ಕರಿನೀರ ರೌರವ

Author : ಗಿರಿಜಾ ಶಾಸ್ತ್ರಿ

Pages 180

₹ 90.00




Year of Publication: 2012
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019

Synopsys

ಕರಿನೀರ ರೌರವ ಕಾದಂಬರಿಯ ಮೂಲ ಹಿಂದೀ. ಇದನ್ನು ಕನ್ನಡಕ್ಕೆ ಲೇಖಕಿ ಗಿರಿಜಾ ಶಾಸ್ತ್ರಿ ಅವರು ಅನುವಾದಿಸಿದ್ದಾರೆ. ಹಿಂದಿಯಲ್ಲಿ ವಿನೋದ ದಾಮೋದರ ಸಾವರಕರರ ಕಾಳೇ ಪಾಣೇ ಕಾದಂಬರಿಯು ಇದಾಗಿದ್ದು, ಈ ಕೃತಿಯಲ್ಲಿ ಅಂಡಮಾನ್ ಕಾರಾಗೃಹ ವ್ಯವಸ್ಥೆಯ ಹಿನ್ನೆಲೆಯನ್ನೇ ವಸ್ತುವಾಗಿರಿಸಿಕೊಂಡ ಒಂದು ವೈಶಿಷ್ಟ್ಯಪೂರ್ಣ ಕಾದಂಬರಿ ಸಾವರಕರ್ ರಚಿಸಿದ ‘ಕಾಳೇ ಪಾಣೀ’. ಅಂಡಮಾನ್ ಬದುಕಿನ ಹತ್ತುಹಲವು ಮಗ್ಗುಲುಗಳ ಮತ್ತು ಹಲವಾರು ಜನರ ಜೀವನದ ಮೇಲೆ ಅದು ಬೀರಿದ ಪರಿಣಾಮ ಪರಂಪರೆಯ ಚಿತ್ರಣ ಇದರಲ್ಲಿದೆ. ಆಕಾರದಲ್ಲಿ ಕಾಲ್ಪನಿಕ ಕಥೆಯಾದರೂ ಈ ಕಾದಂಬರಿಯ ಮುಖ್ಯ ಎಳೆಗಳು ವಾಸ್ತವಾನುಭವದಿಂದ ಹೊಮ್ಮಿದವೇ. ಶೃಂಗಾರ, ವೀರ, ಕರುಣ ಮೊದಲಾದ ಎಲ್ಲ ರಸಗಳೂ ಈ ಕಾದಂಬರಿಯಲ್ಲಿ ಪ್ರದರ್ಶನಗೊಂಡಿವೆ. ಸಾವರಕರರ ಬದುಕು-ಬರಹಗಳಲ್ಲಿ ಆಸಕ್ತಿಯಿರುವ ಈ ಪೀಳಿಗೆಯ ಓದುಗರಿಗೆ ಅವರ ಈ ಕಾದಂಬರಿಯನ್ನು ಸಂಕ್ಷಿಪ್ತ ರೂಪದಲ್ಲಿಯಾದರೂ ಪರಿಚಯಿಸುವ ಆಶಯದಿಂದ ಸಿದ್ಧಗೊಂಡ ಅನುವಾದಿತ ಕನ್ನಡಾವೃತ್ತಿ – ’ಕರಿನೀರ ರೌರವ’.

About the Author

ಗಿರಿಜಾ ಶಾಸ್ತ್ರಿ
(16 September 1958)

ಗಿರಿಜಾ ಶಾಸ್ತ್ರಿ ಅವರು ಜನಿಸಿದ್ದು  1958 ಸೆಪ್ಟೆಂಬರ್ 16ರಂದು. ಮೂಲತಃ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮದವರು. ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಇವರು ಕನ್ನಡ ಬಳಗದ ಸ್ಮರಣ ಸಂಚಿಕೆ ಮುಂಬೆಳಕಿನ ಸಂಪಾದಕಿಯಾಗಿದ್ದರು. ಮುಂಬೈ ಲೇಖಕಿಯರ ಸಂಘದ ಸೂಜನಾಗೆ ’ಕಥೆ ಹೇಳೆ ಎಂಬ ಸಂಕಲನದ ಸಂಪಾದನೆ, ಮುಂಬೈ ಪತ್ರಿಕೆ ನೇಸರು ಸಂಪಾದಕಿಯಾಗಿದ್ದರು.  ಇವರು ಬರೆದ ಪ್ರಮುಖ ಕೃತಿಗಳೆಂದರೆ ಹೆಣ್ಣೊಬ್ಬಳ ದನಿ, ಕಥಾಮಾನಸಿ, ಆಧುನಿಕ ಕನ್ನಡ ಸಣ್ಣ ಕಥೆಗಳು, ಒಂದು ಸ್ತ್ರೀವಾದ ಅಧ್ಯಯನ ಮುಂತಾದವು ಇವರ ಪ್ರಮುಖ ಕೃತಿಗಳು. ಗಿರಿಜಾ ಶಾಸ್ತ್ರಿ ಅವರಿಗೆ ಹರಿಹರಶ್ರೀ ಪ್ರಶಸ್ತಿ, ಕುವೆಂಪು ಕಾವ್ಯ ಪ್ರಶಸ್ತಿ, ...

READ MORE

Related Books