ಕ್ಷೇಮೇಂದ್ರನ ಕವಿ ಕಂಠಾಭರಣ

Author : ಕೆ.ಕೃಷ್ಣಮೂರ್ತಿ

Pages 72

₹ 50.00




Year of Publication: 2011
Published by: ಕೆ. ಕೃಷ್ಣಮೂರ್ತಿ ಸಂಸ್ಕೃತ ಸಂಶೋಧನಾ ಕೇಂದ್ರ
Address: #460, 39ನೇ ಅಡ್ಡರಸ್ತೆ, 9ನೇ ಮುಖ್ಯರಸ್ತೆ, ಜಯನಗರ, ಬೆಂಗಳೂರು
Phone: 9448553797

Synopsys

ಸ್ವತಃ ಕವಿಯಾದ ಡಾ. ಕೆ. ಕೃಷ್ಣಮೂರ್ತಿ ಅವರು ಸಂಸ್ಕೃತ ಕವಿ ಕ್ಷೇಮೇಂದ್ರನ ಕೃತಿ ‘ಕಂಠಾಭರಣ’ವನ್ನು ಅದ್ಭುತವಾಗೇ ಕನ್ನಡಿಕರಿಸಿದ್ದಾರೆ. ಕಾವ್ಯ ರಚನೆಯ ರಹಸ್ಯವನ್ನು ಹಂತಹಂತವಾಗಿ ತೆರೆದಿಡುವ ರೀತಿಯೇ ಇಲ್ಲಿ ಅದ್ಭುತ ಕಲೆಯಾಗಿ ರೂಪು ಪಡೆದಿದೆ. ಕವಿ ಕಂಠಾಭರಣ ಕೃತಿಯಲ್ಲಿ ಐದು ಸಂಧಿಗಳಿವೆ. ಕವಿತ್ವ ಪ್ರಾಪ್ತಿ, ಭಾಷಾ ಪ್ರಭುತ್ವ, ಚಮತ್ಕಾರ ಕಥನ, ಗುಣದೋಷ ಹಾಗೂ ಪರಿಚಯ ಪ್ರಾಪ್ತಿ. ಇವುಗಳ ಮೂಲಕವೇ ಕಾವ್ಯ ಪಂಚಾಯತನದ ಪರಿಚಯ ಮಾಡಿಕೊಡುತ್ತಾನೆ. ಕಾವ್ಯವನ್ನು ಅಭ್ಯಾಸ ಮಾಡುವ ಪರಿ, ಆಲಿಸುವ ಪರಿ, ಗೋಷ್ಠಿಗಳನ್ನು ಭಾಗವಹಿಸಿ ಕಾವ್ಯವನ್ನು ಸಮರ್ಥಿಸಿಕೊಳ್ಳುವ, ಸೂಕ್ತಿಯನ್ನು ಸಂಗ್ರಹಿಸಿ, ವಿವೇಚಿಸುವ ಬಗ್ಗೆ ಅತ್ಯಂತ ಸ್ಪಷ್ಟವಾಗಿ ವಿವರಿಸಿದ್ದಾನೆ. ಬಾಣ, ಕಾಳಿದಾಸ, ರಾಜಶೇಖರ ಹೀಗೆ ವಿವಿಧ ಕವಿಗಳ ಹೆಸರುಗಳನ್ನು ಉಲ್ಲೇಖಿಸಿ, ಗಜಶಾಸ್ತ್ರ, ರಸ ಔಚಿತ್ಯ, ತರ್ಕ ಪರಿಚಯ ಹೀಗೆ ವಿವಿಧ ಶಾಸ್ತ್ರ ಪರಿಚಯಗಳ ಅಗಾಧ ಪಾಂಡಿತ್ಯವನ್ನು ತೋರುವ ಈ ಕ್ಷೇಮೇಂದ್ರ, ಕಾವ್ಯ ಸಿದ್ಧಿಯ ಬಗೆಗೂ ತಿಳಿಸುತ್ತಾನೆ. ಇಂತಹ ಅಪೂರ್ವ ಜ್ಞಾನಗಳ ಸಂಗ್ರಹವಾಗಿ ಈ ಕೃತಿ ತನ್ನ ಹಿರಿಮೆ-ಗರಿಮೆಯನ್ನು ಕಾಯ್ದುಕೊಂಡಿದೆ.

About the Author

ಕೆ.ಕೃಷ್ಣಮೂರ್ತಿ

ಕೆ.ಕೃಷ್ಣಮೂರ್ತಿ- ಹುಟ್ಟಿದ್ದು ಹಾಸನ ಜಿಲ್ಲೆ ಕೇರಳಾಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ ಮತ್ತು ಎಂ.ಎ. ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಸರ್ವಪ್ರಾವಿಣ್ಯ. ಬೊಂಬಾಯಿ ವಿಶ್ವವಿದ್ಯಾಲಯದಿಂದ ಧ್ವಾನ್ಯಾಲೋಕ ಮತ್ತು ಅದರ ವಿಮರ್ಶೆ ಡಾಕ್ಟರೇಟ್ ಪದವಿ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕೆಲಸ. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಮುಖ್ಯಪುಸ್ತಕಗಳು ಧ್ವನ್ಯಾಲೋಕ ಮತ್ತು ಆನಂದವರ್ಧನನ ಕಾವ್ಯಮೀಮಾಂಸೆ, ಮಮ್ಮಟನ ಕಾವ್ಯ ಪ್ರಕಾಶ. ರಾಜಶೇಖರನ ಕಾವ್ಯ ಮೀಮಾಂಸೆ, ದಂಡಿಯ ಕಾವ್ಯದರ್ಶನ, ವಾಮನನ ಕಾವ್ಯಲಂಕರಸೂತ್ರವೃತ್ತಿ, ಕ್ಷೇಮೇಂದ್ರನ ಕವಿಕಂಠಾಭರಣ, ಔಚಿತ್ಯಚರ್ಚೆ, ಭಾಮಹನ ಕಾವ್ಯಾಲಂಕಾರ, ಹಾಗೆಯೇ ಇಂಗ್ಲಿಷಿನಲ್ಲಿ ವಕ್ರೋಕ್ತಿಜೀವಿತ, ಧ್ವನ್ಯಾಲೋಕ, ನಾಟ್ಯಶಾಸ್ತ್ರ ಮತ್ತು ಅಭಿನವ ಭಾರತಿ, ...

READ MORE

Related Books