇ ಒಂದು ಅಚ್ಚಿನ ಇಲ್ಲದೇ ಇರುವುದು ಈ ಪುಸ್ತಕದ ಹೆಗ್ಗಳಿಕೆ. ನೀತಿಯನ್ನು ಶುಷ್ಕವಾದ ಬೋಧನೆಯ ರೂಪದಲ್ಲಿ ಹೇಳುವ ಬದಲು ಸ್ವಾರಸ್ಯಕರ ಕಥಾರೂಪದಲ್ಲಿ ನಿರೂಪಿಸಿರುವುದರಿಂದ ಈ ಪುಸ್ತಕ ಹೆಚ್ಚು ಆಕರ್ಷಕವೂ - ಅರ್ಥಗರ್ಭಿತವೂ ಆಗಿದೆ ಎಂದು ಎಸ್ ಎಲ್ ಭೈರಪ್ಪ ಇದನ್ನು ಮೆಚ್ಚಿಕೊಂಡಿದ್ದಾರೆ. ಇದು ಸಾವಿರದ, ಸಾವು ಇರದ ಪುಸ್ತಕ ಎಂದು ಚೆನ್ನವೀರ ಕಣವಿ ಕರೆದಿದ್ದಾರೆ. ಹೊಸ ಹೊಸ ಓದುಗರನ್ನು ಹುಟ್ಟುಹಾಕುತ್ತಾ ಮುಂದೆ ಸಾಗುತ್ತಿರುವ ಷಡಕ್ಷರಿ ಅವರ ಆಣಿಮುತ್ತಿನ ಕ್ಷಣ ಹೊತ್ತುಗಳು ಚಿರಾಯುವಾಗಲಿ.

ಕೃಪೆ: ಕನ್ನಡಪ್ರಭ, ಬಿಸಿಲು ನೆರಳು (2020 ಜನವರಿ 12)

Related Books